ಪುರಿ: ಕೊರೋನಾವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಕಟ್ಟುನಿಟ್ಟಾದ ನಿರ್ಬಂಧಗಳ ನಡುವೆ ಬಹು ನಿರೀಕ್ಷಿತ ಜಗನ್ನಾಥ ರಥಯಾತ್ರೆ ಪುರಿಯಲ್ಲಿ ಪ್ರಾರಂಭವಾಗಿದೆ. ಪುರಿಯ ಇಡೀ ಜಿಲ್ಲೆಯನ್ನು ಸೋಮವಾರ ರಾತ್ರಿ 9 ಗಂಟೆಯಿಂದ ಕ್ಲೋಸ್ ಡೌನ್ ಮಾಡಲಾಗಿದೆ, ಬುಧವಾರ ಮಧ್ಯಾಹ್ನ 2 ಗಂಟೆಯವರೆಗೆ ಕ್ಲೋಸ್ ಡೌನ್ ಮುಂದುವರೆಯಲಿದೆ.
ಇತಿಹಾಸದಲ್ಲೇ ಮೊದಲ ಬಾರಿಗೆ ವಿಶ್ವವಿಖ್ಯಾತ ಪುರಿ ರಥಯಾತ್ರೆ ಭಕ್ತಾದಿಗಳು ಇಲ್ಲದೆ ನಡೆಯುತ್ತಿದೆ.
ಇಂದು ಮುಂಜಾನೆಯಿಂದ ಆಚರಣೆಗಳು ಆರಂಭಗೊಂಡಿವೆ. ಅರ್ಚಕರು ಮತ್ತು ಸೇವೆಕರು ಯಾತ್ರೆಯನ್ನು ಪ್ರಾರಂಭಿಸಲು ಭಗವಾನ್ ಜಗನ್ನಾಥ ಮತ್ತು ಭಗವಾನ್ ಬಾಲಭದ್ರರ ವಿಗ್ರಹಗಳನ್ನು ಹೊರ ತಂದರು.
ಕೋವಿಡ್ -19 ಸಾಂಕ್ರಾಮಿಕ ರೋಗದ ನಡುವೆ ಈ ವರ್ಷ ವಾರ್ಷಿಕ ರಥ ಉತ್ಸವ ನಡೆಸಲು ಸುಪ್ರೀಂಕೋರ್ಟ್ ಸೋಮವಾರ ಅನುಮತಿ ನೀಡಿದೆ. ಆದರೆ, ರಥಗಳನ್ನು ಎಳೆಯಲು 500ಕ್ಕೂ ಹೆಚ್ಚು ಜನರಿಗೆ ಅವಕಾಶ ನೀಡುವುದಿಲ್ಲ ಎಂದು ಅದು ಸ್ಪಷ್ಟ ಸೂಚನೆಯನ್ನು ನೀಡಿದೆ.
ಪುರಿಯ ಜಗನ್ನಾಥ ದೇವಸ್ಥಾನದಲ್ಲಿ ಯಾತ್ರೆ ಆರಂಭವಾಗುವುದಕ್ಕೂ ಮುನ್ನ ಇಡೀ ದೇಗುಲ ಮತ್ತು ಆವರಣವನ್ನು ಸಂಪೂರ್ಣ ಸ್ಯಾನಿಟೈಸ್ ಮಾಡಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ರಥಯಾತ್ರೆಗೆ ಶುಭಾಷಯ ಕೋರಿದ್ದಾರೆ.
ಟ್ವಿಟ್ ಮಾಡಿರುವ ಮೋದಿ, “ಭಗವಾನ್ ಜಗನ್ನಾಥರ ರಥಯಾತ್ರೆಯ ಶುಭ ಸಂದರ್ಭದಲ್ಲಿ ನಿಮ್ಮೆಲ್ಲರಿಗೂ ನನ್ನ ಹೃತ್ಪೂರ್ವಕ ಶುಭಾಶಯಗಳು. ಪೂಜ್ಯತೆ ಮತ್ತು ಭಕ್ತಿಯಿಂದ ತುಂಬಿರುವ ಈ ಪ್ರಯಾಣವು ದೇಶದ ಜನರ ಜೀವನಕ್ಕೆ ಸಂತೋಷ, ಸಮೃದ್ಧಿ, ಅದೃಷ್ಟ ಮತ್ತು ಆರೋಗ್ಯವನ್ನು ತರುತ್ತದೆ ಎಂದು ನಾನು ಬಯಸುತ್ತೇನೆ ”ಎಂದಿದ್ದಾರೆ.
भगवान जगन्नाथ की रथ यात्रा के पावन-पुनीत अवसर पर आप सभी को मेरी हार्दिक शुभकामनाएं। मेरी कामना है कि श्रद्धा और भक्ति से भरी यह यात्रा देशवासियों के जीवन में सुख, समृद्धि, सौभाग्य और आरोग्य लेकर आए। जय जगन्नाथ!
— Narendra Modi (@narendramodi) June 23, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.