ನವದೆಹಲಿ: ದೇಶಾದ್ಯಂತದ ನಾಲ್ಕು ಪ್ರಮುಖ ರೈಲು ನಿಲ್ದಾಣಗಳ ಪುನರಾಭಿವೃದ್ಧಿಗಾಗಿ ರೈಲ್ವೆ ಸಚಿವಾಲಯವು ಖಾಸಗಿಯವರಿಂದ 32 ಅರ್ಜಿಗಳನ್ನು ಸ್ವೀಕರಿಸಿದೆ. ಸಾರ್ವಜನಿಕ-ಖಾಸಗಿ ಸಹಭಾಗಿತ್ವ (ಪಿಪಿಪಿ)ದಲ್ಲಿ ನಾಗ್ಪುರ, ಗ್ವಾಲಿಯರ್, ಅಮೃತಸರ ಮತ್ತು ಸಬರಮತಿ ರೈಲ್ವೆ ನಿಲ್ದಾಣಗಳ ಪುನರಾಭಿವೃದ್ಧಿಗಾಗಿ ಅರ್ಹತೆಗಾಗಿ ಕೋರಿಕೆ (Request for Qualification) ಶುಕ್ರವಾರ ನಡೆಯಿತು.
ಒಟ್ಟು 32 ರಲ್ಲಿ ಸಬರಮತಿ ರೈಲು ನಿಲ್ದಾಣಕ್ಕೆ ಗರಿಷ್ಠ ಒಂಬತ್ತು ಅರ್ಜಿಗಳು ಬಂದಿವೆ. ಜೆಕೆಬಿ, ಜಿಎಂಆರ್, ಐಎಸ್ಕ್ಯೂ ಕ್ಯಾಪಿಟಲ್, ಕಲ್ಪತರು, ಫೇರ್ಫ್ಯಾಕ್ಸ್ / ಆಂಕಾರೇಜ್, ಮಾಂಟೆ ಕಾರ್ಲೊ, ಜಿಆರ್ ಇನ್ಫ್ರಾಸ್ಟ್ರಕ್ಚರ್, ಕಲ್ಯಾಣ್ ಟೋಲ್, ಕ್ಯೂಬ್ ಕನ್ಸ್ಟ್ರಕ್ಷನ್ ಮುಂತಾದವುಗಳಿಂದ ಅರ್ಜಿಗಳನ್ನು ಸ್ವೀಕರಿಸಲಾಗಿದೆ ಎಂದು ವರದಿಗಳು ತಿಳಿಸಿವೆ.
ನಾಲ್ಕು ರೈಲ್ವೆ ನಿಲ್ದಾಣಗಳನ್ನು ಪುನರಾಭಿವೃದ್ಧಿ ಮಾಡುವ ಮತ್ತು ಅವುಗಳನ್ನು ಐಕಾನಿಕ್ ನಗರ ಕೇಂದ್ರಗಳಾಗಿ ಪರಿವರ್ತಿಸುವ ಉದ್ದೇಶದಿಂದ, ಭಾರತೀಯ ರೈಲ್ವೆ ನಿಲ್ದಾಣಗಳ ಅಭಿವೃದ್ಧಿ ನಿಗಮ ಲಿಮಿಟೆಡ್ (IRSDC) ಡಿಸೆಂಬರ್ 2019 ರಲ್ಲಿ Request for Qualificationಗಳನ್ನು ಆಹ್ವಾನಿಸಿತ್ತು. ಶುಕ್ರವಾರ, IRSDC ಈ ನಾಲ್ಕು ರೈಲ್ವೆ ನಿಲ್ದಾಣಗಳ Request for Qualification ಅರ್ಜಿಗಳನ್ನು ಸ್ವೀಕರಿಸಿದೆ.
ನಾಲ್ಕು ನಿಲ್ದಾಣಗಳ ಪುನರಾಭಿವೃದ್ಧಿಗೆ ಒಟ್ಟು ಸೂಚಕ ವೆಚ್ಚ ಸುಮಾರು 1,300 ಕೋಟಿ ರೂ. ವಾಣಿಜ್ಯ ಅಭಿವೃದ್ಧಿಗೆ ಅನುಮತಿಸಲಾದ ಒಟ್ಟು ಅಂತರ್ನಿರ್ಮಿತ ಪ್ರದೇಶ (ಬಿಯುಎ) 54 ಲಕ್ಷ ಚದರ ಅಡಿ.
ರೈಲ್ವೆ ಕಾಯ್ದೆ 1989ರ ಅಡಿಯಲ್ಲಿನ ರೈಲ್ವೆ ಯೋಜನೆಗಳಾಗಿರುವುದರಿಂದ ಈ ಯೋಜನೆಗಳಿಗೆ ಯಾವುದೇ ಭೂ-ಬಳಕೆಯ ಬದಲಾವಣೆ ಮತ್ತು ಪೂರ್ವ ಪರಿಸರ ಅನುಮತಿ ಅಗತ್ಯವಿಲ್ಲ. ನಿಲ್ದಾಣಗಳ ಪುನರಾಭಿವೃದ್ಧಿಗೆ IRSDC ನೋಡಲ್ ಏಜೆನ್ಸಿಯಾಗಿದೆ.
ಅರ್ಜಿದಾರರನ್ನು ಶಾರ್ಟ್ಲಿಸ್ಟ್ ಮಾಡಿದ ನಂತರ, ಪ್ರಸ್ತಾವನೆಗಾಗಿ ವಿನಂತಿಯನ್ನು ಕರೆಯಲಾಗುತ್ತದೆ, ಇದರಲ್ಲಿ ಬಿಡ್ಡರ್ಗಳು ಬಿಡ್ ಸಲ್ಲಿಸುತ್ತಾರೆ. ಎಲ್ಲಾ ಯೋಜನೆಗಳಿಗೆ ಶೀಘ್ರದಲ್ಲೇ ಕಾಮಗಾರಿ ಪ್ರಾರಂಭವಾಗುವ ಸಾಧ್ಯತೆ ಇದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.