ಲಕ್ನೋ: ಉತ್ತರಪ್ರದೇಶದ ಕುಶಿನಗರ ವಿಮಾನ ನಿಲ್ದಾಣವನ್ನು ಅಂತರರಾಷ್ಟ್ರೀಯ ವಿಮಾನ ನಿಲ್ದಾಣವೆಂದು ಹೆಸರಿಸುವ ನಿರ್ಧಾರವು ಉತ್ತಮ ಸುದ್ದಿಯಾಗಿದೆ ಮತ್ತು ಇದು ಸ್ಥಳೀಯ ಜನರಿಗೆ ಉತ್ತಮ ಅವಕಾಶಗಳನ್ನು ಒದಗಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಹೇಳಿದ್ದಾರೆ.
“ಉತ್ತರ ಪ್ರದೇಶ, ಪ್ರವಾಸೋದ್ಯಮ ಮತ್ತು ಭಗವಾನ್ ಬುದ್ಧನ ಉದಾತ್ತ ಆಲೋಚನೆಗಳಿಂದ ಪ್ರೇರಿತವಾದವರಿಗೆ ಉತ್ತಮ ಸುದ್ದಿ! ಕುಶಿನಗರ ವಿಮಾನ ನಿಲ್ದಾಣವು ಈಗ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವಾಗಲಿದೆ. ಇದರಿಂದ ಇಲ್ಲಿನ ಸಂಪರ್ಕವು ಗಮನಾರ್ಹವಾಗಿ ಸುಧಾರಿಸಲಿದೆ. ಹೆಚ್ಚಿನ ಪ್ರವಾಸಿಗರು ಮತ್ತು ಯಾತ್ರಾರ್ಥಿಗಳು ಸ್ಥಳೀಯ ಜನಸಂಖ್ಯೆಗೆ ಉತ್ತಮ ಅವಕಾಶಗಳನ್ನು ನೀಡುತ್ತಾರೆ ”ಎಂದು ಕುಶಿನಗರ ವಿಮಾನ ನಿಲ್ದಾಣವನ್ನು ಅಂತರರಾಷ್ಟ್ರೀಯ ವಿಮಾನ ನಿಲ್ದಾಣವೆಂದು ಘೋಷಿಸಲು ಕೇಂದ್ರ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದ ನಂತರ ಮೋದಿ ಟ್ವೀಟ್ ಮಾಡಿದ್ದಾರೆ.
Great news for Uttar Pradesh, tourism and those inspired by the noble thoughts of Lord Buddha!
Kushinagar Airport will now be an international airport. Connectivity will improve significantly. More tourists and pilgrims will also mean better opportunities for local population.
— Narendra Modi (@narendramodi) June 24, 2020
ಕುಶಿನಗರ ವಿಮಾನ ನಿಲ್ದಾಣವು ಶ್ರಾವಸ್ತಿ, ಕಪಿಲ್ವಾಸ್ತು ಮತ್ತು ಲುಂಬಿನಿಯಂತಹ ಹಲವಾರು ಬೌದ್ಧ ಸಾಂಸ್ಕೃತಿಕ ತಾಣಗಳ ಸಮೀಪದಲ್ಲಿದೆ.
ಕುಶಿನಗರವೂ ಬೌದ್ಧ ಸಾಂಸ್ಕೃತಿಕ ತಾಣವಾಗಿದ್ದು, “ಅಂತರರಾಷ್ಟ್ರೀಯ ವಿಮಾನ ನಿಲ್ದಾಣ” ಎಂದು ಘೋಷಿಸುವುದರಿಂದ ಸುಧಾರಿತ ಸಂಪರ್ಕ ಸಿಖಲಿದೆ, ವಾಯುಯಾನ ಪ್ರಯಾಣಿಕರಿಗೆ ಸ್ಪರ್ಧಾತ್ಮಕ ವೆಚ್ಚಗಳ ವ್ಯಾಪಕ ಆಯ್ಕೆ ನೀಡಲಿದೆ. ಇದು ದೇಶೀಯ / ಅಂತರರಾಷ್ಟ್ರೀಯ ಪ್ರವಾಸೋದ್ಯಮ ಮತ್ತು ಪ್ರದೇಶಗಳ ಆರ್ಥಿಕ ಅಭಿವೃದ್ಧಿಗೆ ಕಾರಣವಾಗುತ್ತದೆ. ಇದು ಅಂತರರಾಷ್ಟ್ರೀಯ ಗಡಿಯನ್ನು ಸಮೀಪಿಸುವ ಪ್ರಮುಖ ಕಾರ್ಯತಂತ್ರದ ಸ್ಥಳವಾಗಲಿದೆ ಎಂದು ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.
ಕುಶಿನಗರ ಗೋರಖ್ಪುರದಿಂದ ಪೂರ್ವಕ್ಕೆ 50 ಕಿ.ಮೀ ದೂರದಲ್ಲಿರುವ ಉತ್ತರ ಪ್ರದೇಶದ ಈಶಾನ್ಯ ಭಾಗದಲ್ಲಿದೆ ಮತ್ತು ಇದು ಬೌದ್ಧ ತೀರ್ಥಯಾತ್ರೆಯ ಪ್ರಮುಖ ಸ್ಥಳಗಳಲ್ಲಿ ಒಂದಾಗಿದೆ.
ಪ್ರಾರ್ಥನೆ ಸಲ್ಲಿಸಲು ಬರುವ ಥೈಲ್ಯಾಂಡ್, ಕಾಂಬೋಡಿಯಾ, ಜಪಾನ್, ಮ್ಯಾನ್ಮಾರ್ ಮುಂತಾದ ದೇಶಗಳ ಸುಮಾರು 200-300 ಭಕ್ತರನ್ನು ಕುಶಿನಗರ ಪ್ರತಿದಿನ ಸೆಳೆಯುತ್ತದೆ ಎಂದು ಸರ್ಕಾರ ಹೇಳಿದೆ.
“ಬೌದ್ಧ ಸರ್ಕ್ಯೂಟ್” ವಿಶ್ವದಾದ್ಯಂತ 530 ಮಿಲಿಯನ್ ಬೌದ್ಧರಿಗೆ ಅಭ್ಯಾಸ ಮಾಡುವ ಪ್ರಮುಖ ಯಾತ್ರಾ ತಾಣವಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಕುಶಿನಗರ ವಿಮಾನ ನಿಲ್ದಾಣವನ್ನು ಮೇಲ್ದರ್ಜೆಗೇರಿಸುವ ನಿರ್ಧಾರಕ್ಕೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಪ್ರಧಾನಿಗೆ ಧನ್ಯವಾದ ಅರ್ಪಿಸಿದರು.
ಕುಶಿನಗರ ವಿಮಾನ ನಿಲ್ದಾಣವನ್ನು ಅಂತರರಾಷ್ಟ್ರೀಯ ವಿಮಾನ ನಿಲ್ದಾಣವೆಂದು ಘೋಷಿಸಿದ್ದಕ್ಕಾಗಿ ಪಿಎಂ ನರೇಂದ್ರ ಮೋದಿ ಮತ್ತು ಕೇಂದ್ರ ಸಚಿವ ಸಂಪುಟಕ್ಕೆ ಧನ್ಯವಾದ ಅರ್ಪಿಸುತ್ತೇನೆ. ವಿಮಾನ ನಿಲ್ದಾಣವು ಶ್ರಾವಸ್ತಿ, ಲುಂಬಿನಿ, ಕಪಿಲ್ವಾಸ್ತು, ಸಾರನಾಥ್ ಮತ್ತು ಗಯಾ ಪ್ರವಾಸಿ ಸ್ಥಳಗಳಿಗೆ ಸಮೀಪವಿರುವ ಕಾರಣ ಉತ್ತರಪ್ರದೇಶದಲ್ಲಿ ಪ್ರವಾಸೋದ್ಯಮವನ್ನು ಹೆಚ್ಚಿಸಲು ಈ ಕ್ರಮವು ಸಹಾಯ ಮಾಡುತ್ತದೆ ”ಎಂದು ಆದಿತ್ಯನಾಥ್ ಹೇಳಿದ್ದಾರೆ.
अभिनंदन।
आदरणीय PM श्री @narendramodi जी।
आपका दो अंतरराष्ट्रीय एयरपोर्ट्स का उपहार प्रदेश में विकास को पंख देगा।
जेवर स्थित नोएडा इंटरनेशनल एयरपोर्ट और कुशीनगर अंतरराष्ट्रीय हवाई-अड्डा, नागरिक उड्डयन के क्षेत्र में प्रदेश को राष्ट्रीय व अंतरराष्ट्रीय फलक पर एक नई पहचान देगा।
— Yogi Adityanath (@myogiadityanath) June 24, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.