ನವದೆಹಲಿ: ಇದೇ ಮೊದಲ ಬಾರಿಗೆ ರೈಲ್ವೆ ಸಚಿವಾಲಯವು ಎಲ್ಲಾ ವಲಯಗಳು ಮತ್ತು ವಿಭಾಗಗಳಿಗೆ ಸಂಬಂಧಿಸಿದ 2,320 ಉನ್ನತ ಅಧಿಕಾರಿಗಳಿಗೆ ವರ್ಚುವಲ್ ನಿವೃತ್ತಿ ಕಾರ್ಯಕ್ರಮವನ್ನು ಆಯೋಜಿಸಿತು.
ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರು ಈ ಸಂದರ್ಭದಲ್ಲಿ, ಸಮರ್ಪಣೆಯೊಂದಿಗೆ ಸೇವೆಗಳನ್ನು ನಡೆಸಿದ ಮತ್ತು ರೈಲ್ವೆಗೆ ಅಮೂಲ್ಯವಾದ ಕೊಡುಗೆ ನೀಡಿ ನಿವೃತ್ತರಾದ ಉನ್ನತ ಸಿಬ್ಬಂದಿಯನ್ನು ಅಭಿನಂದಿಸಿದರು. ಸಮಾಜಕ್ಕೆ ಹೆಚ್ಚಿನ ಪ್ರಯೋಜನವನ್ನು ನೀಡುವ ಮತ್ತು ರಾಷ್ಟ್ರ ನಿರ್ಮಾಣದ ಪ್ರಕ್ರಿಯೆಯನ್ನು ಮತ್ತಷ್ಟು ಉತ್ಕೃಷ್ಟಗೊಳಿಸುವಂತಹ ಕಾರ್ಯಗಳನ್ನು ಮುಂದುವರಿಸಬೇಕೆಂದು ಅವರಲ್ಲಿ ಮನವಿ ಮಾಡಿಕೊಂಡರು.
ಈ ಕಾರ್ಯಕ್ರಮಕ್ಕೆ ಹಾಜರಾಗಿದ್ದಕ್ಕಾಗಿ ಮತ್ತು ಬೀಳ್ಕೊಡುಗೆ ಸಮಾರಂಭವನ್ನು ಸ್ಮರಣೀಯವನ್ನಾಗಿ ಮಾಡಿದ್ದಕ್ಕಾಗಿ ಸಿಬ್ಬಂದಿಗಳು ಗೋಯಲ್ ಅವರಿಗೆ ಧನ್ಯವಾದ ಅರ್ಪಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಗೋಯಲ್, ರೈಲ್ವೆಯನ್ನು ಉತ್ತಮ ರೈಲ್ವೆ ಮಾಡಲು ಅಧಿಕಾರಿಗಳು ನೀಡಿದ ಕೊಡುಗೆಯನ್ನು ಶ್ಲಾಘಿಸಿದರು. ಕೋವಿಡ್ ವಿರುದ್ಧದ ಹೋರಾಟದ ಸಮಯದಲ್ಲಿ ಉತ್ತಮ ಪ್ರಯತ್ನಗಳನ್ನು ಮಾಡಿದ ಸಿಬ್ಬಂದಿಯನ್ನು ಅವರು ಅಭಿನಂದಿಸಿದರು.
ಸ್ವಚ್ಚತೆಯನ್ನು ಉಲ್ಲೇಖಿಸಿದ ಅವರು, ರೈಲ್ವೆಯ ಸ್ವಚ್ಚತಾ ಅಭಿಯಾನ ಒಂದು ಸಣ್ಣ ಕ್ರಿಯೆಯಾಗಿದ್ದು ಅದು ಪರಿವರ್ತನೆಯ ದೊಡ್ಡ ಬದಲಾವಣೆಗೆ ಕಾರಣವಾಗಿದೆ. ಮಳೆ ನೀರು ಕೊಯ್ಲು, ಹಸಿ ತ್ಯಾಜ್ಯದಿಂದ ಗೊಬ್ಬರ ಉತ್ಪಾದನೆ, ರೈತರ ಸುಗ್ಗಿ ಉತ್ಪಾದನೆಯನ್ನು ಹೆಚ್ಚಿಸಲು ನವೀನ ಮಾರ್ಗಗಳ ಯೋಜನೆಯಂತಹ ಸಮಾಜದಲ್ಲಿ ಸ್ಪಷ್ಟವಾದ ಬದಲಾವಣೆಗಳನ್ನು ತರಬಲ್ಲ ಸಣ್ಣ ಕಾರ್ಯಗಳನ್ನು ಮುಂದುವರಿಸಬೇಕೆಂದು ಸಚಿವರು ನಿವೃತ್ತರನ್ನು ಕೋರಿದರು.
ಅಧಿಕಾರಿಗಳು ಮತ್ತು ಸಿಬ್ಬಂದಿಗಳು ರೈಲ್ವೆ ಸಚಿವರು ಮತ್ತು ರೈಲ್ವೆ ಖಾತೆ ರಾಜ್ಯ ಸಚಿವರೊಂದಿಗೆ ಸಂವಹನ ನಡೆಸಿದರು ಮತ್ತು ಅವರ ನಿವೃತ್ತಿ ಕಾರ್ಯವನ್ನು ಸ್ಮರಣೀಯ ನಿವೃತ್ತಿ ಕಾರ್ಯಕ್ರಮವನ್ನಾಗಿ ಮಾಡಿದ್ದಕ್ಕಾಗಿ ಧನ್ಯವಾದಗಳನ್ನು ಅರ್ಪಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.