ನವದೆಹಲಿ: ಕೇಂದ್ರ ಇಂಧನ ಸಚಿವ ಆರ್ ಕೆ ಸಿಂಗ್ ಬುಧವಾರ 800 ಮೆಗಾವ್ಯಾಟ್ ಸಾಮರ್ಥ್ಯ ಹೊಂದಿರುವ ಮೂರು ಪವನ ಇಂಧನ ಯೋಜನೆಗಳನ್ನು ರಾಷ್ಟ್ರಕ್ಕೆ ಸಮರ್ಪಿಸಿದ್ದಾರೆ ಎಂದು ಇಂಧನ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ವರದಿಗಳ ಪ್ರಕಾರ ಸೌರಶಕ್ತಿ ಕಾರ್ಪೊರೇಷನ್ ಆಫ್ ಇಂಡಿಯಾ (ಎಸ್ಇಸಿಐ) ನೀಡಿದ ಈ ಯೋಜನೆಗಳನ್ನು ಸಿಂಗಾಪುರ ಮೂಲದ ಸೆಂಬ್ಕಾರ್ಪ್ ಇಂಡಸ್ಟ್ರೀಸ್ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾದ ಸೆಂಬ್ಕಾರ್ಪ್ ಎನರ್ಜಿ ಇಂಡಿಯಾ ಅಭಿವೃದ್ಧಿಪಡಿಸಿದೆ.
ವರ್ಚುವಲ್ ಸಮಾರಂಭವೊಂದರಲ್ಲಿ ಕೇಂದ್ರ ಇಂಧನ ಸಚಿವರು ಸೆಂಬ್ಕಾರ್ಪ್ನ ಅತ್ಯಾಧುನಿಕ ಎಸ್ಇಸಿಐ 1, 2 ಮತ್ತು 3 ಯೋಜನೆಗಳನ್ನು ರಾಷ್ಟ್ರಕ್ಕೆ ಅರ್ಪಿಸಿದರು.
ತನ್ನ 300 ಮೆಗಾವ್ಯಾಟ್ ಎಸ್ಇಸಿಐ 3 ವಿಂಡ್ ಯೋಜನೆಯನ್ನು ಪೂರ್ಣವಾಗಿ ಆರಂಭಿಸುವುದರೊಂದಿಗೆ, ಎಸ್ಇಸಿಐ ಪ್ರದಾನಿಸಿದ ಮೊದಲ ಮೂರು ಪವನ ವಿದ್ಯುತ್ ಹರಾಜಿನಲ್ಲಿ ಸಿಕ್ಕ ಯೋಜನೆಗಳನ್ನು ಸಂಪೂರ್ಣವಾಗಿ ಆರಂಭಿಸಿದ ಮೊದಲ ಸ್ವತಂತ್ರ ವಿದ್ಯುತ್ ಉತ್ಪಾದಕ ಎಂಬ ಹೆಗ್ಗಳಿಕೆಗೆ ಸೆಂಬ್ಕಾರ್ಪ್ ಪಾತ್ರವಾಗಿದೆ ಎಂದು ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.
ಒಟ್ಟಾರೆಯಾಗಿ, ಈ ಸ್ವತ್ತುಗಳು 600,000 ಕ್ಕೂ ಹೆಚ್ಚು ಮನೆಗಳಿಗೆ ವಿದ್ಯುತ್ ನೀಡಲು ಸಾಕಷ್ಟು ಶುದ್ಧ ಶಕ್ತಿಯನ್ನು ಒದಗಿಸುತ್ತವೆ ಮತ್ತು ವರ್ಷಕ್ಕೆ 2 ಮಿಲಿಯನ್ ಟನ್ / ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆಯನ್ನು ತಪ್ಪಿಸುತ್ತವೆ ಎಂದು ಅದು ಹೇಳಿದೆ.
ಸಿಇಎಲ್ ಮತ್ತು ಸಿಂಗಾಪುರ ಸರ್ಕಾರವು ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಮಾಡಿದ ಕೆಲಸ ಮತ್ತು ಬದ್ಧತೆಯನ್ನು ಸಚಿವರು ಅಭಿನಂದಿಸಿದರು. ಇಂಧನ ಪರಿವರ್ತನೆಯನ್ನು ಸಾಧಿಸಲು ಸರ್ಕಾರ ನಿರ್ಧರಿಸಿದೆ, ಇದಕ್ಕಾಗಿ ವಲಯದಲ್ಲಿನ ತನ್ನ ಪಾಲುದಾರರಿಗೆ ಪಾರದರ್ಶಕತೆ, ನ್ಯಾಯಸಮ್ಮತತೆ ಮತ್ತು ಉತ್ತಮ ವೇದಿಕೆಯನ್ನು ನಮ್ಮ ಸರ್ಕಾರ ಖಚಿತಪಡಿಸುತ್ತದೆ ಎಂದು ಅವರು ಹೇಳಿದರು.
ಮೊದಲ ಎಸ್ಇಸಿಐ ಹರಾಜಿನಡಿಯಲ್ಲಿ, ಸೆಂಬ್ಕಾರ್ಪ್ 250 ಮೆಗಾವ್ಯಾಟ್ ಪವನ ವಿದ್ಯುತ್ ಸಾಮರ್ಥ್ಯವನ್ನು ತಮಿಳುನಾಡಿನ ತೂತುಕುಡಿ ಮತ್ತು ಇನ್ನೂ 250 ಮೆಗಾವ್ಯಾಟ್ ಮತ್ತು 300 ಮೆಗಾವ್ಯಾಟ್ ಅನ್ನು ಗುಜರಾತ್ನ ಭುಜ್ನಲ್ಲಿ ಸ್ಥಾಪಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.