ನವದೆಹಲಿ: ಜಗತ್ತು ಪರಿವರ್ತನೀಯ ಕಾಲಘಟ್ಟದಲ್ಲಿ ಇದೆ ಎಂದು ಪ್ರತಿಪಾದಿಸಿರುವ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರು, ಈ ಶತಮಾನದ ಪ್ರಸ್ತುತ ಸಮಯ ಮತ್ತು ಈ ದೇಶದ ಪ್ರತಿನಿಧಿತ್ವದ ಉದ್ದೇಶಕ್ಕಾಗಿ ಎಲ್ಲಾ ಬಹುಪಕ್ಷೀಯ ಘಟಕಗಳನ್ನು ಬಹು ಉದ್ದೇಶಿತಗೊಳಿಸಲು ಅವುಗಳ ಪರಿಶೀಲನೆ ಮತ್ತು ಸುಧಾರಣೆಯ ಅಗತ್ಯವಿದೆ ಎಂದು ಹೇಳಿದರು.
ಅಲೈಯನ್ಸ್ ಫಾರ್ ಮಲ್ಟಿಲ್ಯಾಟರಲಿಸಂನ ಮಂತ್ರಿಮಂಡಲದ ವರ್ಚುವಲ್ ಸಭೆಯನ್ನುದ್ದೇಶಿಸಿ ಮಾತನಾಡಿದ ಜೈಶಂಕರ್, ಸಾಂಕ್ರಾಮಿಕ ರೋಗ ಮತ್ತು ತಪ್ಪು ಮಾಹಿತಿಯ ದಾಳಿಯನ್ನು ಜಗತ್ತು ಪ್ರಸ್ತುತ ಎದುರಿಸುತ್ತಿದೆ ಎಂದಿದ್ದಾರೆ.
“ಇಂದು, ಮತ್ತೊಮ್ಮೆ ನಾವು ಪರಿವರ್ತನೀಯ ಕ್ಷಣದಲ್ಲಿ ನಿಂತಿದ್ದೇವೆ. ಸಾಂಕ್ರಾಮಿಕ ರೋಗವು ನಮ್ಮ ಜಾಗತೀಕೃತ ಆರ್ಥಿಕ ವ್ಯವಸ್ಥೆಯನ್ನು ಧ್ವಂಸಗೊಳಿಸಿದೆ. 400,000 ಕ್ಕೂ ಹೆಚ್ಚು ಜೀವಗಳನ್ನು ಬಲಿ ತೆಗೆದುಕೊಳ್ಳುವುದರ ಹೊರತಾಗಿಯೂ, ಇದು ನಾವು ವಾಸಿಸುವ, ಕೆಲಸ ಮಾಡುವ, ಪ್ರಯಾಣಿಸುವ ಮತ್ತು ಮೂಲಭೂತವಾಗಿ ಪ್ರತಿಯೊಂದಕ್ಕೂ ಸಂಬಂಧಿಸಿರುವ ವಿಷಯದಲ್ಲಿ ಬಹುವಾದ ಪರಿಣಾಮ ಬೀರಿದೆ” ಎಂದು ಹೇಳಿದರು.
“ಕೊರೋನವೈರಸ್ ನಮ್ಮ ಜೀವನ ವಿಧಾನವನ್ನು ಶಾಶ್ವತವಾಗಿ ಬದಲಿಸಿದೆ ಎಂದು ಹೇಳುವುದು ಈಗ ಸ್ವಲ್ಪ ಬೇಗ ಎನಿಸಬಹದು, ಆದರೆ ಅದು ಇತರರ ಸಮ್ಮುಖದಲ್ಲಿ ಮಾನವೀಯತೆಯ ಸಹಜತೆಯನ್ನು ಕಡಿಮೆ ಮಾಡಿದೆ” ಎಂದು ಜೈಶಂಕರ್ ಹೇಳಿದರು.
ನಕಲಿ ಸುದ್ದಿ, ತಪ್ಪು ಮಾಹಿತಿ ಮತ್ತು ಉದ್ದೇಶಿತ ತಪ್ಪು ಮಾಹಿತಿಯ ಮೂಲಕ ಮಾನವ ಸಂವಹನದಲ್ಲಿ ಅನುಮಾನವು ಹೆಚ್ಚಾಗುತ್ತಿದೆ ಎಂದಿದ್ದಾರೆ.
“ಈ ವಿದ್ಯಮಾನಗಳು ಇಂದು ಎಷ್ಟು ವ್ಯಾಪಕವಾಗಿ ಹರಡಿವೆ ಎಂದರೆ ವೈರಲ್ ಸಾಂಕ್ರಾಮಿಕ ಮತ್ತು ತಪ್ಪು ಮಾಹಿತಿಯ ವೈರಲ್ಗಳ ದ್ವಿಮುಖ ದಾಳಿಯನ್ನು ನಾವು ನಿಜವಾಗಿಯೂ ಎದುರಿಸುತ್ತಿದ್ದೇವೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಇದು ಆರೋಗ್ಯ ಬಿಕ್ಕಟ್ಟು ಮತ್ತು ಇನ್ಫೋಡೆಮಿಕ್ ಎರಡರ ಯುಗವಾಗಿದೆ” ಎಂದು ಅವರು ಹೇಳಿದರು.
ಎರಡೂ ಸವಾಲುಗಳನ್ನು ಎದುರಿಸಲು ಮುಂದಿನ ದಾರಿ ಒಂದೇ ರೀತಿಯದ್ದಾಗಿದೆ ಎಂದು ಅವರು ಪ್ರತಿಪಾದಿಸಿದರು ಮತ್ತು ವೈಜ್ಞಾನಿಕ ವಿಧಾನಗಳಲ್ಲಿ ನಂಬಿಕೆಯನ್ನು ಬಲಪಡಿಸುವ ಅವಶ್ಯಕತೆಯಿದೆ ಎಂದು ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.