ನವದೆಹಲಿ: ಚೀನಾದ ಸರಕುಗಳನ್ನು ಬಹಿಷ್ಕರಿಸುವ ಕಾನ್ಫಿಡರೇಶನ್ ಆಫ್ ಆಲ್ ಇಂಡಿಯಾ ಟ್ರೇಡರ್ಸ್ (ಸಿಎಐಟಿ) ತನ್ನ ರಾಷ್ಟ್ರೀಯ ಅಭಿಯಾನ ‘ಭಾರತೀಯ ಸಾಮಾನ್-ಹಮಾರ ಅಭಿಮಾನ್’ ಅಡಿಯಲ್ಲಿ, ಈ ವರ್ಷ ದೀಪಾವಳಿ ಆಚರಣೆಗೆ ಚೀನಾದಲ್ಲಿ ತಯಾರಿಸಿದ ಎಲ್ಲಾ ಉತ್ಪನ್ನಗಳನ್ನು ಬಹಿಷ್ಕರಿಸುವುದಾಗಿ ಪ್ರಕಟಿಸಿದೆ.
ಚೀನಾದ ಮಿಲಿಟರಿ ಇತ್ತೀಚೆಗೆ ಭಾರತೀಯ ಪಡೆಗಳ ಮೇಲೆ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ದೀಪಾವಳಿ ಆಚರಿಸಲು ವ್ಯಾಪಾರಿಗಳು ಒಗ್ಗೂಡಿ ಭಾರತ ನಿರ್ಮಿತ ವಸ್ತುಗಳನ್ನು ಮಾತ್ರ ಬಳಸಬೇಕೆಂದು ವ್ಯಾಪಾರಿಗಳ ಮಂಡಳಿ ಒತ್ತಾಯಿಸಿದೆ.
ರಕ್ಷಾಬಂಧನ್ ಮತ್ತು ಜನ್ಮಾಷ್ಟಮಿಯಂತಹ ಇತರ ಎಲ್ಲಾ ಭಾರತೀಯ ಹಬ್ಬಗಳನ್ನು ಆಚರಣೆಯಲ್ಲೂ ಕೂಡ ಚೀನಾದ ಸರಕುಗಳ ಬಹಿಷ್ಕಾರವು ಅನ್ವಯವಾಗಬೇಕು ಎಂದು ಇದು ಒತ್ತಾಯಿಸಿದೆ.
ಸಿಎಐಟಿ ರಾಷ್ಟ್ರೀಯ ಅಧ್ಯಕ್ಷ ಬಿ. ಸಿ. ಭಾರ್ತಿಯಾ ಮತ್ತು ಪ್ರಧಾನ ಕಾರ್ಯದರ್ಶಿ ಪ್ರವೀಣ್ ಖಂಡೇಲ್ವಾಲ್ ಜಂಟಿ ಹೇಳಿಕೆಯಲ್ಲಿ ಚೀನಾದ ಸರಕುಗಳು ಭಾರತೀಯ ಮಾರುಕಟ್ಟೆಗಳಲ್ಲಿ ಆಳವಾದ ನುಗ್ಗುವಿಕೆಯನ್ನು ಮಾಡಿವೆ ಮತ್ತು ಇದನ್ನು ನಿಲ್ಲಿಸಬೇಕಾಗಿದೆ ಎಂದು ಹೇಳಿದ್ದಾರೆ.
ಹಬ್ಬದ ಸಮಯದಲ್ಲಿ ಭಾರತ ತಯಾರಿಸಿದ ವಸ್ತುಗಳನ್ನು ಮಾತ್ರ ಮಾರಾಟ ಮಾಡಬೇಕೆಂದು ಎಲ್ಲಾ ಅಂಗಡಿಯವರನ್ನು ಇವರು ಒತ್ತಾಯಿಸಿದ್ದಾರೆ. ಅಂಗಡಿಯವರು ಯಾವುದೇ ಬಫರ್ ಸ್ಟಾಕ್ಗಳನ್ನು ಹೊಂದಿದ್ದರೆ, ಜುಲೈ 15 ರೊಳಗೆ ಅವುಗಳನ್ನು ಮಾರಾಟ ಮಾಡಬೇಕು ಎಂದು ಅದು ಹೇಳಿದೆ.
ಚೀನಾದ ವಿರುದ್ಧ ಬಲವಾದ ನಿಲುವನ್ನು ಹೊಂದಬೇಕು ಮತ್ತು ಚೀನಾದ ಕಂಪನಿಗಳಿಗೆ ನೀಡಲಾಗುವ ಎಲ್ಲಾ ಸರ್ಕಾರಿ ಒಪ್ಪಂದಗಳನ್ನು ಕೂಡಲೇ ರದ್ದುಗೊಳಿಸಬೇಕು ಎಂದು ಸಿಎಐಟಿ ಸರ್ಕಾರವನ್ನು ಒತ್ತಾಯಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.