ನವದೆಹಲಿ: ವಿದೇಶದಲ್ಲಿ ಸಿಲುಕಿರುವ ಭಾರತೀಯರನ್ನು ಸ್ಥಳಾಂತರ ಮಾಡುವ ಸಲುವಾಗಿ ಆರಂಭಿಸಲಾದ ವಂದೇ ಭಾರತ್ ಮಿಷನ್ನ ಐದನೇ ಹಂತವು ಇಂದಿನಿಂದ ಪ್ರಾರಂಭವಾಗುತ್ತಿದೆ. ಈ ಹಂತವು ಆಗಸ್ಟ್ 31, 2020 ರವರೆಗೆ ಮುಂದುವರಿಯಲಿದೆ.
ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಪುರಿ ಅವರು, “ವಂದೇ ಭಾರತ್ ಮಿಷನ್ನ ವಿವಿಧ ಹಂತಗಳಲ್ಲಿ 8 ಲಕ್ಷ 45 ಸಾವಿರಕ್ಕೂ ಹೆಚ್ಚು ಭಾರತೀಯರನ್ನು ವಾಪಸ್ ಕರೆತರಲಾಗಿದೆ. ವಂದೇ ಭಾರತ್ ಮಿಷನ್ನ 5 ನೇ ಹಂತ ಆಗಸ್ಟ್ 1ರಿಂದ ಆರಂಭವಾಗುವುದು, ಏರ್ ಇಂಡಿಯಾ ಮತ್ತು ಏರ್ ಇಂಡಿಯಾ ಎಕ್ಸ್ಪ್ರೆಸ್ 2 ಲಕ್ಷ 67 ಸಾವಿರ 436 ಸಿಲುಕಿ ಹಾಕಿಕೊಂಡ ಪ್ರಯಾಣಿಕರನ್ನು ವಿಮಾನದಲ್ಲಿ ಭಾರತಕ್ಕೆ ಕರೆ ತಂದಿವೆ ಮತ್ತು ಇತರ ಚಾರ್ಟರ್ಗಳು ಈ ವರ್ಷದ ಮೇ 6 ರಿಂದ ಜುಲೈ 30 ರವರೆಗೆ 4 ಲಕ್ಷ 86 ಸಾವಿರ 811 ಸಿಲುಕಿ ಹಾಕಿಕೊಂಡ ಪ್ರಯಾಣಿಕರನ್ನು ತವರಿಗೆ ಕರೆತಂದಿವೆ” ಎಂದಿದ್ದಾರೆ.
ವರದಿಗಳ ಪ್ರಕಾರ, ವಂದೇ ಭಾರತ್ ಮಿಷನ್ನ 5 ನೇ ಹಂತದಲ್ಲಿ ಒಟ್ಟು 792 ವಿಮಾನಗಳು (692 ಅಂತರರಾಷ್ಟ್ರೀಯ ಮತ್ತು 100 ದೇಶೀಯ ಫೀಡರ್ಗಳು) 23 ದೇಶಗಳಿಂದ ಭಾರತೀಯರನ್ನು ವಾಪಸ್ ಕರೆ ತರಲಿವೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. ಇವುಗಳಲ್ಲಿ ಕೊಲ್ಲಿ ರಾಷ್ಟ್ರಗಳು, ಯುಎಸ್, ಕೆನಡಾ, ಯುಕೆ, ಜರ್ಮನಿ, ಫ್ರಾನ್ಸ್, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಮಲೇಷ್ಯಾ, ಫಿಲಿಪೈನ್ಸ್, ಸಿಂಗಾಪುರ್, ಬಾಂಗ್ಲಾದೇಶ, ಮಯನ್ಮಾರ್, ಥೈಲ್ಯಾಂಡ್, ಚೀನಾ, ಇಸ್ರೇಲ್, ಉಕ್ರೇನ್ ಮತ್ತು ಕಿರ್ಗಿಸ್ಥಾನ ಸೇರಿವೆ.
ಈ ವಿಮಾನಗಳು ಭಾರತದಾದ್ಯಂತ 21 ವಿವಿಧ ವಿಮಾನ ನಿಲ್ದಾಣಗಳನ್ನು ಬಂದು ಸೇರಲಿವೆ ಮತ್ತು ವಿದೇಶದಲ್ಲಿ ಸಿಲುಕಿರುವ 1 ಲಕ್ಷ 30 ಸಾವಿರ ಭಾರತೀಯರನ್ನು ವಾಪಾಸು ಕರೆತರಲಿದೆ ಎಂದು ವರದಿಗಳು ತಿಳಿಸಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.