ನವದೆಹಲಿ: ಭಾರತಕ್ಕೆ ನುಸುಳಲು 320ಕ್ಕೂ ಹೆಚ್ಚು ಭಯೋತ್ಪಾದಕರು ಎಲ್ಒಸಿ ಸಮೀಪ ಹೊಂಚು ಹಾಕಿ ಕುಳಿತಿದ್ದಾರೆ, ಇವರಿಗೆ ಸಹಾಯ ಮಾಡಲು ಈ ಪ್ರದೇಶದಲ್ಲಿ ಪಾಕಿಸ್ಥಾನ 27 ಲಾಂಚ್ ಪ್ಯಾಡ್ಗಳನ್ನು ಸಕ್ರಿಯಗೊಳಿಸಿದೆ ಎಂದು ಗುಪ್ತಚರ ಸಂಸ್ಥೆಗಳು ಎಚ್ಚರಿಕೆ ನೀಡಿವೆ. ಸ್ವಾತಂತ್ರ್ಯ ದಿನಾಚರಣೆಗೂ ಮುನ್ನ ಹೆಚ್ಚುತ್ತಿರುವ ಒಳನುಸುಳುವಿಕೆ ಪ್ರಯತ್ನಗಳ ಬಗ್ಗೆ ಗುಪ್ತಚರ ಏಜೆನ್ಸಿಗಳು ಎಚ್ಚರಿಕೆ ನೀಡಿವೆ.
ವರದಿಗಳ ಪ್ರಕಾರ, ಉಗ್ರರ ಅನೇಕ ಸಂಭಾಷಣೆಗಳನ್ನು ಸಂಶೋಧನೆ ಮತ್ತು ವಿಶ್ಲೇಷಣೆ ವಿಭಾಗ (ರಾ) ಟ್ರೇಸ್ ಮಾಡಿದೆ ಮತ್ತು ಭಾರತ-ಪಾಕಿಸ್ಥಾನ ಗಡಿಯಲ್ಲಿ ನಿಯೋಜಿಸಲಾದ ಭದ್ರತಾ ಪಡೆಗಳನ್ನು ಈ ಹಿನ್ನೆಲೆಯಲ್ಲಿ ಎಚ್ಚರಿಸಲಾಗಿದೆ. ಒಳನುಸುಳುವಿಕೆ ಪ್ರಯತ್ನಗಳು ಈ ವರ್ಷ ಕುಸಿತವನ್ನು ತೋರಿಸಿವೆ. ಆದರೂ ಪಾಕಿಸ್ಥಾನ ಭಾರತದೊಳಗೆ ಉಗ್ರರನ್ನು ಬಿಟ್ಟು ದುಷ್ಕೃತ್ಯಗಳನ್ನು ಎಸಗಲು ಹಾತೊರೆಯುತ್ತಿದೆ.
ಮೂಲಗಳ ಪ್ರಕಾರ, ಕಳೆದ ವರ್ಷದ 60ಕ್ಕೆ ಹೋಲಿಸಿದರೆ ಈ ವರ್ಷ ಕೇವಲ 35 ಭಯೋತ್ಪಾದಕರು ಮಾತ್ರ ದೇಶಕ್ಕೆ ನುಸುಳಿದ್ದಾರೆ. 2020 ರ ಮೊದಲಾರ್ಧದಲ್ಲಿ 429 ಕದನ ವಿರಾಮ ಉಲ್ಲಂಘನೆ ನಡೆದಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ 605 ರಷ್ಟು ನಡೆದಿತ್ತು ಎಂದು ಗೃಹ ಸಚಿವಾಲಯ ತಿಳಿಸಿದೆ.
ಈ ವಾರದ ಆರಂಭದಲ್ಲಿ, ನಿಯಂತ್ರಣ ರೇಖೆಯ ಉದ್ದಕ್ಕೂ ಹೆಚ್ಚಿನ ಜಾಗರೂಕತೆಯಿಂದಾಗಿ ಭದ್ರತಾ ಪಡೆಗಳು ಪಿಕ್-ಅಪ್ ವಾಹನವನ್ನು ತಡೆದವು ಮತ್ತು ಅದರಲ್ಲಿ 10 ಕೆಜಿ ಬ್ರೌನ್ ಶುಗರ್ ಹೊತ್ತೊಯ್ಯುತ್ತಿದ್ದ ಮೂವರನ್ನು ಬಂಧಿಸಿದವು, ಎರಡು ಪಿಸ್ತೂಲ್, ನಾಲ್ಕು ಮ್ಯಾಗಜೀನ್ಗಳೊಂದಿಗೆ ಎರಡು ಎಕೆ -47 ಗಳನ್ನು, 20 ಗ್ರೆನೇಡ್ಗಳನ್ನು ವಶಪಡಿಸಿಕೊಂಡವು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.