ನವದೆಹಲಿ: “ಡಾ.ಹೆಡ್ಗೆವಾರ್ ಅವರ ಸಂಘ ಗಂಗಾ ದೀಕ್ಷಾ, ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಮತಾ ಗಂಗಾ ದೀಕ್ಷಾದ ಮೂಲವನ್ನು ಹೊಂದಿರುವ ಪವಿತ್ರ ಕೇಂದ್ರ ನಾಗ್ಪುರದಲ್ಲಿ ಮರ್ಯಾದಾ ಪುರುಷೋತ್ತಮ ಶ್ರೀರಾಮನ ಜನ್ಮಸ್ಥಳದ ಗೌರವಾರ್ಥ ಪತ್ರಿಕಾಗೋಷ್ಠಿ ನಡೆಯುತ್ತಿದೆ ಎಂಬುದು ನನಗೆ ಸಂತೋಷ ತಂದಿದೆ. ಮರ್ಯಾದಾ ಪುರುಷೋತ್ತಮ ಶ್ರೀರಾಮ ತನ್ನ ಜೀವನದ ಮೂಲಕ ಸಾಮಾಜಿಕ ಸೌಹಾರ್ದತೆ ಮತ್ತು ಸಬಲೀಕರಣದ ಸಂದೇಶವನ್ನು ಸಾರಿದ್ದಾನೆ. ಶ್ರೀರಾಮನ ದೇವಾಲಯದ ಅಡಿಪಾಯ ಮತ್ತು ಪವಿತ್ರ ಸಮಾರಂಭದ ಭಾಗವಾಗಲು ದೇಶದಾದ್ಯಂತದ ಸಾವಿರಾರು ಪವಿತ್ರ ನದಿಗಳ, ಪುಣ್ಯ ಕ್ಷೇತ್ರಗಳ ಮತ್ತು ದೇಗುಲಗಳ ಪವಿತ್ರ ಜಲವನ್ನು ಮತ್ತು ಮಣ್ಣನ್ನು ಅಯೋಧ್ಯೆಗೆ ತರಲಾಗಿದೆ. ಇದು ಭಾರತದ ಒಗ್ಗಟ್ಟನ್ನು ಪ್ರದರ್ಶಿಸುತ್ತದೆ ಮತ್ತು ಸಂಸ್ಕೃತಿ, ರಾಷ್ಟ್ರೀಯತೆ, ಮಾನವೀಯತೆ, ರಾಷ್ಟ್ರೀಯ ಏಕತೆ, ಪ್ರಾದೇಶಿಕ ಸಮಗ್ರತೆಯನ್ನು ಸದಾ ಎತ್ತಿಹಿಡಿಯಲು ಮತ್ತು ಆಚರಿಸಲು ಜನರಿಗೆ ಪ್ರೇರೇಪಣೆ ನೀಡುತ್ತದೆ” ಎಂದು ವಿಶ್ವ ಹಿಂದೂ ಪರಿಷತ್ನ ಕೇಂದ್ರ ಪ್ರಧಾನ ಕಾರ್ಯದರ್ಶಿ ಶ್ರೀ ಮಿಲಿಂದ್ ಪರಂಡೆ ಹೇಳಿದರು.
ಶ್ರೀರಾಮನಿಂದ ಅಹಲ್ಯೆಗೆ ದೊರೆತ ವಿಮೋಚನೆ, ಶಬರಿಗೆ ದೊರೆತ ಗೌರವ ಮತ್ತು ನಿಶಾದ್ರಜನಿಗೆ ಸಿಕ್ಕ ಔದಾರ್ಯ ಸಾಮಾಜಿಕ ಸಾಮರಸ್ಯದ ಅತ್ಯುತ್ತಮ ನಿದರ್ಶನಗಳಾಗಿವೆ ಎಂದು ಅವರು ಹೇಳಿದರು. ಶ್ರೀ ರಾಮ ಜನ್ಮಭೂಮಿಯ ಶಿಲಾನ್ಯಾಸವನ್ನು 1989 ರಲ್ಲಿ ಅನೇಕ ಪೂಜ್ಯ ಸಂತರ ಸಮ್ಮುಖದಲ್ಲಿ ಪರಿಶಿಷ್ಟ ಜಾತಿಯ ಶ್ರೀ ಕಾಮೇಶ್ವರ ಚೌಪಾಲ್ ಅವರ ಕೈಯಿಂದ ನಡೆಸಲಾಯಿತು, ಇಂದು ಅವರು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ನ ಗೌರವಾನ್ವಿತ ಟ್ರಸ್ಟಿಯೂ ಆಗಿದ್ದಾರೆ ಎಂದರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಜನ್ಮಸ್ಥಳವಾದ ನಾಗಪುರದಿಂದ ಆಗಲಿ, ಅಥವಾ ಸಂತ ರವಿದಾಸ್ ಅವರ ಜನ್ಮಸ್ಥಳವಾದ ಕಾಶಿಯಿಂದ ಆಗಲಿ , ಅಥವಾ ಬಿಹಾರದ ಸೀತಮಾರ್ಹಿಯಲ್ಲಿರುವ ಮಹರ್ಷಿ ವಾಲ್ಮೀಕಿ ಆಶ್ರಮ ಅಥವಾ ಮಹಾರಾಷ್ಟ್ರದ ಗಾಂಧಿಯಾ ಜಿಲ್ಲೆಯ ಕಚರ್ಗಡ್ನ ವಿದರ್ಭದಿಂದಾಗಲಿ, ಮಧ್ಯಪ್ರದೇಶದ ಪವಿತ್ರ ಭೂಮಿ ತಾಂಟಿಯಾ ಭೀಲ್ನಿಂದ ಆಗಲಿ, ಪಂಜಾಬ್ನ ಅಮೃತಸರದ ಶ್ರೀ ಹರ್ಮಂದೀರ್ ಸಾಹಿಬ್ ಅಥವಾ ಸ್ವರ್ಣ ಮಂದಿರ ಅಥವಾ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಜನ್ಮಸ್ಥಳ ಅಥವಾ ದೆಹಲಿಯ ಜೈನ್ ಲಾಲ್ ಮಂದಿರ ಅಥವಾ ಮಹಾತ್ಮ ಗಾಂಧಿ 72 ದಿನ ವಾಸಿಸಿದ್ದ ದೆಹಲಿಯ ವಾಲ್ಮೀಕಿ ದೇವಸ್ಥಾನದಿಂದಾಗಲಿ ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿಯಲ್ಲಿ ನಡೆಯಲಿರುವ ಪವಿತ್ರ ಸಮಾರಂಭಕ್ಕಾಗಿ ದೇಶಾದ್ಯಂತದ ಸಾವಿರಾರು ಪವಿತ್ರ ಯಾತ್ರಾ ಕೇಂದ್ರಗಳು ಮತ್ತು ಪವಿತ್ರ ನದಿಗಳ ನೀರನ್ನು ಪವಿತ್ರ ಭೂಮಿಗೆ ಸಡಗರ ಮತ್ತು ಸಂತೋಷದಿಂದ ಕಳುಹಿಸಲಾಗುತ್ತಿದೆ ಎಂದು ಅವರು ಹೇಳಿದರು.
ಎಲ್ಲಾ ರಾಮ ಭಕ್ತರು 2020 ರ ಆಗಸ್ಟ್ 5 ರಂದು ಬೆಳಿಗ್ಗೆ 10.30ರಂದು ತಮ್ಮ ಮನೆಗಳು, ಸಂಸ್ಥೆಗಳು, ಮಠಗಳು, ಆಶ್ರಮಗಳು, ದೇವಾಲಯಗಳು ಇತ್ಯಾದಿಗಳಲ್ಲಿ ಸಾಮೂಹಿಕವಾಗಿ ಕುಳಿತುಕೊಂಡು ಆರಾಧನೆ, ಭಜನ, ಕೀರ್ತನೆ, ಸ್ಮರಣೆ, ಆರತಿ ಇತ್ಯಾದಿಗಳನ್ನು ಆಯಾ ಆರಾಧಿತ ದೇವತೆಗಳಿಗೆ / ದೇವರಿಗೆ ನಡೆಸಬೇಕು ಮತ್ತು ಪ್ರಸಾದವನ್ನು ವಿತರಣೆ ಮಾಡಬೇಕು. ಅಯೋಧ್ಯೆ ಕಾರ್ಯಕ್ರಮವನ್ನು ಸಮಾಜಕ್ಕೆ ನೇರಪ್ರಸಾರ ಮಾಡಲು ಸಾಧ್ಯವಿರುವ ಎಲ್ಲ ವ್ಯವಸ್ಥೆಗಳನ್ನು ಮಾಡಬೇಕು. ಮನೆಗಳು, ನೆರೆಹೊರೆಗಳು, ಹಳ್ಳಿಗಳು, ಮಾರುಕಟ್ಟೆಗಳು, ಮಠಗಳು, ಗುರುದ್ವಾರಗಳು, ಆಶ್ರಮಗಳು ಇತ್ಯಾದಿಗಳನ್ನು ಅಲಂಕರಿಸಬೆಕು ಮತ್ತು ಸಂಜೆ ದೀಪಗಳನ್ನು ಹಚ್ಚಬೇಕು. ದೇವಾಲಯದ ನಿರ್ಮಾಣಕ್ಕಾಗಿ ಸಾಧ್ಯವಾದಷ್ಟು ದೇವಾಲಯಕ್ಕೆ ದೇಣಿಗೆ ನೀಡುವುದಾಗಿ ಪ್ರತಿಜ್ಞೆ ಮಾಡಬೇಕು. ಪ್ರಚಾರ ಸೇರಿದಂತೆ ಎಲ್ಲಾ ವಿಧಾನಗಳನ್ನು ಬಳಸಿಕೊಂಡು ರಾಮ ಭಕ್ತರು ಈ ಭವ್ಯ ಕಾರ್ಯಕ್ರಮವು ಸಮಾಜದ ಹೆಚ್ಚು ಹೆಚ್ಚು ಜನರನ್ನು ತಲುಪುವಂತೆ ನೋಡಿಕೊಳ್ಳಬೇಕು. ಖಂಡಿತವಾಗಿಯೂ, ಈ ಎಲ್ಲಾ ಯೋಜನೆಗಳು ಮತ್ತು ಕಾರ್ಯಕ್ರಮಗಳಲ್ಲಿ, ಮುಖಗವಸುಗಳನ್ನು ಧರಿಸುವುದು, ಕೈ ಸ್ವಚ್ಛಗೊಳಿಸುವುದು, ಸಾಮಾಜಿಕ ಅಂತರ ಇತ್ಯಾದಿಗಳನ್ನು ಒಳಗೊಂಡಂತೆ ಎಲ್ಲಾ ಕೋವಿಡ್-19 ವಿರುದ್ಧದ ಸರ್ಕಾರಿ ಮತ್ತು ಆಡಳಿತಾತ್ಮಕ ನಿಯಮಾವಳಿಗಳನ್ನು ಪಾಲನೆ ಮಾಡಬೇಕು. ಈ ಮೂಲಕ ಸಾಂಕ್ರಾಮಿಕ ರೋಗದಿಂದ ನಮ್ಮನ್ನು ಮತ್ತು ಎಲ್ಲರನ್ನೂ ರಕ್ಷಿಸಬೇಕು ಎಂದು ವಿಎಚ್ಪಿ ಪ್ರಧಾನಿ ಕಾರ್ಯದರ್ಶಿ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.