ನವದೆಹಲಿ: ಗಾಲ್ವಾನ್ ಕಣಿವೆಯಲ್ಲಿ ಭಾರತ-ಚೀನಾ ಯೋಧರ ನಡುವೆ ನಡೆದ ಮುಖಾಮುಖಿ ಮತ್ತು ಘರ್ಷಣೆಯ ನಂತರ ಭಾರತೀಯ ಭೂಪ್ರದೇಶಗಳನ್ನು ಚೀನಾದ ಪಡೆಗಳು ವಶಪಡಿಸಿಕೊಂಡಿದೆ ಎಂದು ಕಾಂಗ್ರೆಸ್ ನಿರಂತರವಾಗಿ ಕೇಂದ್ರ ಸರ್ಕಾರದ ಮೇಲೆ ಆರೋಪವನ್ನು ಮಾಡುತ್ತಾ ಬರುತ್ತಿದೆ. ಆದರೀಗ ಲಡಾಕ್ ಕೌನ್ಸಿಲರ್ ಸ್ಟ್ಯಾನ್ಜಿನ್ ಲಕ್ಪಾ ಅವರು ನೀಡಿರುವ ಹೇಳಿಕೆ ಕಾಂಗ್ರೆಸ್ ಪಕ್ಷಕ್ಕೆ ಮುಖಭಂಗ ತರುವಂತೆ ಇದೆ.
ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವು, ಗಡಿಯಲ್ಲಿನ ಪ್ರವೇಶಿಸಲಾಗದ ಪ್ರದೇಶಗಳನ್ನು ಸಂಪರ್ಕಿಸುವ ಪ್ರಮುಖ ರಸ್ತೆ ನಿರ್ಮಾಣ ಯೋಜನೆಗಳನ್ನು ಸ್ಥಗಿತಗೊಳಿಸಿತ್ತು ಎಂಬುದನ್ನು ಕೌನ್ಸಿಲರ್ ಅವರು ಬಹಿರಂಗಪಡಿಸಿದ್ದಾರೆ. ಲಡಾಖ್ನ ಮುಖ್ಯ ಭೂಮಿಗೆ ಮತ್ತು ಪ್ರವೇಶಿಸಲಾಗದ ಪ್ರದೇಶಗಳಿಗೆ ಸೈನ್ಯವು ವೇಗವಾಗಿ ಪ್ರವೇಶಿಸಲು ಸಹಾಯ ಮಾಡುವಲ್ಲಿ ರಸ್ತೆಗಳು ಪ್ರಮುಖ ಪಾತ್ರ ವಹಿಸುತ್ತವೆ, ಆದರೆ ಇಂತಹ ರಸ್ತೆ ಯೋಜನೆಗಳನ್ನೇ ಕಾಂಗ್ರೆಸ್ ಸ್ಥಗಿತಗೊಳಿಸಿತ್ತು ಎಂದಿದ್ದಾರೆ ಎಂದು ವರದಿಗಳು ತಿಳಿಸಿವೆ.
“ಲಡಾಖ್ನ ಪ್ರತಿಯೊಬ್ಬ ವ್ಯಕ್ತಿಗೂ, ಆತ ಯಾವುದೇ ಪಕ್ಷಕ್ಕೆ ಸೇರಿದ್ದರೂ, ಅದು ಕಾಂಗ್ರೆಸ್, ಪಿಡಿಪಿ ಅಥವಾ ಬಿಜೆಪಿಯೇ ಆಗಿರಲಿ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಈ ಕಾರ್ಯತಂತ್ರದ ಮಹತ್ವದ ರಸ್ತೆ ಯೋಜನೆ ಹೇಗೆ ಸ್ಥಗಿತಗೊಂಡಿದೆ ಎಂದು ಪ್ರತಿಯೊಬ್ಬ ಲಡಾಖಿಗೂ ತಿಳಿದಿದೆ” ಎಂದು ಲಕ್ಪಾ ಹೇಳಿದ್ದಾರೆ.
ಕಾರ್ಯತಂತ್ರದ ರಸ್ತೆ ಯೋಜನೆಯನ್ನು ಕಾರ್ಗಿಲ್ ಯುದ್ಧದ ನಂತರ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಾರಂಭಿಸಿದರು ಎಂದು ಲಡಾಖ್ ಕೌನ್ಸಿಲರ್ ಹೇಳಿದರು. ಪಾಕಿಸ್ಥಾನದೊಂದಿಗಿನ ಯುದ್ಧದ ವೇಳೆ ಭಾರತೀಯ ಸೇನೆಯು ಪ್ರದೇಶಗಳನ್ನು ಪ್ರವೇಶಿಸಲು ತೊಂದರೆಗಳನ್ನು ಅನುಭವಿಸಿತು. ಹೀಗಾಗಿ ಲಡಾಖ್ನೊಂದಿಗೆ ಗರಿಷ್ಠ ಸಂಪರ್ಕವನ್ನು ಹೊಂದಲು ರಾಷ್ಟ್ರೀಯ ಭದ್ರತೆಯ ದೃಷ್ಟಿಕೋನದಿಂದ ಪರ್ಯಾಯ ಮಾರ್ಗಗಳನ್ನು ನಿರ್ಮಿಸಲು ವಾಜಪೇಯಿ ನಿರ್ಧರಿಸಿದ್ದರು ಎಂದು ಅವರು ಹೇಳಿದ್ದಾರೆ.
ಆದರೆ ವಾಜಪೇಯಿ ಅವರು ಆರಂಭಿಸಿದ ರಸ್ತೆ ಯೋಜನೆಗಳನ್ನು ಕಾಂಗ್ರೆಸ್ ನೇತೃತ್ವದ ಯುಪಿಎ ಸ್ಥಗಿತಗೊಳಿಸಿತ್ತು ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.