ನವದೆಹಲಿ: ಅಗರಬತ್ತಿ ಉತ್ಪಾದನೆಯಲ್ಲಿ ಭಾರತವನ್ನು ಆತ್ಮ ನಿರ್ಭರ ಮಾಡುವ ನಿಟ್ಟಿನಲ್ಲಿ ಖಾದಿ ಮತ್ತು ಗ್ರಾಮೋದ್ಯಮ ಆಯೋಗ (ಕೆವಿಐಸಿ) ಪ್ರಸ್ತಾಪಿಸಿರುವ ವಿಶಿಷ್ಟ ಉದ್ಯೋಗ ಸೃಷ್ಟಿ ಕಾರ್ಯಕ್ರಮಕ್ಕೆ ಕೇಂದ್ರ ಎಂಎಸ್ಎಂಇ ಸಚಿವ ನಿತಿನ್ ಗಡ್ಕರಿ ಅನುಮೋದನೆ ನೀಡಿದ್ದಾರೆ.
ವರದಿಗಳ ಪ್ರಕಾರ, ಖಾದಿ ಅಗರಬತ್ತಿ ಆತ್ಮ ನಿರ್ಭರ ಮಿಷನ್ ಎಂದು ಹೆಸರಿಸಲಾದ ಈ ಕಾರ್ಯಕ್ರಮವು ದೇಶದ ವಿವಿಧ ಭಾಗಗಳಲ್ಲಿ ನಿರುದ್ಯೋಗಿ ಮತ್ತು ವಲಸೆ ಕಾರ್ಮಿಕರಿಗೆ ಉದ್ಯೋಗ ಸೃಷ್ಟಿಸುವ ಗುರಿಯನ್ನು ಹೊಂದಿದೆ.
ಪ್ರಾಯೋಗಿಕ ಯೋಜನೆಯನ್ನು ಶೀಘ್ರದಲ್ಲೇ ಪ್ರಾರಂಭಿಸಲಾಗುವುದು ಮತ್ತು ಯೋಜನೆಯ ಪೂರ್ಣ ಪ್ರಮಾಣದ ಅನುಷ್ಠಾನದ ನಂತರ, ಅಗರಬತ್ತಿ ಉದ್ಯಮದಲ್ಲಿ ಸಾವಿರಾರು ಉದ್ಯೋಗಗಳನ್ನು ಸೃಷ್ಟಿಸಲಾಗುವುದು ಎಂದು ವರದಿಗಳು ತಿಳಿಸಿವೆ.
ಯೋಜನೆಯಡಿಯಲ್ಲಿ, ಕೆವಿಐಸಿ ಯಶಸ್ವಿ ಖಾಸಗಿ ಅಗರಬತ್ತಿ ತಯಾರಕರ ಮೂಲಕ ಕುಶಲಕರ್ಮಿಗಳಿಗೆ ಸ್ವಯಂಚಾಲಿತ ಅಗರಬತ್ತಿ ತಯಾರಿಸುವ ಯಂತ್ರಗಳು ಮತ್ತು ಪುಡಿ ಮಿಶ್ರಣ ಯಂತ್ರಗಳನ್ನು ಒದಗಿಸಲಿದೆ. ಖಾಸಗಿ ಅಗರಬತ್ತಿ ಉತ್ಪಾದಕರು ವ್ಯವಹಾರ ಪಾಲುದಾರರಾಗಿ ಒಪ್ಪಂದಕ್ಕೆ ಸಹಿ ಹಾಕಲಿದ್ದಾರೆ.
ಸ್ಥಳೀಯ ಉತ್ಪಾದನೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಲಾಗಿರುವ ಹಿನ್ನೆಲೆಯಲ್ಲಿ, ಭಾರತೀಯ ತಯಾರಕರು ಸ್ಥಳೀಯವಾಗಿ ತಯಾರಿಸಿದ ಯಂತ್ರಗಳನ್ನು ಮಾತ್ರ ಖರೀದಿಸಲು ಕೆವಿಐಸಿ ನಿರ್ಧರಿಸಿದೆ. ಕೆವಿಐಸಿ ಯಂತ್ರಗಳ ವೆಚ್ಚಕ್ಕೆ ಶೇ 25 ರಷ್ಟು ಸಬ್ಸಿಡಿ ನೀಡಲಿದ್ದು, ಉಳಿದ 75 ಪ್ರತಿಶತದಷ್ಟು ವೆಚ್ಚವನ್ನು ಕುಶಲಕರ್ಮಿಗಳಿಂದ ಪ್ರತಿ ತಿಂಗಳು ಸುಲಭ ಕಂತುಗಳಲ್ಲಿ ವಸೂಲಾತಿ ಮಾಡಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.