ನವದೆಹಲಿ: ಸುಲಲಿತ ವ್ಯಾಪಾರ ಮತ್ತು ಮೂಲಸೌಕರ್ಯ ಕ್ಷೇತ್ರದಲ್ಲಿ ಹೂಡಿಕೆ ವಿಷಯಕ್ಕೆ ಸಂಬಂಧಿಸಿದಂತೆ ಹೂಡಿಕೆದಾರರ ವಿಶ್ವಾಸವನ್ನು ಗಳಿಸಲು ಮತ್ತು ಸರ್ಕಾರದ ನಡೆಯನ್ನು ರೂಪಿಸುವ ಸಲುವಾಗಿ ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಅವರು ಸಾರ್ವಭೌಮ ಸಂಪತ್ತು ನಿಧಿಗಳು, ವಿದೇಶಿ ಪಿಂಚಣಿ ನಿಧಿಗಳು ಮತ್ತು ಇತರರೊಂದಿಗೆ ಮಹತ್ವದ ಸಭೆ ನಡೆಸಿದರು.
ವರದಿಗಳ ಪ್ರಕಾರ, ಕೈಗಾರಿಕೆ ಮತ್ತು ಹೂಡಿಕೆ ಉದ್ದೇಶಗಳಿಗಾಗಿ ಲ್ಯಾಂಡ್ ಬ್ಯಾಂಕ್ ರಚಿಸುವ ಕೆಲಸ ಮಾಡುತ್ತಿರುವ ಸರ್ಕಾರವು, ಭಾರತದಲ್ಲಿ ಕೈಗಾರಿಕೆಗಳ ಆರಂಭಕ್ಕೆ ಸಂಬಂಧಿಸಿದಂತೆ ಅನುಮೋದನೆ ಮತ್ತು ಕ್ಲಿಯರೆನ್ಸ್ ನೀಡಲು ಪ್ರಮಾಣಿಕ ಸಿಂಗಲ್ ವಿಂಡೋ ನೀಡುವು ಭರವಸೆಯನ್ನು ನೀಡಿದೆ. ಮಾತ್ರವಲ್ಲದೇ, ಸಂಬಂಧಪಟ್ಟ ಎಲ್ಲಾ ರಾಜ್ಯ ಸರ್ಕಾರಗಳು ಮತ್ತು ಕೇಂದ್ರ ಸಚಿವಾಲಯಗಳು ಈ ವ್ಯವಸ್ಥೆಗೆ ಪೂರಕ ಕಾರ್ಯ ಮಾಡಲಿದೆ ಎಂಬ ಭರವಸೆಯನ್ನೂ ನೀಡಿದೆ.
ಆರು ರಾಜ್ಯಗಳು ಈಗಾಗಲೇ ಕೇಂದ್ರ ಸರ್ಕಾರದ ಲ್ಯಾಂಡ್ ಬ್ಯಾಂಕ್ ಯೋಜನೆಗೆ ಒಪ್ಪಿಗೆ ನೀಡಿವೆ. ಈ ಯೋಜನೆಯಡಿ, ಸಂಭಾವ್ಯ ಹೂಡಿಕೆದಾರರು ಭೂ-ಮಾಲೀಕತ್ವದ ಏಜೆನ್ಸಿಗಳ ಕಚೇರಿಗಳಿಗೆ ಭೇಟಿ ನೀಡದೆಯೇ, ತಮ್ಮ ದೂರದ ಕಚೇರಿಗಳಿಂದಲೇ ಭೂ ಬ್ಯಾಂಕುಗಳನ್ನು ಪತ್ತೆ ಹಚ್ಚಲು ಮತ್ತು ಕೈಗಾರಿಕೆಗಳ ಸ್ಥಳವನ್ನು ಅಂತಿಮಗೊಳಿಸಲು ಸಾಧ್ಯವಾಗುತ್ತದೆ.
ಇತ್ತೀಚೆಗೆ, ವಿವಿಧ ಕೈಗಾರಿಕೆಗಳ ಯೋಜನೆಗಳು ಮತ್ತು ಪ್ರಾಜೆಕ್ಟ್ಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಸಂಪುಟ ಕಾರ್ಯದರ್ಶಿ ನೇತೃತ್ವದಲ್ಲಿ ಸಬಲೀಕೃತ ಕಾರ್ಯದರ್ಶಿಗಳ ಗುಂಪನ್ನು ಸ್ಥಾಪಿಸಲು ಕೇಂದ್ರ ಸಚಿವ ಸಂಪುಟ ನಿರ್ಧರಿಸಿತ್ತು.
ಪ್ರತಿ ಕೇಂದ್ರ ಇಲಾಖೆಯಲ್ಲಿ ನೋಡಲ್ ಅಧಿಕಾರಿಯನ್ನು ನೇಮಿಸಲಾಗಿದೆ ಮತ್ತು ಯೋಜನಾ ಅಭಿವೃದ್ಧಿ ಕೋಶಗಳನ್ನು ಸ್ಥಾಪಿಸಲಾಗುತ್ತಿದ್ದು, ಇದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ಸಮನ್ವಯದೊಂದಿಗೆ ಹೂಡಿಕೆ ಮಾಡಲಾಗದ ಯೋಜನೆಗಳ ಅಭಿವೃದ್ಧಿಗೆ ಸಹಾಯ ಮಾಡುತ್ತದೆ.
ಆರಂಭದಲ್ಲಿ, ಹೆಚ್ಚಿನ ಗಮನ ಕೇಂದ್ರೀಕರಿಸಲು 12 ಕೈಗಾರಿಕಾ ವಲಯಗಳನ್ನು ಸರ್ಕಾರ ಗುರುತಿಸಿತ್ತು, ನಂತರ ಈ ಸಂಖ್ಯೆಯನ್ನು 20 ಕ್ಕೆ ವಿಸ್ತರಿಸಲಾಗಿದೆ. ಈ ಕ್ಷೇತ್ರಗಳಲ್ಲಿ ಪೀಠೋಪಕರಣಗಳು , ಗುಣಮಟ್ಟದ ಮತ್ತು ವಿಶೇಷ ಪೀಠೋಪಕರಣಗಳು, ಹವಾನಿಯಂತ್ರಣಗಳು, ಚರ್ಮ, ಪಾದರಕ್ಷೆಗಳು, ಕೃಷಿ-ರಾಸಾಯನಿಕಗಳು, ಸಿದ್ಧ ಆಹಾರ, ಸ್ಟೀಲ್, ಅಲ್ಯೂಮಿನಿಯಂ, ತಾಮ್ರ, ಜವಳಿ, ಎಲೆಕ್ಟ್ರಿಕ್ ವಾಹನಗಳು, ಆಟೋ-ಘಟಕಗಳು, ಟಿವಿ ಸೆಟ್-ಟಾಪ್ ಬಾಕ್ಸ್ಗಳು, ಸಿಸಿಟಿವಿಗಳು, ಕ್ರೀಡಾ ವಸ್ತುಗಳು, ಎಥೆನಾಲ್ ತಯಾರಿಕೆ ಮತ್ತು ಜೈವಿಕ ಇಂಧನಗಳು ಮತ್ತು ಆಟಿಕೆಗಳ ಕೈಗಾರಿಕೆ ಸೇರಿದೆ.
ಆತ್ಮನಿರ್ಭರ ಭಾರತ ಮೂಲಕ, ಭಾರತೀಯ ಉತ್ಪನ್ನಗಳ ಗುಣಮಟ್ಟವನ್ನು ಕೇಂದ್ರೀಕರಿಸಿ, ಭಾರತದಲ್ಲಿ ಉತ್ಪಾದನೆಗೆ ಆರ್ಥಿಕತೆಯನ್ನು ಹೆಚ್ಚಿಸುವ ಮೂಲಕ ಅವಕಾಶಗಳು ಮತ್ತು ಹೂಡಿಕೆಗಾಗಿ ಅವಕಾಶದ ಬಾಗಿಲುಗಳನ್ನು ವಿಸ್ತರಿಸಲಾಗುತ್ತಿದೆ ಎಂದು ಸರ್ಕಾರ ಒತ್ತಿಹೇಳಿದೆ.
ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ವಿದೇಶಿ ಹೂಡಿಕೆಗೆ ಅನುಕೂಲಕರ ವಾತಾವರಣವನ್ನು ಸೃಷ್ಟಿಸಲಾಗುವುದು ಎಂದು ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಅವರು ಸಂಭಾವ್ಯ ಹೂಡಿಕೆದಾರರೊಂದಿಗಿನ ಇತ್ತೀಚಿನ ಸಭೆಯಲ್ಲಿ ಹೇಳಿದರು.
ನೀತಿಗಳು, ಪ್ರಕ್ರಿಯೆಗಳು, ನಿಬಂಧನೆಗಳ ವಿಷಯದಲ್ಲಿ ಹೂಡಿಕೆದಾರರಿಗೆ ಸಂಪೂರ್ಣ ಬೆಂಬಲ ನೀಡಲಾಗುವುದು ಮತ್ತು ಎಲ್ಲವೂ ಪಾರದರ್ಶಕ, ಮುಕ್ತ ಮತ್ತು ನ್ಯಾಯಸಮ್ಮತವಾಗಿರುತ್ತದೆ ಎಂದು ಸರ್ಕಾರ ಭರವಸೆ ನೀಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.