ಅಯೋಧ್ಯೆ: ಉತ್ತರ ಪ್ರದೇಶದ ಅಯೋಧ್ಯೆಯ ರಾಮ ಜನ್ಮಭೂಮಿಯಲ್ಲಿ ನಿರ್ಮಾಣವಾಗಲಿರುವ ಭವ್ಯ ಮಂದಿರದ 2000 ಅಡಿ ಆಳದಲ್ಲಿ, ರಾಮ ಜನ್ಮಭೂಮಿಗೆ ಕುರಿತಾದಂತಹ ಇತಿಹಾಸವನ್ನು ನೆನಪಿಸುವ ‘ಟೈಂ ಕ್ಯಾಪ್ಸೂಲ್’ ಗಳನ್ನು ಅಳವಡಿಸಲಾಗುತ್ತದೆ ಎಂಬುದು ಕೇವಲ ವದಂತಿಯಾಗಿದೆ. ಇಂತಹ ಯಾವುದೇ ಉದ್ದೇಶ ಟ್ರಸ್ಟ್ ಗೆ ಇಲ್ಲ. ಇಂತಹ ವರದಿಗಳನ್ನು ಆಧಾರ ರಹಿತ ಮತ್ತು ಇದು ನಿಜವಲ್ಲ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತಾದಂತೆ ಟ್ರಸ್ಟ್ ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ವಿಡಿಯೋ ಮೂಲಕ ಸ್ಪಷ್ಟನೆ ನೀಡಿರುವ ಅವರು, ಮಂದಿರದ ವಿಚಾರವಾಗಿ ಇಂತಹ ಕೆಲವು ಅನಧಿಕೃತ ಸುದ್ದಿಗಳು ಹರಿದಾಡುವುದು ಕಂಡುಬರುತ್ತಿದ್ದು, ಇದು ಸತ್ಯಕ್ಕೆ ದೂರವಾಗಿದೆ. ಅಡಿಪಾಯದಲ್ಲಿ ಯಾವುದೇ ಟೈಮ್ ಕ್ಯಾಪ್ಸೂಲ್ಗಳನ್ನು ಅಳವಡಿಸಲು ಸಮಿತಿ ನಿರ್ಧರಿಸಿಲ್ಲ ಎಂದು ತಿಳಿಸಿದ್ದಾರೆ.
ಕೆಲ ದಿನಗಳಿಂದ ಈ ಕುರಿತಂತೆ ಸುಳ್ಳು ಸುದ್ದಿಯೊಂದು ಹಬ್ಬುತ್ತಿದೆ. ರಾಮ ಮತ್ತು ಅಯೋಧ್ಯೆಯ ಕುರಿತಾಗಿ ಮಾಹಿತಿ ನೀಡುವ ಟೈಮ್ ಕ್ಯಾಪ್ಸೂಲ್ ಗಳನ್ನು ಮಂದಿರದ ಅಡಿಪಾಯದಲ್ಲಿ ಅಳವಡಿಸಲಾಗುತ್ತಿದೆ, ಕಾಪರ್ ಪ್ಲೇಟ್ ಗಳನ್ನು ಬಳಸಿ ಮಂದಿರದ ಇತಿಹಾಸವನ್ನು ಬರೆದಿಡಲಾಗುತ್ತಿದೆ, ಮುಂದಿನ ಜನಾಂಗಕ್ಕೆ ಈ ಕುರಿತಾದ ಮಾಹಿತಿಯನ್ನು ತಿಳಿದುಕೊಳ್ಳಲು ಇವು ಪೂರಕವಾಗಿ ಕೆಲಸ ಮಾಡಲಿದೆ. ಈ ಕುರಿತಾಗಿ ನಿಖರ ಮಾಹಿತಿಗಳನ್ನು ನೀಡುವ ಸಲುವಾಗಿ ತಜ್ಞರ ಜೊತೆಗೆ ಚರ್ಚಿಸಲಾಗಿದೆ. ಸುಮಾರು 1000 ವರ್ಷಗಳ ಇತಿಹಾಸವನ್ನು ಈ ಕ್ಯಾಪ್ಸೂಲ್ ಪ್ರಸ್ತುತ ಪಡಿಸಲಿದೆ ಎಂದು ಸುಳ್ಳು ವದಂತಿಯೊಂದು ಹಬ್ಬಿತ್ತು. ಈ ವದಂತಿಗೆ ಇದೀಗ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಅವರೇ ಸ್ಪಷ್ಟನೆ ನೀಡಿದ್ದಾರೆ.
ಇನ್ನು ಆಗಸ್ಟ್ 5 ರಂದು ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣಕ್ಕೆ ಅಡಿಪಾಯ ಹಾಕುವ ಕಾರ್ಯಕ್ರಮ, ಭೂಮಿ ಪೂಜೆ ನೆರವೇರಲಿದೆ. ಈ ಕಾರ್ಯಕ್ರಮದಲ್ಲಿ ಕೇವಲ ಕೆಲವು ಜನರಷ್ಟೇ ಭಾಗವಹಿಸಲಿದ್ದು, ಮಾರಕ ಕೊರೋನಾ ಕಾರಣಕ್ಕೆ ಜನಸಾಮಾನ್ಯರಿಗೆ ಭಾಗವಹಿಸಲು ಅವಕಾಶ ನೀಡಲಾಗುತ್ತಿಲ್ಲ. ಪರಿಸ್ಥಿತಿಯನ್ನು ಗಮನಿಸಿಕೊಂಡು ಜನತೆ ಸಹಕರಿಸುವಂತೆಯೂ ಚಂಪತ್ ರಾಯ್ ಮನವಿ ಮಾಡಿದ್ದಾರೆ.
"Some news items are being circulated which suggest that a time capsule will be placed beneath the temple construction site in Ayodhya. Any such news is fake & should not be believed." : Shri Champat Rai, General Secretary, Shri Ram Janmbhoomi Teerth Kshetra. pic.twitter.com/5wO5Tu7NvX
— Shri Ram Janmbhoomi Teerth Kshetra (@ShriRamTeerth) July 28, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.