ನವದೆಹಲಿ: ಕೋವಿಡ್ -19 ಬಿಕ್ಕಟ್ಟಿನ ಈ ಸಮಯದಲ್ಲಿ ಮನಸ್ಸಿಗೆ ತುಸು ನೆಮ್ಮದಿಯನ್ನು ನೀಡುವ ಸುದ್ದಿ ಹೊರ ಬಿದ್ದಿದೆ. ಅದೇನೆಂದರೆ ದೇಶದಲ್ಲಿ ಕೊರೋನಾವೈರಸ್ ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ 10 ಲಕ್ಷಗಳನ್ನು ದಾಟಿದೆ ಎಂದು ಭಾರತ ಸರ್ಕಾರ ಗುರುವಾರ ಬಹಿರಂಗಪಡಿಸಿದೆ.
ಸಾಮಾಜಿಕ ಮಾಧ್ಯಮದಲ್ಲಿ ಈ ಘೋಷಣೆ ಮಾಡಿರುವ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು, ಈ ಸಾಧನೆಯನ್ನು ಮುಂಚೂಣಿ ಆರೋಗ್ಯ ಕಾರ್ಯಕರ್ತರ ಸಮರ್ಪಣೆ ಮತ್ತು ನಿಸ್ವಾರ್ಥ ತ್ಯಾಗಕ್ಕೆ ಸಮರ್ಪಿಸಿದೆ.
“ಭಾರತದಲ್ಲಿ ಕೋವಿಡ್ -19ನಿಂದ 10 ಲಕ್ಷಕ್ಕೂ ಹೆಚ್ಚು ಜನರು ಚೇತರಿಸಿಕೊಂಡಿರುವುದು ಮಹತ್ವದ ಹೆಗ್ಗುರುತಾಗಿದೆ. ಇದು ನಮ್ಮ ವೈದ್ಯರು, ದಾದಿಯರು ಮತ್ತು ಎಲ್ಲಾ ಮುಂಚೂಣಿ ಆರೋಗ್ಯ ಕಾರ್ಯಕರ್ತರನ್ನು ಎದ್ದು ನಿಂತು ಶ್ಲಾಘಿಸುವ ಸಂದರ್ಭವಾಗಿದೆ. ಅವರ ಕರ್ತವ್ಯ ಮತ್ತು ನಿಸ್ವಾರ್ಥ ತ್ಯಾಗ, ಸಂಪೂರ್ಣ ಸಮರ್ಪಣೆಯೇ ಕೋವಿಡ್ -19 ರೋಗಿಗಳ ಅಪಾರ ಚೇತರಿಕೆಗೆ ಕಾರಣವಾಗಿದೆ” ಎಂದು ಆರೋಗ್ಯ ಸಚಿವಾಲಯ ಟ್ವಿಟರ್ನಲ್ಲಿ ತಿಳಿಸಿದೆ.
ಕೇಂದ್ರ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಕೈಗೊಂಡ ‘ಟೆಸ್ಟ್ ಟ್ರ್ಯಾಕ್ ಟ್ರೀಟ್’ ಕಾರ್ಯತಂತ್ರದ ಸಂಘಟಿತ ಅನುಷ್ಠಾನದ ಪರಿಣಾಮವಾಗಿ ಭಾರತದಲ್ಲಿ ಸಾವಿನ ಪ್ರಮಾಣವು ಹಂತಹಂತವಾಗಿ ಕುಸಿಯುತ್ತಿದೆ.
“ಭಾರತದ ಕೋವಿಡ್ -19 ಪ್ರಕರಣದ ಸಾವಿನ ಪ್ರಮಾಣ ಜಾಗತಿಕ ಪ್ರಮಾಣಕ್ಕಿಂತ ಕಡಿಮೆಯಾಗಿದೆ. ಸಾವಿನ ಪ್ರಮಾಣ ಜೂನ್ 19ರಂದು ಇದ್ದ ಶೇ 3.3 ರಿಂದ ಈ ಬುಧವಾರ ಶೇಕಡಾ 2.23 ಕ್ಕೆ ಇಳಿದಿದೆ, ಇದು ಏಪ್ರಿಲ್ 1 ರ ನಂತರದ ಕನಿಷ್ಠ ಪ್ರಮಾಣವಾಗಿದೆ ”ಎಂದು ಆರೋಗ್ಯ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
— Ministry of Health (@MoHFW_INDIA) July 30, 2020
This is an occasion to stand up and applaud our doctors, nurses and all frontline healthcare workers.
— Ministry of Health (@MoHFW_INDIA) July 30, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.