ನವದೆಹಲಿ: ಭಾರತದ ರಕ್ಷಣಾ ವಲಯದ ಗೇಮ್ ಚೇಂಜರ್ ಎಂದೇ ಪರಿಗಣಿಸಲ್ಪಟ್ಟಿರುವ ರಫೇಲ್ ಯುದ್ಧ ವಿಮಾನ ಇಂದು ಭಾರತ ಭೂಮಿಯನ್ನು ಸ್ಪರ್ಶ ಮಾಡಲಿದೆ. ಇಂದು ಮಧ್ಯಾಹ್ನದ ನಂತರ ಹರಿಯಾಣದ ಅಂಬಾಲ ವಾಯುನೆಲೆಯಲ್ಲಿ ಅದು ಭಾರತೀಯ ವಾಯುಸೇನೆಯನ್ನು ಸೇರ್ಪಡೆಗೊಳ್ಳಲಿದೆ.
ಎರಡು ದಶಕಗಳಲ್ಲೇ ಭಾರತದ ಮೊದಲ ಪ್ರಮುಕ ಯುದ್ಧ ವಿಮಾನ ಖರೀದಿ ಇದಾಗಿದ್ದು, ಇದನ್ನು ಸ್ವೀಕರಿಸಲು ವಾಯುಸೇನಾ ಮುಖ್ಯಸ್ಥ ಆರ್ಕೆಎಸ್ ಭದೌರಿಯಾ ಅವರು ಅಂಬಾಲ ವಾಯುನೆಲೆಗೆ ತಲುಪಲಿದ್ದಾರೆ. ಫ್ರೆಂಚ್ ಏರೋಸ್ಪೇಸ್ ಪ್ರಮುಖ ಡೆಸಾಲ್ಟ್ ಏವಿಯೇಷನ್ನ 36 ರಫೇಲ್ ಜೆಟ್ಗಳಿಗಾಗಿ ಸೆಪ್ಟೆಂಬರ್ 23, 2016 ರಂದು 59,000 ಕೋಟಿ ರೂಪಾಯಿ ವೆಚ್ಚದ ಒಪ್ಪಂದವನ್ನು ಮಾಡಿಕೊಳ್ಳಲಾಗಿತ್ತು.
ಪಾಕಿಸ್ಥಾನದ ಗಡಿಯಿಂದ 200 ಕಿ.ಮೀ ದೂರದಲ್ಲಿರುವ ಅಂಬಾಲ ಏರ್ಬೇಸ್ ಬಳಿ ಭದ್ರತೆಯನ್ನು ಬಿಗಿಗೊಳಿಸಲಾಗಿದ್ದು, ಹತ್ತಿರದ ನಾಲ್ಕು ಹಳ್ಳಿಗಳಲ್ಲಿ ಜನ ಸೇರುವಿಕೆಯನ್ನು ನಿಷೇಧಿಸಲಾಗಿದೆ. ಜೆಟ್ ಇಳಿಯುವ ಸಮಯದಲ್ಲಿ ಜನರು ಟೆರೇಸ್ ಮೇಲೆ ನಿಲ್ಲದಂತೆ, ಫೋಟೋ ತೆಗೆಯದಂತೆ, ವಿಡಿಯೋ ಮಾಡದಂತೆಯೂ ಸೂಚನೆ ನೀಡಲಾಗಿದೆ. ಜೆಟ್ಗಳನ್ನು ಸ್ವಾಗತಿಸಲು ಸ್ಥಳೀಯ ಶಾಸಕರೊಬ್ಬರು ಇಂದು ಸಂಜೆ ಮೇಣದ ಬತ್ತಿಗಳನ್ನು ಹಚ್ಚುವಂತೆ ಜನರನ್ನು ಕೋರಿದ್ದಾರೆ.
ವಾಯುಸೇನಾ ಅಧಿಕಾರಿಗಳು ಪೈಲಟ್ ಮಾಡಿದ ಜೆಟ್ಗಳು ನೈರುತ್ಯ ಫ್ರಾನ್ಸ್ನ ಮೆರಿಗ್ನಾಕ್ನಿಂದ ಹೊರಟಿವೆ ಮತ್ತು ದಾರಿಯಲ್ಲಿ ಮಿಡ್ ಏರ್ನಲ್ಲಿ ಇಂಧನ ತುಂಬಿಸಿದವು. ನಿನ್ನೆ ವಾಯುಪಡೆಯು ಪೋಸ್ಟ್ ಮಾಡಿದ ಅದ್ಭುತ ದೃಶ್ಯ, ಫ್ರೆಂಚ್ ಟ್ಯಾಂಕರ್ನಿಂದ 30,000 ಅಡಿ ಎತ್ತರದಲ್ಲಿ ಜೆಟ್ಗಳು ಇಂಧನ ತುಂಬಿಸುವುದನ್ನು ತೋರಿಸಿದೆ.
ಫ್ರಾನ್ಸ್ ವಾಯುನೆಲೆಯನ್ನು ಹೊಂದಿರುವ ಯುಎಇ ರಾಷ್ಟ್ರದ ಅಲ್ ಧಫ್ರಾದಲ್ಲಿ ಜೆಟ್ಗಳು ನಿಲುಗಡೆ ಮಾಡಿದವು.
ರಫೇಲ್ಗಳಿಗೆ ಫ್ರೆಂಚ್ ವಾಯುಸೇನೆಯ ಎರಡು ಎ 330 ಫೀನಿಕ್ಸ್ ಎಂಆರ್ಟಿಟಿ ಇಂಧನ ತುಂಬುವ ವಿಮಾನಗಳು ಸಾಥ್ ನೀಡಿವೆ. ಅವುಗಳಲ್ಲಿ ಒಂದು 70 ವೆಂಟಿಲೇಟರ್ಗಳು, 100,000 ಟೆಸ್ಟ್ ಕಿಟ್ಗಳು ಮತ್ತು 10 ಆರೋಗ್ಯ ತಜ್ಞರ ತಂಡವನ್ನು ಕರೋನವೈರಸ್ ವಿರುದ್ಧದ ಹೋರಾಟದಲ್ಲಿ ಸಹಾಯ ಮಾಡಲು ಹೊಂದಿದೆ.
ಕಳೆದ ವರ್ಷ ಅಕ್ಟೋಬರ್ನಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಫ್ರಾನ್ಸ್ಗೆ ಭೇಟಿ ನೀಡಿದ ಸಂದರ್ಭದಲ್ಲಿ ಮೊದಲ ರಫೇಲ್ ಜೆಟ್ ಅನ್ನು ವಾಯುಸೇನೆಗೆ ಹಸ್ತಾಂತರಿಸುವ ಸಮಾರಂಭ ಏರ್ಪಟ್ಟಿತು. ಪೈಲಟ್ಗಳ ಮತ್ತು ಮೆಕ್ಯಾನಿಕ್ಗಳ ತರಬೇತಿಗಾಗಿ ವಿಮಾನಗಳು ಫ್ರಾನ್ಸ್ನಲ್ಲಿ ಇದುವರೆಗೆ ಉಳಿದಿದ್ದವು.
ಚೀನಾ ಮತ್ತು ಪಾಕಿಸ್ಥಾನದೊಂದಿಗಿನ ಉದ್ವಿಗ್ನತೆಯ ನಡುವೆ ಆಗಮಿಸಿರುವ ರಫೇಲ್ ಯುದ್ಧ ವಿಮಾನಗಳು ಭಾರತದ ವಾಯು ಶಕ್ತಿಯನ್ನು ಬೃಹತ್ ಪ್ರಮಾಣದಲ್ಲಿ ಹೆಚ್ಚಿಸುವ ನಿರೀಕ್ಷೆಯಿದೆ.
Indian Air Force appreciates the support provided by French Air Force for our Rafale journey back home. @Armee_de_lair @Indian_Embassy @Dassault_OnAir #Rafale#IndianAirForce pic.twitter.com/7Ec8oqOJmr
— Indian Air Force (@IAF_MCC) July 28, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.