ನವದೆಹಲಿ: ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಪ್ರಜಾಪ್ರಭುತ್ವವನ್ನು ರಕ್ಷಣೆ ಮಾಡುವ ಸಲುವಾಗಿ ಹೋರಾಡಿದ ನಾಯಕರನ್ನು ಮೋದಿ ಇಂದು ಸ್ಮರಿಸಿದ್ದಾರೆ ಮತ್ತು ಅವರ ತ್ಯಾಗಗಳನ್ನು ಎಂದಿಗೂ ಮರೆಯಲಾಗದು ಎಂದು ಹೇಳಿದ್ದಾರೆ.
“ದೇಶದಲ್ಲಿ ಇಂದಿಗೆ ಸರಿಯಾಗಿ 45 ವರ್ಷಗಳ ಹಿಂದೆ ತುರ್ತುಪರಿಸ್ಥಿತಿಯನ್ನು ಹೇರಲಾಯಿತು. ಆ ಸಂದರ್ಭದಲ್ಲಿ ದೇಶದ ಪ್ರಜಾಪ್ರಭುತ್ವದ ಉಳಿವಿಗಾಗಿ ಹೋರಾಡಿದವರನ್ನು ಕಿರುಕುಳಕ್ಕೆ ಒಳಪಡಿಸಲಾಯಿತು. ನಾನು ಅವರೆಲ್ಲರಿಗೂ ಸೆಲ್ಯೂಟ್ ಮಾಡುತ್ತೇನೆ. ಅವರ ತ್ಯಾಗವನ್ನು ಈ ದೇಶ ಎಂದಿಗೂ ಮರೆಯಲಾರದು” ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
आज से ठीक 45 वर्ष पहले देश पर आपातकाल थोपा गया था। उस समय भारत के लोकतंत्र की रक्षा के लिए जिन लोगों ने संघर्ष किया, यातनाएं झेलीं, उन सबको मेरा शत-शत नमन! उनका त्याग और बलिदान देश कभी नहीं भूल पाएगा। pic.twitter.com/jlQVJQVrsX
— Narendra Modi (@narendramodi) June 25, 2020
ಮಾಜಿ ಪ್ರಧಾನಿ ಶ್ರೀಮತಿ ಇಂದಿರಾಗಾಂಧಿಯವರು ಹೇರಿದ ರಾಷ್ಟ್ರೀಯ ತುರ್ತು ಪರಿಸ್ಥಿತಿಯ 45ನೇ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಆಡಿಯೋ ಸಂದೇಶವನ್ನು ನೀಡಿರುವ ಅವರು, ತುರ್ತುಪರಿಸ್ಥಿತಿಯನ್ನು ಹೇರಿದ ಸಂದರ್ಭದಲ್ಲಿ ಪ್ರತಿಪಕ್ಷಗಳು ಕೇವಲ ರಾಜಕೀಯಕ್ಕೆ ಸೀಮಿತಗೊಂಡಿರಲಿಲ್ಲ ಬದಲಾಗಿ ಅವಗಳು ದೇಶದ ನಾಗರಿಕರನ್ನು ಒಗ್ಗೂಡಿಸಿದವು ಎಂದಿದ್ದಾರೆ.
“ಕಳೆದುಹೋದ ಪ್ರಜಾಪ್ರಭುತ್ವವನ್ನು ಮರಳಿ ಪಡೆಯಲು ಜನರು ಪ್ರೇರಿತರಾದರು. ಸುಲಭವಾಗಿ ಊಟವನ್ನು ಪಡೆದುಕೊಳ್ಳುವವರಿಗೆ ಹಸಿವಿನ ನೋವಿನ ಅರಿವು ಇರುವುದಿಲ್ಲ. ಒಬ್ಬರು ಪ್ರಜಾಪ್ರಭುತ್ವವನ್ನು ಕಸಿದುಕೊಂಡಾಗ, ಅದರ ಮಹತ್ವದ ಅರಿವು ಸಾಮಾನ್ಯರ ಬದುಕಿನಲ್ಲಿ ಉಂಟಾಗುತ್ತದೆ” ಎಂದಿದ್ದಾರೆ.
“ತುರ್ತುಪರಿಸ್ಥಿತಿಯ ಅವಧಿಯ ಬಗ್ಗೆ ಉಲ್ಲೇಖಿಸಿದ ಅವರು, ನಮ್ಮಿಂದ ಏನನ್ನೋ ಕಸಿದುಕೊಳ್ಳಲಾಗಿದೆ ಎಂಬ ಅರಿವು ಪ್ರತಿಯೊಬ್ಬರಿಗೂ ಉಂಟಾಗಿತ್ತು” ಎಂದಿದ್ದಾರೆ.
“ಸಂವಿಧಾನದ ಕಾರಣದಿಂದಲೇ ನಮ್ಮ ಪ್ರಜಾಪ್ರಭುತ್ವ ವಿಕಸನಗೊಂಡಿದೆ ಎನ್ನಲಾಗುವುದಿಲ್ಲ. ಸಮಾಜವನ್ನು ನಿಯಂತ್ರಿಸಲು ನಮಗೆ ಕೆಲವೊಂದು ನೀತಿ, ನಿರ್ಬಂಧಗಳು ಮತ್ತು ಕಾನೂನಿನ ಅಗತ್ಯ ಇರುತ್ತದೆ. ಕಾನೂನು ಮತ್ತು ನಿಯಮಗಳ ಹೊರತಾಗಿಯೂ ನಮ್ಮ ಮೌಲ್ಯಗಳಲ್ಲಿ ಪ್ರಜಾಪ್ರಭುತ್ವ ಸಮೃದ್ಧವಾಗಿದೆ ಎಂಬ ಬಗ್ಗೆ ಪ್ರತಿ ಭಾರತೀಯರಿಗೂ ಹೆಮ್ಮೆಯಿದೆ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.