ಶ್ರೀನಗರ: ಭಾರತೀಯ ಸೇನೆಯು ಜಮ್ಮು ಮತ್ತು ಕಾಶ್ಮೀರದಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವುದು ಮಾತ್ರವಲ್ಲ, ಅಲ್ಲಿನ ಜನರ ಒಳಿತಿಗಾಗಿ ಬೇಕಾದ ಎಲ್ಲಾ ಕ್ರಮಗಳನ್ನು ಕೈಗೊಳ್ಳುತ್ತದೆ. ಇದೀಗ ಕಾಶ್ಮೀರದ ಶೋಪಿಯಾನ ಪ್ರದೇಶದಲ್ಲಿ ಗ್ರಾಮೀಣ ಜನರಿಗೆ ಮಹಾಮಾರಿ ಕೊರೋನಾವೈರಸ್ ಬಗ್ಗೆ ಅರಿವನ್ನು ಮೂಡಿಸುವ ಸಲುವಾಗಿ ಅರಿವು ಕಾರ್ಯಕ್ರಮಗಳನ್ನು ಸೇನೆಯು ಆಯೋಜನೆ ಮಾಡುತ್ತಿದೆ.
ಗುರುವಾರ ಕಾಶ್ಮೀರದ ಶೋಪಿಯಾನದಲ್ಲಿ ಭಾರತೀಯ ಸೇನೆಯು ವಿವಿಧ ಕಡೆ 10 ಅಭಿಯಾನಗಳನ್ನು ನಡೆಸಿದೆ. 62 ರಾಷ್ಟ್ರೀಯ ರೈಫಲ್ ಶೋಪಿಯಾನದ ಗ್ರಾಮೀಣ ಜನರಿಗೆ ಕೊರೋನಾವೈರಸ್ ವಿರುದ್ಧ ಹೇಗೆ ಹೋರಾಟ ನಡೆಸಬೇಕು ಎಂಬ ಬಗ್ಗೆ ತಿಳಿಸಿಕೊಡುವ ಕಾರ್ಯವನ್ನು ಮಾಡಿದೆ. ಜನಸಾಮಾನ್ಯರಿಗೆ ಮತ್ತು ವಿದ್ಯಾರ್ಥಿಗಳಿಗೆ ಸಾಂಕ್ರಾಮಿಕದ ಬಗ್ಗೆ ಶಿಕ್ಷಣ ನೀಡುವ ಕಾರ್ಯ ಮಾಡಿದೆ.
ವರದಿಗಳ ಪ್ರಕಾರ, ಸೇನಾ ವೈದ್ಯರು ಮತ್ತು ಅರೆವೈದ್ಯಕೀಯ ಸಿಬ್ಬಂದಿ ಸಾಂಕ್ರಾಮಿಕ ಗುಣಲಕ್ಷಣಗಳ ಬಗ್ಗೆ ಜನರಿಗೆ ವಿವರಿಸಿದ್ದಾರೆ. ಅದು ಹೇಗೆ ಹರಡುತ್ತದೆ ಎಂಬ ಬಗ್ಗೆಯೂ ವಿವರಿಸಿದ್ದಾರೆ. ಮಾತ್ರವಲ್ಲದೇ, ಮಾಸ್ಕ್ ವಿತರಣೆ ಮಾಡಿದ್ದಾರೆ ಮತ್ತು ಇತರ ತಡೆಗಟ್ಟುವ ಕ್ರಮಗಳನ್ನು ಅವರಿಗೆ ಹೇಳಿಕೊಟ್ಟಿದ್ದಾರೆ.
ಕೊರೋನಾವೈರಸ್ ಸಾಂಕ್ರಾಮಿಕದ ಬಗ್ಗೆ ಸಂದೇಶ ನೀಡುವ ಫಲಕಗಳನ್ನು ಯೋಧರು ಅಲ್ಲಲ್ಲಿ ಅಳವಡಿಸಿದ್ದಾರೆ ಮತ್ತು ಕೈಪಿಡಿಗಳನ್ನು ವಿತರಿಸಿದ್ದಾರೆ.
ಸೇನೆಯ ಕಾರ್ಯಕ್ಕೆ ಸ್ಥಳೀಯ ಜನರು ಶ್ಲಾಘನೆಗಳನ್ನು ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸ್ಥಳೀಯರಾದ ಬಶೀರ್ ಅಹ್ಮದ್ ಅವರು, “ಕೋವಿಡ್ ಸೋಂಕಿನ ಬಗ್ಗೆ ಅರಿವು ಮೂಡಿಸುತ್ತಿರುವ ಸೇನಾ ಯೋಧರಿಗೆ ಧನ್ಯವಾದಗಳು. ನಮಗೆ ಅವರು ನೀಡುತ್ತಿರುವ ಜ್ಞಾನದಿಂದ ಸಾಕಷ್ಟು ಪ್ರಯೋಜನವಾಗುತ್ತಿದೆ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.