ನವದೆಹಲಿ: ಬಾಂಗ್ಲಾದೇಶದಲ್ಲಿನ ಭಾರತದ ಹೈಕಮಿಷನರ್ ರಿವಾ ಗಂಗೂಲಿ ದಾಸ್ ಸೋಮವಾರ ನಾಟೋರ್ನಲ್ಲಿ ಪುನರ್ ನಿರ್ಮಿಸಲಾದ ಶ್ರೀ ಶ್ರೀ ಜಾಯ್ಕಾಲಿ ಮಾತಾರ್ ದೇವಾಲಯವನ್ನು ಜಂಟಿಯಾಗಿ ಉದ್ಘಾಟಿಸಿದರು.
ಶ್ರೀ ಶ್ರೀ ಜಾಯ್ಕಾಲಿ ಮಾತಾರ್ ದೇವಸ್ಥಾನವು ಬಾಂಗ್ಲಾದೇಶದ ಅತ್ಯಂತ ಹಳೆಯ ದೇವಾಲಯಗಳಲ್ಲಿ ಒಂದಾಗಿದೆ. ಇದನ್ನು ಸುಮಾರು 300 ವರ್ಷಗಳ ಹಿಂದೆ 18 ನೇ ಶತಮಾನದ ಆರಂಭದಲ್ಲಿ ಶ್ರೀ ದಯಾರಾಮ್ ರಾಯ್ ನಿರ್ಮಿಸಿದರು ಎಂದು ಹೇಳಲಾಗಿದೆ. ಅವರು ನಟೋರ್ ರಾಣಿ ಭಹಾನಿಯ ಪ್ರಭಾವಿ ದಿವಾನ್ ಮತ್ತು ದಿಘಾಪತಿಯ ರಾಜಮನೆತನದ ಸ್ಥಾಪಕರಾಗಿದ್ದರು.
ವರದಿಗಳ ಪ್ರಕಾರ, ನಟೋರ್ನ ಲಾಲ್ಬಜಾರ್ನಲ್ಲಿರುವ ದೇವಾಲಯದ ಪುನರ್ ನಿರ್ಮಾಣದ ಒಪ್ಪಂದಕ್ಕೆ 2016ರಲ್ಲಿ ಸಹಿ ಹಾಕಲಾಯಿತು ಎಂದು ಬಾಂಗ್ಲಾದೇಶದ ಭಾರತದ ಹೈಕಮಿಷನ್ ಹೊರಡಿಸಿದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ದೇವಾಲಯದ ಐತಿಹಾಸಿಕ ಪುನರ್ ನಿರ್ಮಾಣಕ್ಕಾಗಿ ಭಾರತ ಸರ್ಕಾರ ಹೈ ಇಂಪ್ಯಾಕ್ಟ್ ಸಮುದಾಯ ಅಭಿವೃದ್ಧಿ ಯೋಜನೆ (ಎಚ್ಐಸಿಡಿಪಿ) ಅಡಿಯಲ್ಲಿ ಬಾಂಗ್ಲಾ ಮೊತ್ತ ಟಕಾ 97 ಲಕ್ಷ ಅನುದಾನದ ನೆರವು ನೀಡಿತ್ತು.
ಯೋಜನೆಯ ಆನ್ಲೈನ್ ಉದ್ಘಾಟನಾ ಸಂದರ್ಭದಲ್ಲಿ ಮಾತನಾಡಿದ ಹೈಕಮಿಷನರ್ ರಿವಾ ಗಂಗೂಲಿ ದಾಸ್, ಬಾಂಗ್ಲಾದೇಶದ ಅತ್ಯಂತ ಹಳೆಯ ದೇವಾಲಯಗಳ ನವೀಕರಣಕ್ಕೆ ಬೆಂಬಲ ನೀಡಿದಕ್ಕಾಗಿ ಬಾಂಗ್ಲಾ ಬಗ್ಗೆ ಸಂತೋಷ ವ್ಯಕ್ತಪಡಿಸಿದರು. ಉಭಯ ದೇಶಗಳ ಹಂಚಿಕೆಯ ಪರಂಪರೆ ಮತ್ತು ಸಂಸ್ಕೃತಿಯನ್ನು ಕಾಪಾಡುವಲ್ಲಿ ಭಾರತವು ಬಾಂಗ್ಲಾದೇಶದ ಬದ್ಧ ಪಾಲುದಾರನಾಗಿ ಮುಂದುವರೆದಿದೆ, ಇದು ಜನರಿಂದ ಜನರ ಸಂಬಂಧವನ್ನು ಮತ್ತಷ್ಟು ಬಲಪಡಿಸುತ್ತದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.