ನವದೆಹಲಿ: ಶ್ರೀ ರಾಮನ ಜನ್ಮಸ್ಥಳವಾದ ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರದ ಪುನರ್ ನಿರ್ಮಾಣವು ನಮ್ಮ ರಾಷ್ಟ್ರೀಯ ಪ್ರಜ್ಞೆಯನ್ನು ಪುನರುಜ್ಜೀವನಗೊಳಿಸುವ ಸಕಾರಾತ್ಮಕ ಪ್ರಯತ್ನವಾಗಿದೆ. ಆಕ್ರಮಣಕಾರರಿಂದ ನಮ್ಮ ಸಮಾಜದ ಮೇಲೆ ಉಂಟಾದ ಅವಮಾನದ ಗುರುತುಗಳನ್ನು ಅಳಿಸಿಹಾಕುವ ರಾಷ್ಟ್ರೀಯ ಆಚರಣೆಯಾಗಿದೆ ಎಂದು ಶ್ರೀ ರಾಮಜನ್ಮಸ್ಥಾನ ತೀರ್ಥಕ್ಷೇತ್ರ ಟ್ರಸ್ಟ್ನ ಖಜಾಂಚಿ ಸ್ವಾಮಿ ಗೋವಿಂದದೇವ್ ಗಿರಿ ಹೇಳಿದ್ದಾರೆ.
ಮರಾಠಿ ಸಾಪ್ತಾಹಿಕ ‘ವಿವೇಕ್’ ಗೆ ನೀಡಿದ ಸಂದರ್ಶನದಲ್ಲಿ ಅವರು ರಾಮ ಮಂದಿರ ಚಳವಳಿಗೆ ಸಂಬಂಧಿಸಿದ ಹಲವಾರು ಅಂಶಗಳನ್ನು ಮತ್ತು ಶ್ರೀ ರಾಮನ ಜನ್ಮಸ್ಥಳದಲ್ಲಿರುವ ದೇವಾಲಯ ನವ ಯೌವನ ಪಡೆಯುವಲ್ಲಿ ಹಿಂದೂ ಸಮಾಜದ ಕೊಡುಗೆ ಕುರಿತು ಮಾತನಾಡಿದರು.
ರಾಮ ಮಂದಿರ ನಿರ್ಮಾಣ ಕೇವಲ ಧಾರ್ಮಿಕ ವಿಷಯವಲ್ಲ. ಅದನ್ನೂ ಮೀರಿದ್ದು, ಇದು ನೂರಾರು ವರ್ಷಗಳ ಹಿಂದೆ ಆಕ್ರಮಣಕಾರರಿಂದ ನಾಶವಾದ ರಚನೆಗಳ ನವ ಯೌವನ ಪಡೆಯುವಿಕೆ. ಇದು ನಮ್ಮ ರಾಷ್ಟ್ರೀಯ ಪ್ರಜ್ಞೆಯ ಪುನರುಜ್ಜೀವನ ಎಂದರು.
ಶತಮಾನದ ಕನಸು ಈಡೇರುವ ಈ ಹಂತದಲ್ಲಿ ತಮ್ಮ ಭಾವನೆಗಳನ್ನು ಮತ್ತು ಸಂತೋಷವನ್ನು ವ್ಯಕ್ತಪಡಿಸಿದ ಅವರು, ಹಿಂದೂಗಳ ಇತಿಹಾಸವನ್ನು ನಮ್ಮ ಸಮಾಜದಲ್ಲಿ ಸೋಲುಗಳ ಇತಿಹಾಸ ಎಂದು ತಪ್ಪಾಗಿ ವ್ಯಾಖ್ಯಾನಿಸಲಾಗಿದೆ. ಆದರೆ ಇದು ವಾಸ್ತವವಲ್ಲ. ಶ್ರೀ ರಾಮ ಜನ್ಮಭೂಮಿಯಲ್ಲಿರುವ ದೇವಾಲಯಕ್ಕಾಗಿ ನಾವು ಸುಮಾರು ಐದು ಶತಮಾನಗಳ ನಿರಂತರ ಹೋರಾಟದಲ್ಲಿ ತೊಡಗಬೇಕಾಯಿತು. 1528ರಲ್ಲಿ ಮಸೀದಿ ನಿರ್ಮಿಸಲು ದೇವಾಲಯವನ್ನು ನೆಲಸಮಗೊಳಿಸಿದಾಗಿನಿಂದ ಆರಂಭಗೊಂಡ ಹೋರಾಟ 2019ರ ನವೆಂಬರ್ 9 ರವರೆಗೆ ಸುಪ್ರೀಂ ಕೋರ್ಟ್ ಈ ಸ್ಥಳವನ್ನು ಹಿಂದೂಗಳಿಗೆ ಹಸ್ತಾಂತರಿಸುವವರೆಗೂ ಹೋರಾಟ ಮುಂದುವರೆಯಿತು ಎಂದಿದ್ದಾರೆ.
ಶತಮಾನಗಳಷ್ಟು ಹಳೆಯದಾದ ಈ ಹೋರಾಟದ ಹಿನ್ನೆಲೆಯಲ್ಲಿ, ಹಿಂದೂ ಸಮಾಜದ ವಿಶ್ವಾಸದ ಯುಗವನ್ನು ತಿಳಿಸುವ ಸುವರ್ಣ ಕ್ಷಣ ಇದು. ಸ್ವಾಮಿ ವಿವೇಕಾನಂದರು ಹೇಳಿದಂತೆ, ತಾಯಿ ಭಾರತಿ ಜಾಗೃತವಾಗುತ್ತಿದ್ದಾಳೆ ಮತ್ತು ಭವಿಷ್ಯವು ಹಿಂದೂಗಳಿಗೆ ಸೇರಿದೆ.
ರಾಮ ಇಡೀ ಮಾನವ ಜನಾಂಗಕ್ಕೆ ಸೇರಿದವನು ಮತ್ತು ಯಾವುದೇ ನಿರ್ದಿಷ್ಟ ಧರ್ಮ ಅಥವಾ ಪಂಥಕ್ಕೆ ಸೇರಿದವನಲ್ಲ. ಅನೇಕರು ಆತನನ್ನು ಶ್ರೇಷ್ಠ ಮನುಷ್ಯ, ಮಾನವೀಯತೆಯ ಶ್ರೇಷ್ಠ ಗುರು ಎಂದು ಆರಾಧಿಸುತ್ತಾರೆ. ಸಮಾಜದ ಪ್ರತಿಯೊಂದು ವರ್ಗವು ಒಂದು ರೀತಿಯಲ್ಲಿ ಅಥವಾ ಇನ್ನೊಂದು ರೀತಿಯಲ್ಲಿ ಶ್ರೀ ರಾಮನೊಂದಿಗೆ ತನ್ನನ್ನು ಗುರುತಿಸಿಕೊಂಡಿದೆ. ಆತ ಸಾಮಾನ್ಯ ಜನರನ್ನು ಸಂಘಟಿಸುವ ಮೂಲಕ ರಾಕ್ಷಸರೊಂದಿಗೆ ಹೋರಾಡಿದ ಮತ್ತು ಸತ್ಯದ ಪ್ರಾಬಲ್ಯವನ್ನು ಸ್ಥಾಪಿಸಿದ ಎಂದು ಗಿರಿ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.