ನವದೆಹಲಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಅವರು ಕಾಂಗ್ರೆಸ್ ಪಕ್ಷದ ವಿರುದ್ಧ ಅದರಲ್ಲೂ ಪ್ರಮುಖವಾಗಿ ಗಾಂಧಿ ಪರಿವಾರದ ವಿರುದ್ಧ ತೀಕ್ಷ್ಣ ವಾಗ್ದಾಳಿಯನ್ನು ನಡೆಸಿದ್ದಾರೆ. ಪಾರದರ್ಶಕತೆಯ ವಿಷಯದಲ್ಲಿ ಅವರು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
“ಪಿಎಂಎನ್ಆರ್ಎಫ್ ಸಂಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡುವುದಾಗಿದೆ, ಯುಪಿಎ ಆಡಳಿತ ಇದ್ದಾಗ ರಾಜೀವ್ ಗಾಂಧಿ ಫೌಂಡೇಶನ್ಗೆ ದಾನ ಮಾಡಲಾಗುತ್ತಿತ್ತು. ಪಿಎಂಎನ್ಆರ್ಎಫ್ ಮಂಡಳಿಯಲ್ಲಿ ಸೋನಿಯಾ ಗಾಂಧಿ ಕೂತಿದ್ದರು. ಆರ್ ಜಿ ಎಫ್ ಮುಖ್ಯಸ್ಥೆ ಕುಡ ಸೋನಿಯಾ ಗಾಂಧಿಯವರೇ ಆಗಿದ್ದರು. ಇಡೀ ಪ್ರಕ್ರಿಯೆಯೇ ಅನೈತಿಕವಾಗಿತ್ತು, ಯಾರೊಬ್ಬರೂ ಪಾರದರ್ಶಕತೆಯ ಬಗ್ಗೆ ಚಿಂತನೆ ನಡೆಸಲಿಲ್ಲ” ಎಂದಿದ್ದಾರೆ.
2005 ರಿಂದ 2008 ರವರೆಗೆ ರಾಜೀವ್ ಗಾಂಧಿ ಫೌಂಡೇಶನ್ಗೆ ದಾನ ಮಾಡಿದವರ ಪಟ್ಟಿಯನ್ನು ಕೂಡ ನಡ್ಡಾ ಪ್ರಸ್ತುತಪಡಿಸಿದ್ದಾರೆ.
“ಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡುವ ಸಲುವಾಗಿ ಜನರು ತಾವು ಕಷ್ಟಪಟ್ಟು ದುಡಿದ ಹಣವನ್ನು ಪಿಎಂಎಂ ಪಿಎಂಎನ್ಆರ್ಎಫ್ಗೆ ದಾನ ಮಾಡಿದ್ದರು. ಸಾರ್ವಜನಿಕ ಹಣವನ್ನು ಕುಟುಂಬ ನಡೆಸುವ ಫೌಂಡೇಶನ್ಗೆ ಬದಲಾಯಿಸುವ ಮೂಲಕ ವಂಚನೆ ಮಾಡಲಾಯಿತು ಮತ್ತು ಇದು ಜನರಿಗೆ ಮಾಡಲಾದ ಅತಿ ದೊಡ್ಡ ಮಹಾ ವಂಚನೆ” ಎಂದು ನಡ್ಡಾ ಹೇಳಿದ್ದಾರೆ.
PMNRF, meant to help people in distress, was donating money to Rajiv Gandhi Foundation in UPA years.
Who sat on the PMNRF board? Smt. Sonia Gandhi
Who chairs RGF? Smt. Sonia Gandhi.
Totally reprehensible, disregarding ethics, processes and not bothering about transparency. pic.twitter.com/tttDP4S6bY
— Jagat Prakash Nadda (@JPNadda) June 26, 2020
“ಒಂದು ಕುಟುಂಬದ ಸಂಪತ್ತಿನ ದಾಹ ದೇಶಕ್ಕೆ ದೊಡ್ಡ ನಷ್ಟ ತಂದಿದೆ. ಅವರು ತಮ್ಮೆಲ್ಲ ಶಕ್ತಿಯನ್ನು ಒಂದು ರಕ್ಷಣಾತ್ಮಕ ಅಜೆಂಡಗಾಗಿ ಮೀಸಲಿಟ್ಟಿದ್ದರು. ಸ್ವಹಿತಾಸಕ್ತಿಗಾಗಿ ಲೂಟಿ ಮಾಡಿದ ಕಾಂಗ್ರೆಸ್ನ ಸರ್ವೋಚ್ಚ ಪರಿವಾರ ದೇಶದ ಕೇಳಬೇಕು” ಎಂದಿದ್ದಾರೆ.
ಕಾಂಗ್ರೆಸ್ ಪಕ್ಷವು ಕೇಂದ್ರ ಸರಕಾರದ ಮೇಲೆ ನಿರಂತರವಾಗಿ ಆರೋಪಗಳನ್ನು ಮಾಡುತ್ತಿರುವ ಹಿನ್ನೆಲೆಯಲ್ಲಿ ಜೆ ಪಿ ನಡ್ಡಾ ಅವರು ಆ ಪಕ್ಷಕ್ಕೆ ತಕ್ಕ ತಿರುಗೇಟು ಅನ್ನು ನೀಡುತ್ತಿದ್ದಾರೆ.
One family’s hunger for wealth has cost the nation immensely. If only they have devoted their energies towards more constructive agenda.
The Congress’ Imperial Dynasty needs to apologise to the unchecked loot for self-gains!
— Jagat Prakash Nadda (@JPNadda) June 26, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.