ರಾಯ್ಪುರ: ಒಂದು ಕಡೆ, ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ‘ಭೂಮಿ ಪೂಜೆಗೆ’ ಸಿದ್ಧತೆಗಳು ಭರದಿಂದ ಸಾಗುತ್ತಿದೆ. ಮತ್ತೊಂದು ಕಡೆ ಛತ್ತೀಸ್ಗಢದ ಚಾಂದ್ಖುರಿಯಲ್ಲಿಯೂ ಸಂಭ್ರಮಾಚರಣೆ ನಡೆಯುತ್ತಿದೆ. ಚಾಂದ್ಖುರಿ ಭಗವಾನ್ ರಾಮನ ತಾಯಿಯ ತವರು ಮನೆ. ಅಂದರೆ ರಾಮನ ಅಜ್ಜಿ ಮನೆ ಎಂದು ಪರಿಗಣಿಸಲಾಗಿದೆ.
ಛತ್ತೀಸ್ಗಢ ಮುಖ್ಯಮಂತ್ರಿ ಭೂಪೇಶ್ ಬಾಗೇಲ್ ಅವರ ಸರ್ಕಾರವು ಈಗ ಚಾಂದ್ಖುರಿಯನ್ನು ಸುಂದರಗೊಳಿಸುವ ಯೋಜನೆಯನ್ನು ರೂಪಿಸಿದೆ.
ರಾಜ್ಯ ರಾಜಧಾನಿ ರಾಯ್ಪುರದ ಬಳಿ ಇರುವ ಚಾಂದ್ಖುರಿ ಗ್ರಾಮವು ಪ್ರಾಚೀನ ಕೌಶಲ್ಯ ದೇವಾಲಯವನ್ನು ಹೊಂದಿದೆ. ಈ ದೇವಾಲಯವನ್ನು ಕೇಂದ್ರವಾಗಿಟ್ಟುಕೊಂಡು 16 ಕೋಟಿ ರೂ.ಗಳ ವೆಚ್ಚದಲ್ಲಿ ಇಡೀ ಪ್ರದೇಶವನ್ನು ಸುಂದರಗೊಳಿಸುವ ಯೋಜನೆಯನ್ನು ರೂಪಿಸಲಾಗಿದೆ.
ಚಾಂದ್ಖುರಿ ಈಗಾಗಲೇ ಛತ್ತೀಸ್ಗಢ ಸರ್ಕಾರದ ‘ರಾಮ್ ವನ್ ಗಮನ್ ಪಥ್ ಯೋಜನೆ’ಯ ಭಾಗವಾಗಿದೆ, ಇದರ ಅಡಿಯಲ್ಲಿ ಭಗವಾನ್ ರಾಮ, ಸೀತಾ ಮತ್ತು ಸಹೋದರ ಲಕ್ಷ್ಮಣ ವನವಾಸದ ಸಮಯವನ್ನು ಕಳೆದಿದ್ದಾರೆಂದು ನಂಬಲಾದ ಎಲ್ಲಾ ಸ್ಥಳಗಳನ್ನು ಧಾರ್ಮಿಕ ಪ್ರವಾಸೋದ್ಯಮದ ತಾಣಗಳಾಗಿ ಅಭಿವೃದ್ಧಿಪಡಿಸಲಾಗುತ್ತದೆ.
ಸಿಎಂ ಭೂಪೇಶ್ ಬಾಗೇಲ್ ಅವರ ಪ್ರಕಾರ, ಚಾಂದ್ಖುರಿಯ ಪ್ರಾಚೀನ ಕೌಶಲ್ಯ ದೇವಾಲಯದ ಸುತ್ತಮುತ್ತಲಿನ ಪ್ರದೇಶವನ್ನು ಅಭಿವೃದ್ಧಿಪಡಿಸುವ ಮೂಲಕ ಧಾರ್ಮಿಕ ಪ್ರವಾಸೋದ್ಯಮದ ತಾಣವನ್ನಾಗಿ ಮಾಡಲಾಗುತ್ತದೆ.
ಸರೋವರದ ಮಧ್ಯಭಾಗದಲ್ಲಿರುವ ಪುರಾತನ ದೇವಾಲಯವನ್ನು ತಲುಪಲು ಭಕ್ತರಿಗೆ ಹೊಸ ಹೈಟೆಕ್ ಸೇತುವೆ ನಿರ್ಮಿಸಲು ನಿರ್ಧರಿಸಲಾಗಿದೆ. ಇದಲ್ಲದೆ, ಭಕ್ತರಿಗೆ ದೇವಾಲಯದ ಸುತ್ತಲೂ ಇರುವ ಸರೋವರದ ನಾಲ್ಕು ಬದಿಗಳಲ್ಲಿ ವಾಕಿಂಗ್ ಟ್ರ್ಯಾಕ್ ಮಾಡಲಾಗುವುತ್ತದೆ ಎಂದು ಹೇಳಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.