ನವದೆಹಲಿ: ದೇಶವು ಶೀಘ್ರದಲ್ಲೇ ಏಳು ಹೊಸ ಮಾರ್ಗಗಳಲ್ಲಿ ಹೆಚ್ಚಿನ ವೇಗದ ಬುಲೆಟ್ ರೈಲುಗಳ ಜಾಲವನ್ನು ಹೊಂದಲಿದ್ದು, ಯೋಜನೆಯನ್ನು ತ್ವರಿತಗೊಳಿಸಲು ಭಾರತೀಯ ರೈಲ್ವೆ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ಎಚ್ಎಐ) ಜೊತೆಗೆ ಸೇರಿ ಹೆಚ್ಚುವರಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆಯನ್ನು ಪ್ರಾರಂಭಿಸಲಿದೆ .
ವರದಿಗಳ ಪ್ರಕಾರ, ದೇಶದ ರೈಲು ಸಾರಿಗೆ ಜಾಲದ ಸಮಗ್ರ ಅಭಿವೃದ್ಧಿಗಾಗಿ ಗ್ರೀನ್ಫೀಲ್ಡ್ ಎಕ್ಸ್ಪ್ರೆಸ್ವೇಗಳ ಉದ್ದಕ್ಕೂ ಹೆಚ್ಚಿನ ವೇಗದ ರೈಲುಗಳಿಗೆ ಹಳಿಗಳನ್ನು ಹಾಕಲು ಎನ್ಎಚ್ಎಐ ಶೀಘ್ರದಲ್ಲೇ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಿದೆ.
ಕೇಂದ್ರ ಸಚಿವ ನಿತಿನ್ ಗಡ್ಕರಿ ನೇತೃತ್ವದ ಮೂಲಸೌಕರ್ಯ ಸಚಿವರ ಗುಂಪು ಇತ್ತೀಚೆಗೆ ನಡೆಸಿದ ಸಭೆಯಲ್ಲಿ ಹೆಚ್ಚುವರಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಸಭೆಯಲ್ಲಿ, ಎನ್ಎಚ್ಎಐ ಭೂಸ್ವಾಧೀನದ ಜವಾಬ್ದಾರಿ ವಹಿಸಿಕೊಳ್ಳಲಿದೆ ಎಂದು ನಿರ್ಧರಿಸಲಾಯಿತು ಮತ್ತು ಈ ಪ್ರಕ್ರಿಯೆಯನ್ನು ಮುಂದೆ ತೆಗೆದುಕೊಂಡು ಹೋಗಲು 4 ಸದಸ್ಯರ ಸಮಿತಿಯನ್ನು ರಚಿಸಲಾಯಿತು.
ನಾಲ್ಕು ಸದಸ್ಯರ ಕಾರ್ಯಪಡೆಯು ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಮತ್ತು ವೆಚ್ಚವನ್ನು ಹಂಚಿಕೊಳ್ಳಲು ಇರುವ ವಿಧಾನಗಳನ್ನು ರೂಪಿಸುತ್ತದೆ. ಭಾರತೀಯ ರೈಲ್ವೆ ದೇಶದಲ್ಲಿ 7 ಹೈಸ್ಪೀಡ್ ರೈಲು ಮಾರ್ಗಗಳ ನೀಲನಕ್ಷೆಯನ್ನು ಸಿದ್ಧಪಡಿಸುವ ಪ್ರಕ್ರಿಯೆಯಲ್ಲಿದೆ ಎಂಬುದು ಇಲ್ಲಿ ಗಮನಾರ್ಹ.
ವರದಿಗಳ ಪ್ರಕಾರ, ಭಾರತೀಯ ರೈಲ್ವೆ ದೇಶದ 7 ಪ್ರಮುಖ ಹೊಸ ಮಾರ್ಗಗಳಲ್ಲಿ ಬುಲೆಟ್ ರೈಲುಗಳನ್ನು ಓಡಿಸಲು ಯೋಜಿಸಿದೆ.
ಏಳು ಹೈಸ್ಪೀಡ್ ರೈಲು ಕಾರಿಡಾರ್ಗಳು ದೆಹಲಿಯಿಂದ ವಾರಣಾಸಿಗೆ ನೋಯ್ಡಾ-ಆಗ್ರಾ-ಲಕ್ನೋ ಮೂಲಕ, ಪಾಟ್ನಾ ಮೂಲಕ ವಾರಣಾಸಿಯಿಂದ ಹೌರಾಕ್ಕೆ, ಜೈಪುರ ಮತ್ತು ಉದಯಪುರದ ಮೂಲಕ ದೆಹಲಿಯಿಂದ ಅಹಮದಾಬಾದಿಗೆ, ಲುಧಿಯಾನ ಮತ್ತು ಜಲಂಧರ್ ಮೂಲಕ ದೆಹಲಿಯಿಂದ ಅಮೃತಸರಕ್ಕೆ, ಮುಂಬಯಿಯಿಂದ ನಾಗ್ಪುರಕ್ಕೆ ನಾಸಿಕ್ ಮೂಲಕ, ಮುಂಬೈನಿಂದ ಹೈದರಾಬಾದಿಗೆ ಪುಣೆ ಮೂಲಕ ಮತ್ತು ಚೆನ್ನೈನಿಂದ ಮೈಸೂರಿಗೆ ಬೆಂಗಳೂರು ಮೂಲಕ ಹಾದು ಹೋಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.