ನವದೆಹಲಿ: ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ, ಎಲ್ಲಾ ಮಕ್ಕಳಿಗೂ ಮತ್ತು ಯುವಜನತೆಗೆ ಗುಣಮಟ್ಟದ ಶಿಕ್ಷಣವನ್ನು ತಲುಪುವಂತೆ ಮಾಡುವ ನಿಟ್ಟಿನಲ್ಲಿ ಇದು ಮಹತ್ವದ ಹೆಜ್ಜೆ ಎಂದು ಅವರು ಬಣ್ಣಿಸಿದ್ದಾರೆ.
ಸರಣಿ ಟ್ವೀಟ್ ಮಾಡಿರುವ ನಾಯ್ಡು, ಸರ್ಕಾರವು ಹೊಸ ರಾಷ್ಟ್ರೀಯ ಶಿಕ್ಷಣ ನೀತಿಗೆ ಅನುಮೋದನೆ ನೀಡಿದೆ ಎಂಬುದು ಸಂತೋಷದ ಸಂಗತಿಯಾಗಿದೆ ಎಂದಿದ್ದಾರೆ.
ಬಹುಭಾಷಿಕತೆ ಮತ್ತು ಮಾತೃಭಾಷೆಯಲ್ಲಿ ಶಿಕ್ಷಣಕ್ಕೆ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಒತ್ತು ನೀಡಿದ್ದು, ಭಾರತದ ಸಾಂಸ್ಕೃತಿಕ ಭಾಷೆಗಳ ಮಾನ್ಯತೆ ಮತ್ತು ಪ್ರಾಮುಖ್ಯತೆಯ ದೃಷ್ಟಿಯಿಂದ ಇದು ಮಹತ್ವದ್ದಾಗಿದೆ. ಅಲ್ಲದೇ, ಕಲಿಯುವವರೆಗೆ ಸಮಗ್ರ ವಿಶ್ವ ದೃಷ್ಟಿಯನ್ನು ನೀಡುತ್ತದೆ ಎಂದು ಹೇಳಿದ್ದಾರೆ.
ನೈತಿಕತೆ, ಮಾನವೀಯತೆ, ಸಾಂವಿಧಾನಿಕ ಮೌಲ್ಯಗಳ ಬಗ್ಗೆ ಇದು ಹೆಚ್ಚಿನ ಗಮನವನ್ನು ನೀಡಿದ್ದು, ಇದು ಪ್ರಜಾಪ್ರಭುತ್ವ ಬೇರುಗಳಿಗೆ ಅತ್ಯಂತ ಅವಶ್ಯಕವಾಗಿರುವ ಜ್ಞಾನ ಭರಿತ ನಾಗರಿಕರನ್ನು ಸೃಷ್ಟಿಸುತ್ತದೆ ಎಂದಿದ್ದಾರೆ.
“ಹೊಸ ಶಿಕ್ಷಣ ನೀತಿಯ ದೃಷ್ಟಿ ನಿಜವಾಗಿಯೂ ಜಾಗತಿಕ ಮತ್ತು ಮೂಲಭೂತವಾಗಿ ಭಾರತೀಯವಾಗಿದೆ. ಪ್ರಪಂಚದಾದ್ಯಂತದ ಉದಾತ್ತ ಆಲೋಚನೆಗಳನ್ನು ಸ್ವಾಗತಿಸುವ ಭಾರತದ ಸಮಯರಹಿತ ಅನ್ವೇಷಣೆಯನ್ನು ಇದು ಉದಾಹರಣೆಯಾಗಿ ತೋರಿಸುತ್ತದೆ. ಪ್ರಾಥಮಿಕ ಹಂತದಲ್ಲಿ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸಲು ಮೂಲಭೂತ ಸಾಕ್ಷರತೆ ಮತ್ತು ಸಂಖ್ಯಾಶಾಸ್ತ್ರದ ರಾಷ್ಟ್ರೀಯ ಮಿಷನ್ ಸ್ಥಾಪಿಸುವುದು ಹೆಚ್ಚು ಅಗತ್ಯ ಮತ್ತು ಸಮಯೋಚಿತ ಹೆಜ್ಜೆಯಾಗಿದೆ” ಎಂದು ಅವರು ಹೇಳಿದರು.
ನೀತಿ, ಸಂಶೋಧನೆ, ಬಹುಶಿಸ್ತೀಯ ವಿಧಾನಗಳು ಮತ್ತು ತಂತ್ರಜ್ಞಾನದ ಬಳಕೆ ಮತ್ತು ಶಿಕ್ಷಕರ ಸಾಮರ್ಥ್ಯದ ವೃತ್ತಿಪರ ಉನ್ನತೀಕರಣದ ಮೇಲೆ ದೇಶದ ತೀಕ್ಷ್ಣವಾದ ಗಮನವು ದೇಶದ ಶಿಕ್ಷಣ ಭೂದೃಶ್ಯವನ್ನು ಗುಣಾತ್ಮಕವಾಗಿ ಪರಿವರ್ತಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ನಾಯ್ಡು ಅಭಿಪ್ರಾಯಿಸಿದ್ದಾರೆ.
देश की विविधता और स्थानीय संदर्भों को शिक्षा में स्थान देने के लिए, इसमें मातृ भाषा तथा अन्य भाषाओं को सीखने पर ज़ोर दिया गया है, साथ ही भारत की प्राचीन भाषाओं के महत्व को भी स्वीकार किया गया है। इससे विद्यार्थियों में विहंगम विश्व दृष्टि विकसित हो सकेगी। #NewEducationPolicy2020
— Vice President of India (@VPSecretariat) July 30, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.