ಅಯೋಧ್ಯೆ: ಆಗಸ್ಟ್ 5ರಂದು ಪವಿತ್ರ ಭೂಮಿ ಅಯೋಧ್ಯೆಯಲ್ಲಿ ಭವ್ಯ ಶ್ರೀರಾಮ ಮಂದಿರಕ್ಕೆ ಶಿಲಾನ್ಯಾಸ ನೆರವೇರಿಸಲಾಗುತ್ತದೆ. ಐತಿಹಾಸಿಕ ಸಮಾರಂಭಕ್ಕೆ ಈಗಾಗಲೇ ಸಕಲ ಸಿದ್ಧತೆಗಳು ನಡೆಯುತ್ತಿದೆ. ಈ ಸಮಾರಂಭಕ್ಕಾಗಿ ದೇವ್ರಹ ಹಂಸ್ ಬಾಬ ಸಂಸ್ಥಾನದ ವತಿಯಿಂದ ಅಯೋಧ್ಯೆಯ ಮನಿ ರಾಮ ದಾಸ್ ಚವಾನಿಯಲ್ಲಿ 1,11,000 ಲಡ್ಡುಗಳನ್ನು ತಯಾರಿಸಲಾಗುತ್ತಿದೆ.
“ಈ ಲಡ್ಡುಗಳು ಆಗಸ್ಟ್ 5ರಂದು ಪ್ರಧಾನಿ ನರೇಂದ್ರ ಮೋದಿಯವರು ಶ್ರೀರಾಮನಿಗೆ ಅರ್ಪಿಸುವ ಅರ್ಪಣೆಗಳ ಭಾಗವಾಗಲಿದೆ. ಬಳಿಕ ಈ ಲಡ್ಡುಗಳನ್ನು ಆಗಮಿಸಿದ ಭಕ್ತರಿಗೆ ಮತ್ತು ಶಿಲಾನ್ಯಾಸ ನೆರವೇರಿಸಿದ ಗಣ್ಯರಿಗೆ ವಿತರಣೆ ಮಾಡಲಾಗುತ್ತದೆ. ಮಾತ್ರವಲ್ಲದೇ, ದೇಶದಾದ್ಯಂತದ ಪ್ರಮುಖ ದೇವಾಲಯಗಳಿಗೂ ಕೂಡ ಈ ಲಡ್ಡುಗಳನ್ನು ಕಳುಹಿಸಿಕೊಡಲಾಗುತ್ತದೆ” ಎಂದು ಚವಾನಿಯ ಪಂಡಿತರು ಹೇಳಿದ್ದಾರೆ.
ಮಾತ್ರವಲ್ಲದೆ, ಚವಾನಿಯಲ್ಲಿ ಬ್ಯಾಗುಗಳನ್ನು ಕೂಡ ತಯಾರು ಮಾಡಲಾಗುತ್ತದೆ. ಈ ಬ್ಯಾಗುಗಳಲ್ಲಿ ಅಯೋಧ್ಯೆಯ ಮತ್ತು ರಾಮಮಂದಿರದ ಇತಿಹಾಸವುಳ್ಳ ಮೂರು ಪುಸ್ತಕಗಳು ಇರಲಿವೆ. ಲಡ್ಡುಗಳು ಮತ್ತು ಶಾಲು ಅನ್ನು ಕೂಡ ಇದರಲ್ಲಿ ಇಡಲಾಗುತ್ತದೆ” ಎಂದಿದ್ದಾರೆ.
ಕಳೆದ 4 ದಿನಗಳಿಂದ ಲಡ್ಡುಗಳನ್ನು ತಯಾರಿಸುವ ಕಾರ್ಯ ಮಾಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.