ನವದೆಹಲಿ: ಭಾರತಕ್ಕೆ ಬಂದಿಳಿದ ರಫೇಲ್ ಫೈಟರ್ ಜೆಟ್ಗಳನ್ನು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಬುಧವಾರ ಸ್ವಾಗತಿಸಿದರು. ಅಲ್ಲದೇ, ಚೀನಾ ಮತ್ತು ಪಾಕಿಸ್ಥಾನಕ್ಕೆ ಕಠಿಣ ಎಚ್ಚರಿಕೆ ನೀಡಿದರು. ಭಾರತೀಯ ವಾಯುಪಡೆಯ ಹೊಸ ಸಾಮರ್ಥ್ಯದ ಬಗ್ಗೆ ಯಾರಾದರೂ ಚಿಂತಿಸುವರಾದರೆ ಅದು ಪ್ರಾದೇಶಿಕ ಸಮಗ್ರತೆಗೆ ಬೆದರಿಕೆ ಹಾಕುವವರು ಮಾತ್ರ ಆಗಿರುತ್ತಾರೆ ಎಂದಿದ್ದಾರೆ.
ಭಾರತದ ಮೊದಲ ಬ್ಯಾಚ್ನ ಐದು ರಫೇಲ್ ವಿಮಾನ ಅಂಬಾಲಾ ವಾಯುಪಡೆಯ ನೆಲೆಯಲ್ಲಿ ಮಧ್ಯಾಹ್ನ 3.14 ರ ಸುಮಾರಿಗೆ ವಿಧ್ಯುಕ್ತ ಸ್ವಾಗತ ಪಡೆಯಿತು ಮತ್ತು ಅಭೂತಪೂರ್ವ ಭದ್ರತೆಯ ನಡುವೆ ಬಂದಿಳಿಯಿತು. ಜೆಟ್ಗಳು ಜುಲೈ 27 ರಂದು ಫ್ರೆಂಚ್ ಬಂದರು ನಗರವಾದ ಬೋರ್ಡೆಕ್ಸ್ನ ಮೆರಿಗ್ನಾಕ್ ಏರ್ಬೇಸ್ನಿಂದ ಹೊರಟವು ಮತ್ತು 7,000 ಕಿ.ಮೀ ದೂರವನ್ನು ಕ್ರಮಿಸಿ ಗಾಳಿಯಿಂದ ಗಾಳಿಗೆ ಇಂಧನ ತುಂಬಿಸುವ ಮೂಲಕ ಹಾರಿ ಬಂದವು.
ಟ್ವಿಟ್ ಮಾಡಿರುವ ರಕ್ಷಣಾ ಸಚಿವರು, “ನಾನು ಹೇಳಲು ಬಯಸುತ್ತೇನೆ ಏನೆಂದರೆ, ಭಾರತೀಯ ವಾಯುಪಡೆಯ ಈ ಹೊಸ ಸಾಮರ್ಥ್ಯದ ಬಗ್ಗೆ ಯಾರಾದರೂ ಚಿಂತಿಸಬೇಕಾದರೆ ಅಥವಾ ಟೀಕಿಸಬೇಕಾದರೆ, ಅದು ನಮ್ಮ ಪ್ರಾದೇಶಿಕ ಸಮಗ್ರತೆಗೆ ಬೆದರಿಕೆ ಹಾಕುವವರು ಮಾತ್ರ ಆಗಿರುತ್ತಾರೆ” ಎಂದಿದ್ದಾರೆ.
“ಐಎಎಫ್ನ ಕಾರ್ಯಾಚರಣೆಯ ಅವಶ್ಯಕತೆಗಳನ್ನು ಸಂಪೂರ್ಣವಾಗಿ ಪೂರೈಸಿದ ಮೇಲೆ ರಫೇಲ್ ಜೆಟ್ಗಳನ್ನು ಖರೀದಿಸಲಾಯಿತು. ಈ ಖರೀದಿಯ ವಿರುದ್ಧದ ಆಧಾರರಹಿತ ಆರೋಪಗಳಿಗೆ ಈಗಾಗಲೇ ಉತ್ತರಿಸಲಾಗಿದೆ ಮತ್ತು ಇತ್ಯರ್ಥಪಡಿಸಲಾಗಿದೆ” ಎಂದಿದ್ದಾರೆ.
“ಈ ವಿಮಾನವು ಉತ್ತಮ ಹಾರುವ ಕಾರ್ಯಕ್ಷಮತೆಯನ್ನು ಹೊಂದಿದೆ ಮತ್ತು ಅದರ ಶಸ್ತ್ರಾಸ್ತ್ರಗಳು, ರಾಡಾರ್ ಮತ್ತು ಇತರ ಸಂವೇದಕಗಳು ಮತ್ತು ಎಲೆಕ್ಟ್ರಾನಿಕ್ ವಾರ್ಫೇರ್ ಸಾಮರ್ಥ್ಯಗಳು ವಿಶ್ವದ ಅತ್ಯುತ್ತಮವಾದವುಗಳಾಗಿವೆ. ಭಾರತಕ್ಕೆ ಅದರ ಆಗಮನವು ನಮ್ಮ ದೇಶದ ಮೇಲೆ ಉಂಟಾಗುವ ಯಾವುದೇ ಬೆದರಿಕೆಯನ್ನು ತಡೆಯಲು ಐಎಎಫ್ ಅನ್ನು ಹೆಚ್ಚು ಬಲಪಡಿಸುತ್ತದೆ” ಎಂದಿದ್ದಾರೆ.
“ಈ ವಿಮಾನಗಳನ್ನು ಫ್ರಾನ್ಸ್ನೊಂದಿಗಿನ ಅಂತರ್-ಸರ್ಕಾರಿ ಒಪ್ಪಂದದ ಮೂಲಕ ಪಡೆಯಲು ಪ್ರಧಾನಿ ನರೇಂದ್ರ ಮೋದಿ ಸರಿಯಾದ ನಿರ್ಧಾರವನ್ನು ತೆಗೆದುಕೊಂಡಿದ್ದರಿಂದ ಮಾತ್ರ ರಫೇಲ್ ಜೆಟ್ ಖರೀದಿ ಸಾಧ್ಯವಾಯಿತು” ಎಂದಿದ್ದಾರೆ.
I would like to add, if it is anyone who should be worried about or critical about this new capability of the Indian Air Force, it should be those who want to threaten our territorial integrity.
— Rajnath Singh (@rajnathsingh) July 29, 2020
This aircraft has very good flying performance and its weapons, radar and other sensors and Electronic Warfare capabilities are amongst the best in the world. Its arrival in India will make the IAF much stronger to deter any threat that may be posed on our country.
— Rajnath Singh (@rajnathsingh) July 29, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.