ನವದೆಹಲಿ: ರಾಷ್ಟ್ರೀಯವಾದಿ, ಶಿಕ್ಷಕ, ರಾಜಕಾರಣಿ ಮತ್ತು ಸ್ವಾತಂತ್ರ್ಯ ಚಳುವಳಿಗೆ ಅಪ್ರತಿಮ ಕೊಡುಗೆಯನ್ನು ನೀಡಿರುವ ದೇಶಭಕ್ತ ಬಾಲಗಂಗಾಧರ್ ತಿಲಕ್ ಅವರ ಪುಣ್ಯತಿಥಿಯನ್ನು ಇಂದು ಸ್ಮರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಹಾನ್ ನಾಯಕನಿಗೆ ನಮನಗಳನ್ನು ಅರ್ಪಣೆ ಮಾಡಿದ್ದಾರೆ.
23 ಜುಲೈ 1856ರಂದು ರತ್ನಗಿರಿಯಲ್ಲಿ ಕೇಶವ್ ಗಂಗಾಧರ್ ತಿಲಕನಾಗಿ ಜನಿಸಿದ ಇವರು ಲೋಕ ಮಾನ್ಯ ತಿಲಕ್ ಎಂದೇ ಜನಜನಿತರಾದರು. ‘ಸ್ವರಾಜ್ಯ ನನ್ನ ಜನ್ಮ ಸಿದ್ಧ ಹಕ್ಕು, ಅದನ್ನು ನಾನು ಪಡೆದೇ ತೀರುತ್ತೇನೆ’ ಎಂದು ಘೋಷಣೆ ಮಾಡಿದ್ದರು. ಮಹಾನ್ ಸಮಾಜ ಸುಧಾರಕ, ಚಿಂತಕರಾಗಿ ಅವರು ಇತಿಹಾಸದ ಪುಟದಲ್ಲಿ ಅಮರರಾಗಿದ್ದಾರೆ.
1920ರ ಆಗಸ್ಟ್ 1ರಂದು ತಮ್ಮ 64ನೇ ವಯಸ್ಸಿನಲ್ಲಿ ಇವರು ಮಹಾರಾಷ್ಟ್ರದಲ್ಲಿ ನಿಧನರಾದರು.
ಟ್ವಿಟ್ ಮಾಡಿರುವ ಪ್ರಧಾನಿ ಮೋದಿ, ” 100 ನೇ ಪುಣ್ಯ ತಿಥಿಯಂದು ಲೋಕಮಾನ್ಯ ತಿಲಕರಿಗೆ ಭಾರತ ನಮಸ್ಕರಿಸುತ್ತದೆ. ಅವರ ಬುದ್ಧಿಶಕ್ತಿ, ಧೈರ್ಯ, ನ್ಯಾಯ ಪ್ರಜ್ಞೆ ಮತ್ತು ಸ್ವರಾಜ್ಯದ ಕಲ್ಪನೆಯು ಸ್ಫೂರ್ತಿ ನೀಡುತ್ತಲೇ ಇದೆ” ಎಂದಿದ್ದಾರೆ. ಅಲ್ಲದೇ, ಅವರ ಬಗೆಗಿನ ಒಂದು ವಿಡಿಯೋವನ್ನೂ ಹಂಚಿಕೊಂಡಿದ್ದಾರೆ.
India bows to Lokmanya Tilak on his 100th Punya Tithi.
His intellect, courage, sense of justice and idea of Swaraj continue to inspire.
Here are some facets of Lokmanya Tilak’s life… pic.twitter.com/9RzKkKxkpP
— Narendra Modi (@narendramodi) August 1, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.