ನವದೆಹಲಿ: ಕೊರೋನಾವೈರಸ್ ಮಹಾಮಾರಿಗೆ ಸಂಬಂಧಿಸಿದಂತೆ ಭಾರತ ಇತರ ದೇಶಗಳಿಗಿಂತ ಉತ್ತಮವಾಗಿದೆ, ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರವನ್ನು ತೆಗೆದುಕೊಂಡಿರುವುದು ಇದಕ್ಕೆ ಕಾರಣ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.
ಕೊರೋನಾವೈರಸ್ ಪರೀಕ್ಷೆಗಾಗಿ ಮುಂಬೈ, ನೋಯ್ಡಾ ಮತ್ತು ಕೋಲ್ಕತ್ತಾಗಳಲ್ಲಿ ಸ್ಥಾಪನೆಯಾದ ‘ಹೈ ಥ್ರೋಪುಟ್’ ಪ್ರಯೋಗಾಲಯಗಳಿಗೆ ವರ್ಚುವಲ್ ಆಗಿ ಚಾಲನೆ ನೀಡಿ ಅವರು ಮಾತನಾಡಿದರು.
“ಇತರ ದೊಡ್ಡ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಕೊರೋನಾವೈರಸ್ ಕಾರಣದಿಂದ ಸಂಭವಿಸುವ ಮರಣ ಪ್ರಮಾಣ ಕಡಿಮೆ ಇದೆ. ಚೇತರಿಕೆ ದರ ಕೂಡ ಇತರ ದೇಶಗಳಿಗಿಂತ ಅತ್ಯುತ್ತಮವಾಗಿದೆ” ಎಂದು ಅವರು ಹೇಳಿದ್ದಾರೆ.
“ನಮ್ಮ ಕೊರೋನಾ ಯೋಧರ ಪ್ರಯತ್ನಗಳ ಕಾರಣದಿಂದಾಗಿ ಇಂದು ಜಗತ್ತು ನಮ್ಮನ್ನು ಪ್ರಶಂಸಿಸುತ್ತಿದೆ. ನಾವು ಜಾಗೃತಿಯ ಕೊರತೆಯನ್ನು ಎದುರಿಸುತ್ತಿಲ್ಲ” ಎಂದು ಪ್ರಧಾನಿ ಹೇಳಿದ್ದಾರೆ.
ಮೂಲಸೌಕರ್ಯಗಳನ್ನು ಸ್ಥಾಪನೆ ಮಾಡುವ ನಿಟ್ಟಿನಲ್ಲಿ ದೇಶವು ಬೃಹತ್ ಹೆಜ್ಜೆಯನ್ನು ಮುಂದಿಟ್ಟಿ ಮತ್ತು ಜಿಲ್ಲಾ ಮಟ್ಟದಲ್ಲಿ ಬೇಡಿಕೆ ಮತ್ತು ಪೂರೈಕೆಯ ಸರಪಳಿಯನ್ನು ಬಲಿಷ್ಠಗೊಳಿಸುವ ಅಗತ್ಯ ಈಗ ಇದೆ ಎಂದು ಹೇಳಿದರು.
“ನಾವು ಪ್ರತಿಯೊಬ್ಬ ಭಾರತೀಯರನ್ನು ರಕ್ಷಣೆ ಮಾಡಲು ಬಯಸುತ್ತಿದ್ದೇವೆ. ಪ್ರಸ್ತುತ ದೇಶದಲ್ಲಿ 11000 ಕೋವಿಡ್ ಸೌಲಭ್ಯಗಳು ಇವೆ ಮತ್ತು 11 ಲಕ್ಷ ಐಸೋಲೇಶನ್ ಬೆಡ್ಗಳಿವೆ” ಎಂದಿದ್ದಾರೆ.
“ನಾವು ಪಿಪಿಇ, ಮಾಸ್ಕ್, ಟೆಸ್ಟ್ ಕಿಟ್ ಇತ್ಯಾದಿಗಳಲ್ಲಿ ದೊಡ್ಡ ಯಶೋಗಾಥೆಯನ್ನು ಬರೆದಿದ್ದೇವೆ. ಒಂದು ಸಮಯದಲ್ಲಿ ನಾವು ಪಿಪಿಇ ಕಿಟ್ಗಳನ್ನು ಉತ್ಪಾದನೆಯೇ ಮಾಡುತ್ತಿರಲಿಲ್ಲ. ಆದರೆ ಕೇವಲ ಆರು ತಿಂಗಳಲ್ಲಿ 1,200 ಉತ್ಪಾದಕರು ಪಿಪಿಇ ಕಿಟ್ ಉತ್ಪಾದನೆ ಮಾಡುತ್ತಿದ್ದಾರೆ. ಇಂದು ದೇಶದಲ್ಲಿ ಸುಮಾರು 3 ಲಕ್ಷ ಎನ್-95 ಮಾಸ್ಕ್ಗಳನ್ನು ತಯಾರಿಸಲಾಗುತ್ತಿದೆ. ಪ್ರತಿ ವರ್ಷ 3 ಲಕ್ಷ ವೆಂಟಿಲೇಟರ್ ಉತ್ಪಾದನೆಯಾಗುತ್ತಿದೆ” ಎಂದಿದ್ದಾರೆ.
Launching high-throughput COVID-19 testing facilities. https://t.co/vYSPLHebcD
— Narendra Modi (@narendramodi) July 27, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.