ನವದೆಹಲಿ: ಭಾರತದಿಂದ ಕಳವಾಗಿರುವ ಅಮೂಲ್ಯ ಪುರಾತನ ವಿಗ್ರಹಗಳನ್ನು ಪತ್ತೆ ಹಚ್ಚುವ ಮತ್ತು ಭಾರತಕ್ಕೆ ತರುವ ವಿಚಾರದಲ್ಲಿ ಮಹತ್ವದ ಜಯ ಸಿಕ್ಕಿದ್ದು, ರಾಜಸ್ಥಾನದ ಘಟೇಶ್ವರ ಮಹಾದೇವ ದೇಗುಲದಿಂದ ಕಳವಾಗಿದ್ದ 10ನೇ ಶತಮಾನದ ಶಿವನ ‘ನಟೇಶ’ ವಿಗ್ರಹವನ್ನು ಹಿಂಪಡೆಯುವಲ್ಲಿ ಪುರಾತತ್ವ ಇಲಾಖೆ ಯಶಸ್ವಿಯಾಗಿದೆ. ಈ ವಿಗ್ರಹವನ್ನು ಲಂಡನ್ನ ಭಾರತೀಯ ಹೈಕಮಿಷನ್, ಭಾರತೀಯ ಪುರಾತತ್ವ ಇಲಾಖೆಗೆ ಹಸ್ತಾಂತರ ಮಾಡಿದೆ.
1998 ರಲ್ಲಿ ಈ ವಿಗ್ರಹವನ್ನು ಕಳವು ಮಾಡಲಾಗಿತ್ತು. ಮೂಲ ವಿಗ್ರಹವನ್ನು ಕಳವು ಮಾಡಿ ನಕಲಿ ವಿಗ್ರಹವನ್ನಿಡುವ ಮೂಲಕ ವಿಗ್ರಹದ ಕಳ್ಳಸಾಗಣೆ ನಡೆದಿತ್ತು. ಈ ವಿಗ್ರಹವನ್ನು ಹೊಂದಿದ್ದ ಲಂಡನ್ನಿನ ಸಂಗ್ರಹಕ ಜೆ. ಕಾಸ್ಮಿನ್ ಈ ವಿಗ್ರಹವನ್ನು 2005 ರಲ್ಲಿ ಭಾರತೀಯ ಹೈಕಮಿಷನ್ಗೆ ಹಸ್ತಾಂತರ ಮಾಡಿದ್ದರು. ಇದೀಗ 23 ವರ್ಷಗಳ ಬಳಿಕ ಭಾರತದಿಂದ ಕಳ್ಳಸಾಗಣೆ ಮೂಲಕ ವಿದೇಶ ಸೇರಿದ್ದ ನಟರಾಜನ ಪುರಾತನವಾದ ಅಮೂಲ್ಯ ವಿಗ್ರಹ ಮತ್ತೆ ಭಾರತಕ್ಕೆ ಬರುತ್ತಿದೆ.
ಈ ಸಂಬಂಧ ಅಧಿಕಾರಿಗಳು ಹಳೆಯ ಎಲ್ಲಾ ದಾಖಲೆಗಳನ್ನು ಪರಿಶೀಲನೆ ಮಾಡಿದ್ದು, ಇದು ಘಟೇಶ್ವರ ಮಹಾದೇವ ದೇಗುಲದಿಂದಲೇ ಕಳವಾಗಿದ್ದ ವಿಗ್ರಹ ಎಂಬುದನ್ನು ದೃಢಪಡಿಸಿದ್ದಾರೆ.
HCI with support of HM Government repatriates to Archeological Survey of India, the 10th Century idol of Lord Shiva – 'Natesh', stolen in 1998 from Ghateshwar Temple, Baroli, Rajasthan. #IndiaUK @TheNehruCentre @DCMS @ASIGoI @authoramish @MEAIndia pic.twitter.com/vr6N770k47
— India in the UK (@HCI_London) July 29, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.