ಹರಿಯಾಣ: ಕೊರೋನಾವೈರಸ್ ಎಂಬ ಚೀನಾದಿಂದ ಹುಟ್ಟು ಪಡೆದ ಮಹಾಮಾರಿ ಜಗತ್ತಿನ ಎಲ್ಲಾ ರಾಷ್ಟ್ರಗಳ ಮೇಲೆಯೂ ತನ್ನ ವಕ್ರದೃಷ್ಟಿ ಬೀರಿದೆ. ಇದಕ್ಕೆ ಭಾರತವೂ ಹೊರತಾಗಿಲ್ಲ. ಹೇಗಪ್ಪಾ ಈ ಕೊರೋನಾಸುರನಿಂದ ತಪ್ಪಿಸಿಕೊಳ್ಳುವುದು ಎಂದು ಎಲ್ಲರೂ ದಾರಿ ಹುಡುಕುವ ಪ್ರಯತ್ನ, ತಮ್ಮನ್ನು ತಾವು ರಕ್ಷಿಸಿಕೊಳ್ಳುವ ನಿಟ್ಟಿನಲ್ಲಿಯೇ ಪ್ರಯತ್ನಗಳನ್ನು ಮಾಡುತ್ತಿದ್ದರೆ, ಇನ್ನೊಂದು ಕಡೆ ಇದಕ್ಕೆ ಔಷಧ, ಲಸಿಕೆಗಳನ್ನು ಕಂಡುಹಿಡಿಯುವ ನಿಟ್ಟಿನಲ್ಲಿಯೂ ಸಂಶೋಧಕರು ಪ್ರಯತ್ನ ನಡೆಸುತ್ತಿದ್ದಾರೆ.
ಹೀಗೆ ಭಾರತದಲ್ಲಿಯೂ ಕೊರೋನಾ ಔಷಧವನ್ನು ಪತ್ತೆ ಮಾಡುವಲ್ಲಿ ಹಲವಾರು ಸಂಸ್ಥೆಗಳು ಶ್ರಮ ವಹಿಸುತ್ತಿವೆ. ಹೀಗೆ ಭಾರತ್ ಬಯೋಟೆಕ್ ಎಂಬ ಸಂಸ್ಥೆ ಸಂಶೋಧಿಸಿರುವ ಕೋವಿಡ್ -19 ಲಸಿಕೆ ಕೊವ್ಯಾಕ್ಸಿನ್ ಅನ್ನು ಮಾನವನ ಮೇಲೆ ಪ್ರಯೋಗಿಸಿ ನೋಡುವಂತೆ ಐಸಿಎಂಆರ್ ತಿಳಿಸಿದೆ. ವಿಶ್ವ ಹಿಂದೂ ಪರಿಷತ್ ನ ಜಾಯಿಂಟ್ ಜನರಲ್ ಸೆಕ್ರೆಟರಿ ಡಾ. ಸುರೇಂದ್ರ ಜೈನ್ ಅವರು ಈ ಲಸಿಕೆಯನ್ನು ತಮ್ಮ ಮೇಲೆ ಪ್ರಯೋಗಿಸಿ ಸಾಧಕ ಬಾಧಕಗಳನ್ನು ಪರಿಶೀಲಿಸುವಂತೆ ಕೋರಿದ್ದಾರೆ.
ಈ ಬಗ್ಗೆ ರೋಹ್ಟಕ್ನ ಪಂಡಿತ ಭಾಗ್ವತ್ ದಯಾಳ್ ಶರ್ಮಾ ಯುನಿವರ್ಸಿಟಿ ಆಫ್ ಹೆಲ್ತ್ ಸೈನ್ಸ್ ನ ಉಪಕುಲಪತಿಗಳಿಗೆ ಪತ್ರವನ್ನೂ ಬರೆದಿದ್ದಾರೆ. ಐಸಿಎಂಆರ್ ಈ ಔಷಧವನ್ನು ಪ್ರಾಯೋಗಿಕವಾಗಿ ಬಳಕೆ ಮಾಡಿ ನೋಡುವಂತೆ ಪಂಡಿತ ಭಾಗ್ವತ್ ದಯಾಳ್ ಶರ್ಮಾ ಯುನಿವರ್ಸಿಟಿ ಆಫ್ ಹೆಲ್ತ್ ಸೈನ್ಸ್ ಸೇರಿದಂತೆ ಒಟ್ಟು 12 ಸಂಸ್ಥೆಗಳಿಗೆ ತಿಳಿಸಿದ್ದು, ಅದನ್ನು ಪ್ರಾಯೋಗಿಕವಾಗಿ ತಮ್ಮ ಮೇಲೆ ಬಳಕೆ ಮಾಡಿ ನೋಡುವಂತೆ ಸುರೇಂದ್ರ ಜೈನ್ ಅವರು ಪತ್ರದ ಮೂಲಕ ತಿಳಿಸಿದ್ದಾರೆ. ಈ ಪತ್ರವನ್ನು ವಿಶ್ವ ಹಿಂದೂ ಪರಿಷತ್ ತನ್ನ ಟ್ವಿಟರ್ ಖಾತೆಯಲ್ಲಿಯೂ ಪ್ರಕಟಿಸಿದೆ. ಜೊತೆಗೆ ಮಾನವೀಯತೆಯನ್ನು ಉಳಿಸುವ ನಿಟ್ಟಿನಲ್ಲಿ ತ್ಯಾಗಕ್ಕೆ ಸಿದ್ಧರಾಗಿರುವ ಜೈನ್ ಅವರ ಧೈರ್ಯಕ್ಕೆ ಅಭಿನಂದನೆಯನ್ನೂ ತಿಳಿಸಿದೆ.
ಈ ವ್ಯಾಕ್ಸಿನ್ ಅನ್ನು ಹೈದರಾಬಾದಿನ ಭಾರತ್ ಬಯೋಟೆಕ್ನ ಬಿಎಸ್ಎಲ್-3 (ಬಯೋ ಸೇಫ್ಟಿ ಲೆವೆಲ್ 3) ಸಿದ್ಧಪಡಿಸಿದೆ. ಕಳೆದ ವಾರವಷ್ಟೇ ಇದರ ಬಳಕೆಯ ಅನುಮತಿಯನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾಕ್ಕೆ ಕಳುಹಿಸಿಕೊಡಲಾಗಿತ್ತು. ಇದೀಗ ಅದು ಪ್ರಾಯೋಗಿಕವಾಗಿ ಮಾನವನ ಮೇಲೆ ಬಳಕೆ ಮಾಡಿ ಸಾಧಕ ಬಾಧಕಗಳನ್ನು ಪರಿಶೀಲನೆ ಮಾಡುವಂತೆಯೂ ತಿಳಿಸಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.