ಶ್ರೀನಗರ: ಭಾರತೀಯ ಸೇನೆಯು ಶುಕ್ರವಾರ ಮುಂಜಾನೆ ಜಮ್ಮು ಮತ್ತು ಕಾಶ್ಮೀರದ ಗಡಿನಿಯಂತ್ರಣ ರೇಖೆಯ ಸಮೀಪ ಅಕ್ರಮವಾಗಿ ಭಾರತದ ಒಳಗೆ ನುಸುಳಲು ಪ್ರಯತ್ನಿಸಿದ ಭಯೋತ್ಪಾದಕರನ್ನು ತಡೆಹಿಡಿದಿದೆ ಮತ್ತು ಅವರ ವಿರುದ್ಧ ಎನ್ಕೌಂಟರ್ ನಡೆಸಿದೆ. ಅವರ ಬಳಿ ಇದ್ದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದೆ. ಭಯೋತ್ಪಾದಕರು ಗಾಯಗೊಂಡು ಓಡಿಹೋಗಿದ್ದಾರೆ ಎಂದು ಹೇಳಲಾಗಿದೆ.
ಮುಂಜಾನೆ 3 ಗಂಟೆಗೆ ಕುಪ್ವಾರಾ ಜಿಲ್ಲೆಯ ಮಾಚಲ್ ಸೆಕ್ಟರ್ನಲ್ಲಿ ಭದ್ರತಾಪಡೆಗಳು ವ್ಯಕ್ತಿಗಳ ಸಂಶಯಾಸ್ಪದ ಚಲನವಲನಗಳನ್ನು ಪತ್ತೆಮಾಡಿದವು. ಇದು ಅಕ್ರಮ ಒಳನುಸುಳುವಿಕೆಯ ಪ್ರಯತ್ನ ಎಂದು ತಿಳಿದು ಬಂದ ಕೂಡಲೇ ಗುಂಡು ಹಾರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ಬಗ್ಗೆ ಟ್ವೀಟ್ ಮಾಡಿರುವ ಭಾರತೀಯ ಸೇನೆಯ ಚಿನಾರ್ ಕಾರ್ಪ್ಸ್, ಬೆಳಿಗ್ಗೆ ಶೋಧ ಕಾರ್ಯಾಚರಣೆ ನಡೆಸಲಾಯಿತು ಮತ್ತು ಜಾಗದಲ್ಲಿ ರಕ್ತವು ನಮಗೆ ಗೋಚರಿಸಿತು. ಸೈನಿಕರಿಗೆ ಭಯೋತ್ಪಾದಕರನ್ನು ಬಂಧಿಸಲು ಸಾಧ್ಯವಾಗದಿದ್ದರೂ ಅವರು ಬಳಿ ಇದ್ದ ಮೂರು ಎಕೆಗಳು, ಸ್ನೈಪರ್ ರೈಫಲ್, ಎಂಟು ಗ್ರೆನೇಡ್ ಮತ್ತು ಇತರ ಯುದ್ಧ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ ಎಂದಿದೆ.
ಭಯೋತ್ಪಾದಕರ ಹುಡುಕಾಟ ಇನ್ನೂ ಪ್ರಗತಿಯಲ್ಲಿದೆ ಎಂದು ತಿಳಿಸಿದೆ .
ಸ್ವಾತಂತ್ರ್ಯ ದಿನಾಚರಣೆಯಂದು ದೇಶದಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸಲು ನೆರೆಯ ಪಾಕಿಸ್ಥಾನ ಬೆಂಬಲಿತ ಭಯೋತ್ಪಾದಕರು ಹವಣಿಸುತ್ತಿದ್ದಾರೆ. ಇದೇ ಹಿನ್ನೆಲೆಯಲ್ಲಿ ಅಕ್ರಮ ಒಳನುಸುಳುವಿಕೆಯ ಪ್ರಯತ್ನಗಳನ್ನು ತೀವ್ರಗೊಳಿಸಿದ್ದಾರೆ. ಇದರಿಂದಾಗಿ ಭದ್ರತಾ ಪಡೆಗಳು ಕೂಡ ತಮ್ಮ ಕಣ್ಗಾವಲನ್ನು ಗಡಿಯುದ್ದಕ್ಕೂ ಹೆಚ್ಚಿಸಿವೆ.
Today early morning at about 3 am, suspicious move of unidentified persons detected 600m on own side of LoC at Machhal Sector, #Kupwara. Infiltrating terrorists intercepted by own troops. Firefight ensued. Operation in progress.#Kashmir #IndianArmy@adgpi @NorthernComd_IA pic.twitter.com/kqdxJDsO7o
— Chinar Corps – Indian Army (@ChinarcorpsIA) July 31, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.