ನವದೆಹಲಿ: ಭಾರತವು ಪ್ರತಿವರ್ಷ ಜುಲೈ 1 ರಂದು ರಾಷ್ಟ್ರೀಯ ವೈದ್ಯರ ದಿನವನ್ನು ಆಚರಿಸುತ್ತದೆ, ಈ ದಿನ ದೇಶಾದ್ಯಂತದ ವೈದ್ಯರು ತಮ್ಮ ಅಸಾಧಾರಣ ಸೇವೆಗಾಗಿ ಗೌರವಿಸಲ್ಪಡುತ್ತಾರೆ. ಈ ದಿನವು ಎಲ್ಲಾ ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರರಿಗೆ ಗೌರವಾರ್ಪಣೆ ಮಾಡಬೇಕಾದಂತಹ ದಿನ.
ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮತ್ತು ಪ್ರಸಿದ್ಧ ವೈದ್ಯ ಡಾ.ಬಿಧನ್ ಚಂದ್ರ ರಾಯ್ ಅವರ ಸ್ಮರಣಾರ್ಥ ರಾಷ್ಟ್ರೀಯ ವೈದ್ಯರ ದಿನವನ್ನು ಆಚರಿಸಲಾಗುತ್ತದೆ. ಅವರು ಜುಲೈ 1, 1882 ರಂದು ಜನಿಸಿದರು ಮತ್ತು ಅದೇ ದಿನಾಂಕದಂದು 1962 ರಲ್ಲಿ 80 ವರ್ಷ ವಯಸ್ಸಿನಲ್ಲಿ ನಿಧನರಾದರು.
ಫೆಬ್ರವರಿ 4, 1961 ರಂದು ಡಾ. ರಾಯ್ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ಭರತ ರತ್ನವನ್ನು ನೀಡಿ ಗೌರವಿಸಲಾಯಿತು. 1991 ರಲ್ಲಿ, ಡಾ. ರಾಯ್ ಅವರನ್ನು ಶ್ರೇಷ್ಠ ವೈದ್ಯರೆಂದು ಗೌರವಿಸಿ ಭಾರತವು ರಾಷ್ಟ್ರೀಯ ವೈದ್ಯರ ದಿನವನ್ನು ಆಚರಿಸಲು ಪ್ರಾರಂಭಿಸಿತು.
ಈ ವರ್ಷ, ಕೊರೋನಾವೈರಸ್ ಕಾರಣದಿಂದಾಗಿ ವೈದ್ಯಕೀಯ ವೃತ್ತಿಪರರಿಗೆ ವಿಶೇಷವಾಗಿ ಕಠಿಣ ವರ್ಷವಾಗಿದೆ, ಅವರ ಸವಾಲುಗಳು ದುಪ್ಪಟ್ಟುಗೊಂಡಿದೆ. ಸಾಂಕ್ರಾಮಿಕ ರೋಗ ಆರಂಭವಾದಾಗಿನಿಂದ ವೈದ್ಯರ ಕಠಿಣ ಪರಿಶ್ರಮ ಮತ್ತು ಸಮರ್ಪಣೆ ಪ್ರಶಂಸೆಗೆ ಅರ್ಹವಾಗಿದೆ.
ಪ್ರಧಾನಿ ನರೇಂದ್ರ ಮೋದಿಯವರು ಟ್ವಿಟ್ ಮಾಡಿ ರಾಷ್ಟ್ರೀಯ ವೈದ್ಯರ ದಿನದ ಬಗ್ಗೆ ಶುಭಾಶಯಗಳನ್ನು ಕೋರಿದ್ದಾರೆ. ಅಲ್ಲದೇ ಅದ್ಭುತವಾದ ವಿಡಿಯೋವೊಂದನ್ನೂ ಹಂಚಿಕೊಂಡಿದ್ದಾರೆ. “ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ನಮ್ಮ ವೈದ್ಯರಿಗೆ- ಅಸಾಧಾರಣ ಆರೈಕೆ ನೀಡುವವರಿಗೆ ಭಾರತ ವಂದಿಸುತ್ತದೆ” ಎಂದಿದ್ದಾರೆ.
India salutes our doctors- exceptional care givers who are at the forefront of a spirited fight against COVID-19. #doctorsday2020 pic.twitter.com/WsWroXjVpO
— Narendra Modi (@narendramodi) July 1, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.