ಬೆಂಗಳೂರು: ಆರ್ಟ್ ಆಫ್ ಲಿವಿಂಗ್ ಫೌಂಡೇಶನ್ ವತಿಯಿಂದ ಆಯೋಜನೆಗೊಳಿಸಲಾಗಿದ್ದ ಆನ್ಲೈನ್ ಕಂದ ಷಷ್ಠಿ ಕವಚಂ ಪಠಣದಲ್ಲಿ ದಾಖಲೆಯ 2 ಕೋಟಿ ಹಿಂದೂಗಳು ಜಗತ್ತಿನಾದ್ಯಂತದಿಂದ ಭಾಗಿಯಾಗಿದ್ದಾರೆ.
ವರದಿಗಳ ಪ್ರಕಾರ, ಪ್ರಸ್ತುತ ಕೊರೋನಾವೈರಸ್ ಸಾಂಕ್ರಾಮಿಕ ರೋಗದಿಂದ ಸೃಷ್ಟಿಯಾದ ಸಮಸ್ಯೆಗಳನ್ನು ನಿವಾರಿಸುವ ಸಲುವಾಗಿ, ಜಗತ್ತಿನಾದ್ಯಂತದ ಜನರಿಗೆ ಉತ್ಸಾಹ ತುಂಬುವ ಸಲುವಾಗಿ ಧಾರ್ಮಿಕ ಪಠಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಶ್ರೀ ಶ್ರೀ ರವಿಶಂಕರ್ ಗುರೂಜಿ ನೇತೃತ್ವದ ಫೌಂಡೇಶನ್ ಮುನ್ನಡೆಸಿದ್ದ ಈ ಕಾರ್ಯಕ್ರಮವನ್ನು ಫೇಸ್ಬುಕ್ ಲೈವ್, ಯೂಟ್ಯೂಬ್ ಲೈವ್ ಮುಂತಾದ ಕಡೆ ನೇರ ಪ್ರಸಾರ ಮಾಡಲಾಗಿತ್ತು
ಕಂದ ಷಷ್ಠಿ ಕವಚಂ ಹಿಂದೂ ಭಕ್ತಿಗೀತೆಯಾಗಿದ್ದು, ದೇವರಾಯ ಸ್ವಾಮಿಗಲ್ ಇದನ್ನು ತಮಿಳಿನಲ್ಲಿ ರಚನೆ ಮಾಡಿದ್ದಾರೆ. ಇವರು ಮೀನಾಕ್ಷಿ ಸುಂದರಂ ಪಿಳ್ಳೈ ಅವರ ಶಿಷ್ಯರಾಗಿದ್ದಾರೆ. ಮುರುಗ ದೇವರಿಗೆ ಸಮರ್ಪಿತಗೊಂಡ ಗೀತೆ ಇದಾಗಿದೆ.
19ನೇ ಶತಮಾನದಲ್ಲಿ ಇದನ್ನು ರಚಿಸಲಾಯಿತು ಎಂದು ನಂಬಲಾಗಿದೆ. ಆನ್ನೈಲ್ ಕಾರ್ಯಕ್ರಮದಲ್ಲಿ ಕೋಟ್ಯಾಂತರ ಜನರು ಇದನ್ನು ಪಠಿಸಿದ್ದಾರೆ.
2 Crore people will join the global Kanda Sashti Kavacham chanting today at 6:00 PM IST. Let us all create an atmosphere of positivity and peace. A much needed shield in today’s times.
Join live: https://t.co/dGp1jeB3xa #WorldCelebratesMurugan #வேலும்மயிலும்துணை— Gurudev Sri Sri Ravi Shankar (@SriSri) July 26, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.