ನವದೆಹಲಿ: ರಕ್ಷಾಬಂಧನದ ಸಂಭ್ರಮ ಎಲ್ಲೆಡೆ ಮನೆ ಮಾಡಿದೆ. ಕೊರೋನಾ ಕಾರಣದಿಂದ ಅನೇಕರಿಗೆ ತಮ್ಮ ಸಹೋದರನನ್ನು ಭೇಟಿಯಾಗಿ ರಕ್ಷೆ ಕಟ್ಟಲು ಈ ಬಾರಿ ಸಾಧ್ಯವಾಗಿಲ್ಲ. ಆದರೂ ಪರಸ್ಪರ ಸಾಮಾಜಿಕ ಜಾಲತಾಣಗಳ ಮೂಲಕ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರಿಗೂ ದೇಶದ ಸಹೋದರಿಯರು ರಕ್ಷಾಬಂಧನದ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ. ಆಧ್ಯಾತ್ಮಿಕ ನಾಯಕಿ ಮಾತಾ ಅಮೃತಾನಂದಮಯಿ ಅವರು ಮತ್ತು ದೇಶದ ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರು ಪ್ರಧಾನಿ ಮೋದಿಗೆ ಟ್ವೀಟ್ ಮೂಲಕ ಶುಭಾಶಯಗಳನ್ನು ಕೋರಿದ್ದಾರೆ.
“ಆದರಣೀಯ ನರೇಂದ್ರ ಮೋದಿ ಅವರೇ, ರಕ್ಷಾಬಂಧನದ ಶುಭ ದಿನದಂದು ನಿಮಗೆ ಪ್ರಣಾಮ ಸಲ್ಲಿಸುತ್ತೇನೆ. ಈ ಬಾರಿ ನನಗೆ ನಿಮಗೆ ರಕ್ಷೆಯನ್ನು ಕಳುಹಿಸಲು ಸಾಧ್ಯವಾಗಿಲ್ಲ, ಇದರ ಕಾರಣ ಏನು ಎಂಬುದು ಜಗತ್ತಿಗೆಯೇ ತಿಳಿದಿದೆ. ನೀವು ದೇಶಕ್ಕಾಗಿ ಸಾಕಷ್ಟು ಕೆಲಸ ಮಾಡಿದ್ದೀರಿ, ಒಳ್ಳೆಯ ಮಾತುಗಳನ್ನು ಆಡಿದ್ದೀರಿ. ಇದನ್ನು ದೇಶವಾಸಿಗಳು ಎಂದಿಗೂ ಮರೆಯಲಾರರು. ಇಂದು ಭಾರತದ ಲಕ್ಷಾಂತರ, ಕೋಟ್ಯಾಂತರ ಜನರ ಕೈಗಳು ರಕ್ಷೆಯನ್ನು ಕಟ್ಟಿಕೊಳ್ಳಲು ಮುಂದೆ ಬಂದಿವೆ. ಆದರೆ ರಾಖಿ ಕಟ್ಟುವುದು ಕಷ್ಟವಾಗಿದೆ. ಭಾರತವನ್ನು ನೀವು ಇನ್ನಷ್ಟು ಉತ್ತುಂಗಕ್ಕೇರಿಸಿ ಎಂಬುದು ನಮ್ಮ ಕೋರಿಕೆಯಾಗಿದೆ” ಎಂದು ಲತಾ ಮಂಗೇಶ್ಕರ್ ಅವರು ವಿಡಿಯೋ ಸಂದೇಶವನ್ನು ಮೋದಿಗೆ ನೀಡಿದ್ದಾರೆ.
“ಈಶ್ವರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಶೀರ್ವಾದ ಮಾಡಲಿ, ಅವರಿಗೆ ಸುರಕ್ಷತೆಯನ್ನು ಪ್ರದಾನಿಸಲಿ” ಎಂದು ಮಾತಾ ಅಮೃತಾನಂದಮಯೀ ಅವರೂ ಮೋದಿಗೆ ವಿಡಿಯೋ ಸಂದೇಶ ನೀಡಿದ್ದಾರೆ.
ಮಾತ್ರವಲ್ಲದೆ, ದೇಶದ ಅನೇಕ ಭಾಗಗಳಿಂದ ಪ್ರಧಾನಿ ನರೇಂದ್ರ ಮೋದಿಯವರಿಗೆ ರಕ್ಷಾಬಂಧನದ ಶುಭಾಶಯಗಳು ಹರಿದುಬಂದಿವೆ.
लता दीदी, रक्षा बंधन के इस शुभ अवसर पर आपका यह भावपूर्ण संदेश असीम प्रेरणा और ऊर्जा देने वाला है। करोड़ों माताओं-बहनों के आशीर्वाद से हमारा देश नित नई ऊंचाइयों को छुएगा, नई-नई सफलताएं प्राप्त करेगा। आप स्वस्थ रहें और दीर्घायु हों, ईश्वर से मेरी यही प्रार्थना है। @mangeshkarlata https://t.co/pDHg0y3fDT
— Narendra Modi (@narendramodi) August 3, 2020
Respected @Amritanandamayi Ji, I am most humbled by your special Raksha Bandhan greetings. It is my honour and privilege to work for our great nation.
Blessings from you, and from India’s Nari Shakti, give me great strength. They are also vital for India’s growth and progress. https://t.co/FoLQdjrxEi
— Narendra Modi (@narendramodi) August 3, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.