ಅಯೋಧ್ಯೆ: ಭವ್ಯ ರಾಮ ಮಂದಿರ ನಿರ್ಮಾಣದ ಭೂಮಿ ಪೂಜೆಗಾಗಿ ಉತ್ತರಪ್ರದೇಶದ ಪವಿತ್ರ ಭೂಮಿ ಅಯೋಧ್ಯೆ ಸಕಲ ರೀತಿಯಲ್ಲೂ ಸಜ್ಜುಗೊಂಡಿದೆ. ಭೂಮಿ ಪೂಜೆಗೆ ದೇಶದಾದ್ಯಂತದ ಅನೇಕ ಪವಿತ್ರ ನದಿಗಳ ಮತ್ತು ಕ್ಷೇತ್ರಗಳ ನೀರು ಮತ್ತು ಮಣ್ಣು ಈಗಾಗಲೇ ಅಯೋಧ್ಯೆಯನ್ನು ತಲುಪಿವೆ.
ಈ ಬಗ್ಗೆ ಶನಿವಾರ ಮಾಹಿತಿ ನೀಡಿರುವ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್, “ಬದ್ರಿನಾಥ, ರಾಯಗಢ ಕೋಟೆ, ಶ್ರೀ ರಾಮನಾಥಸ್ವಾಮಿ ಮಂದಿರ, ಶ್ರೀ ಮಹಾಕಾಲೇಶ್ವರ ಮಂದಿರ, ಹುತಾತ್ಮ ಚಂದ್ರಶೇಖರ್ ಆಜಾದ್ ಅವರ ಜನ್ಮಸ್ಥಾನ, ಶ್ರೀ ಬಿರ್ಸಾ ಮುಂಡಾ ಅವರ ಜನ್ಮಸ್ಥಾನ ಸೇರಿದಂತೆ ಹಲವು ಧಾರ್ಮಿಕ ಮತ್ತು ರಾಷ್ಟ್ರೀಯ ಪ್ರಾಮುಖ್ಯತೆಯ ಸ್ಥಳಗಳಿಂದ ಪವಿತ್ರ ನೀರು ಮತ್ತು ಮಣ್ಣು ಅಯೋಧ್ಯೆಯನ್ನು ತಲುಪಿದೆ” ಎಂದು ಹೇಳಿದೆ.
ಅಲ್ಲದೇ, ಅಯೋಧ್ಯೆಗೆ ಕಳುಹಿಸಿಕೊಡಲಾಗಿರುವ ಪವಿತ್ರ ಮಣ್ಣು ಮತ್ತು ನೀರಿನ ಚಿತ್ರಗಳನ್ನು ಅದು ಟ್ವಿಟರ್ ಮೂಲಕ ಹಂಚಿಕೊಂಡಿದೆ.
ರಾಷ್ಟ್ರೀಯ ಸೌಹಾರ್ದತೆಯ ಸಂಕೇತವಾಗಿ ಮತ್ತು ಹಿಂದೂಗಳ ಏಕೀಕೃತ ಭಾವನೆಯ ಸಂಕೇತವಾಗಿ ದೇಶದಾದ್ಯಂತದ ಪುಣ್ಯ ಮಣ್ಣುಗಳನ್ನು ಮತ್ತು ಜಲಗಳನ್ನು ಭೂಮಿ ಪೂಜೆಯಲ್ಲಿ ಬಳಸಲಾಗುವುದು ಎಂದು ಹೇಳಲಾಗಿದೆ. ಆ.5ರಂದು ಪ್ರಧಾನಿ ನರೇಂದ್ರ ಮೋದಿಯವರ ಸಮ್ಮುಖದಲ್ಲಿ ಭೂಮಿ ಪೂಜೆ ನೆರವೇರಲಿದೆ.
Pious Soil & water from all the major religious sites, places of national importance and sacred rivers of the nation are reaching Ayodhya for the construction of the grand temple at Shri Ramjanmbhoomi.
These are the urns received on just 31st July 2020. pic.twitter.com/blTenizIay
— Shri Ram Janmbhoomi Teerth Kshetra (@ShriRamTeerth) August 1, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.