ಲಕ್ನೊ: ಕೇಂದ್ರ ಸರ್ಕಾರದ ಸುಸ್ಥಿರ ಪರ್ಯಾಯದ ಕಡೆಗೆ ಕೈಗೆಟುಕುವ ಸಾರಿಗೆ ಯೋಜನೆಯಡಿ, ಕಂಪ್ರೆಸ್ಡ್ ಬಯೋಗ್ಯಾಸ್ ಸ್ಥಾವರಗಳನ್ನು ಸ್ಥಾಪಿಸುವಲ್ಲಿ ಉತ್ತರ ಪ್ರದೇಶ ಇತರ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗಿಂತ ಮುಂಚೂಣಿಯಲ್ಲಿದೆ ಎಂದು ವರದಿಗಳು ತಿಳಿಸಿವೆ.
ಧರ್ಮೇಂದ್ರ ಪ್ರಧಾನ್ ನೇತೃತ್ವದ ಕೇಂದ್ರ ಪೆಟ್ರೋಲಿಯಂ ಸಚಿವಾಲಯವು ನಡೆಸುತ್ತಿರುವ ಯೋಜನೆಯಡಿ, ಕೇಂದ್ರವು ರಾಷ್ಟ್ರದಾದ್ಯಂತ ಸಿಬಿಜಿ ಸ್ಥಾವರಗಳನ್ನು ಸ್ಥಾಪಿಸುವ ಉದ್ದೇಶವನ್ನು ಪ್ರಸ್ತಾಪಿಸಿ ಈವರೆಗೆ ಒಟ್ಟು 515 ಪತ್ರಗಳನ್ನು ಹೊರಡಿಸಿದೆ. ಈ ಪೈಕಿ 126 ಸ್ಥಾವರಗಳ ಬೃಹತ್ ಪಾಲನ್ನು ಉತ್ತರ ಪ್ರದೇಶಕ್ಕೆ ನೀಡಲಾಗಿದೆ.
75 ಸ್ಥಾವರಗಳೊಂದಿಗೆ ಮಹಾರಾಷ್ಟ್ರವು ಎರಡನೇ ಸ್ಥಾನದಲ್ಲಿದೆ, ನಂತರ ಹರಿಯಾಣದಲ್ಲಿ 59, ಆಂಧ್ರಪ್ರದೇಶದಲ್ಲಿ 35, ಗುಜರಾತ್ನಲ್ಲಿ 32, ಕರ್ನಾಟಕದಲ್ಲಿ 25, ಮಧ್ಯಪ್ರದೇಶ ಮತ್ತು ಪಂಜಾಬ್ನಲ್ಲಿ ತಲಾ 24 ಮತ್ತು ಛತ್ತೀಸ್ಗಢಲ್ಲಿ 22 ಸ್ಥಾವರಗಳನ್ನು ಸ್ಥಾಪಿಸಲಾಗಿದೆ.
ತಮಿಳುನಾಡಿನಲ್ಲಿ 16, ಪಶ್ಚಿಮ ಬಂಗಾಳದಲ್ಲಿ 13, ಬಿಹಾರದಲ್ಲಿ 11 ಮತ್ತು ತೆಲಂಗಾಣ, ಉತ್ತರಾಖಂಡ ಮತ್ತು ಒಡಿಶಾದಲ್ಲಿ ತಲಾ ಒಂಬತ್ತು ಸ್ಥಾವರಗಳನ್ನು ಸ್ಥಾಪಿಸಲು ಕೇಂದ್ರವು ಮುಂದಾಗಿದೆ.
ದೆಹಲಿ ಮತ್ತು ಜಾರ್ಖಂಡ್ ಒಟ್ಟು ಏಳು ಸ್ಥಾವರಗಳನ್ನು, ರಾಜಸ್ಥಾನ ಐದು, ಮತ್ತು ಅಸ್ಸಾಂ, ಗೋವಾ, ಮತ್ತು ಜಮ್ಮು ಮತ್ತು ಕಾಶ್ಮೀರಗಳು ತಲಾ ಎರಡು ಸ್ಥಾವರಗಳನ್ನುಪಡೆದುಕೊಂಡಿದೆ.
ಇಂಧನ ಆಮದಿನ ಮೇಲೆ ಭಾರತದ ಅವಲಂಬನೆಯನ್ನು ಪ್ರಮಾಣಾನುಗುಣವಾಗಿ ತಗ್ಗಿಸಲು 2023 ರ ವೇಳೆಗೆ ದೇಶಾದ್ಯಂತ 15 ದಶಲಕ್ಷ ಮೆಟ್ರಿಕ್ ಟನ್ ಸಿಬಿಜಿಯನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುವ ಒಟ್ಟು 5,000 ಸಿಬಿಜಿ ಸ್ಥಾವರಗಳನ್ನು ಸ್ಥಾಪಿಸಲು ಸಚಿವಾಲಯವು ನಿರ್ಧರಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.