ನವದೆಹಲಿ: ನಮ್ಮ ಸರ್ಕಾರವು ಶಿಕ್ಷಣದ ಗುಣಮಟ್ಟ ಮತ್ತು ಸಂಶೋಧನೆ, ಅಭಿವೃದ್ಧಿ, ವಿನ್ಯಾಸ ಹಾಗೂ ಉದ್ದಿಮೆಗಳ ಪರಿಸರ ವ್ಯವಸ್ಥೆಯನ್ನು ನಿರ್ಮಾಣ ಮಾಡುವತ್ತ ಗಮನಹರಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ 2020ಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಅವರು, “ಜಗತ್ತಿಗೆ ಶ್ರೇಷ್ಠ ವಿಜ್ಞಾನಿಗಳನ್ನು, ತಂತ್ರಜ್ಞರನ್ನು ಮತ್ತು ತಂತ್ರಜ್ಞಾನದ ಉದ್ಯಮಿಗಳನ್ನು ನಾವು ನೀಡುತ್ತಾ ಬಂದಿದ್ದೇವೆ. ಈ ಬಗ್ಗೆ ನಮಗೆ ಸದಾ ಹೆಮ್ಮೆ ಇದೆ. ಇದು 21ನೇ ಶತಮಾನ ಮತ್ತು ಇದರಲ್ಲಿ ಪರಿಣಾಮಕಾರಿ ಪಾತ್ರವನ್ನು ವಹಿಸಲು ಭಾರತವು ಕ್ಷಿಪ್ರವಾಗಿ ವಿಕಸನಗೊಳ್ಳುತ್ತಾ ಬರುತ್ತಿದೆ” ಎಂದರು.
ಭಾರತದ ಶಿಕ್ಷಣ ಹೆಚ್ಚು ಆಧುನಿಕ ಕೊಳ್ಳಬೇಕು ಮತ್ತು ಪ್ರತಿಭೆಗಳು ಹೆಚ್ಚು ಅವಕಾಶಗಳನ್ನು ಪಡೆಯಬೇಕು ಎಂಬ ನಿಟ್ಟಿನಲ್ಲಿ ನಮ್ಮ ಪ್ರಯತ್ನಗಳು ಮುಂದುವರಿದಿದೆ ಎಂದಿದ್ದಾರೆ.
“ಹೊಸ ರಾಷ್ಟ್ರೀಯ ಶಿಕ್ಷಣವನ್ನು ಇತ್ತೀಚಿಗೆ ಘೋಷಣೆ ಮಾಡಲಾಗಿದೆ. 21ನೇ ಶತಮಾನದ ಯುವ ಜನತೆಯ ಭರವಸೆ ಮತ್ತು ಆಶೋತ್ತರಗಳನ್ನು ಗಮನದಲ್ಲಿಟ್ಟುಕೊಂಡು ಈ ನೀತಿಯನ್ನು ರಚಿಸಲಾಗಿದೆ. ಈ ನೀತಿಯ ಬಗ್ಗೆ ಎಲ್ಲಾ ಆಯಾಮಗಳಲ್ಲೂ ಚರ್ಚೆಗಳನ್ನು ನಡೆಸಿದ ಬಳಿಕವೇ ಅಂತಿಮಗೊಳಿಸಲಾಗಿದೆ. ಹೊಸ ರಾಷ್ಟ್ರೀಯ ಶಿಕ್ಷಣ ಮಾಧ್ಯಮದ ಮೂಲಕ ಈ ಅಪ್ರೋಚ್ ಅನ್ನು ಬದಲಾಯಿಸುವ ಪ್ರಯತ್ನ ನಡೆಯುತ್ತಿದೆ. ಮೊದಲಿದ್ದ ಕೊರತೆಗಳನ್ನು ದೂರ ಮಾಡಲಾಗುತ್ತಿದೆ. ಭಾರತದ ಶಿಕ್ಷಣದಲ್ಲಿ ಈಗ ವ್ಯವಸ್ಥಿತ ಸುಧಾರಣೆ ಇದೆ, ಉದ್ದೇಶ ಮತ್ತು ವಿಷಯ, ಎರಡನ್ನೂ ಪರಿವರ್ತನೆಗೊಳಿಸುವ ಪ್ರಯತ್ನ ಇದೆ” ಎಂದರು.
“ನಾವು ಶಾಲಾ ಬ್ಯಾಗುಗಳ ಭಾರವನ್ನು ತಗ್ಗಿಸಿ ಕಲಿಕೆಯನ್ನು ವೃದ್ಧಿಸುವತ್ತ ಗಮನ ಹರಿಸಿದ್ದೇವೆ. ವರ್ಷಗಳಿಂದ ವ್ಯವಸ್ಥೆಯ ಮಿತಿಗಳು ಮಕ್ಕಳ ಬದುಕಿನ ಮೇಲೆ ಪ್ರತಿಕೂಲ ಪರಿಣಾಮ ಬೀರಿದ್ದವು. ನಮ್ಮ ಹೊಸ ಶಿಕ್ಷಣ ನೀತಿ ಜನಕೇಂದ್ರಿತ ಮತ್ತು ಭವಿಷ್ಯ ಕೇಂದ್ರಿತವಾಗಿದೆ. ನಮ್ಮ ಶಿಕ್ಷಣ ಎಲ್ಲರನ್ನೂ ತಲುಪುವಂತೆ, ಎಲ್ಲರಿಗೂ ಸುಲಲಿತವಾಗಿರುವಂತೆ ಇರಬೇಕು ಎಂದು ನಮ್ಮ ಸಂವಿಧಾನದ ಮುಖ್ಯ ಶಿಲ್ಪಿ, ನಮ್ಮ ದೇಶದ ಮಹಾನ್ ಶಿಕ್ಷಣತಜ್ಞ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಹೇಳುತಿದ್ದರು. ಈ ಶಿಕ್ಷಣ ನೀತಿ , ಅವರ ಈ ಸಿದ್ಧಾಂತಕ್ಕೂ ಸಮರ್ಪಿತಗೊಂಡಿದೆ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.