ಹರಿದ್ವಾರ: ಯೋಗ ಗುರು ರಾಮದೇವ್ ನಡೆಸುತ್ತಿರುವ ಪತಂಜಲಿ ಆಯುರ್ವೇದವು ಉತ್ತರಾಖಂಡದ ಹರಿದ್ವಾರದ ಪತಂಜಲಿ ಯೋಗಪೀಠದಲ್ಲಿ ಕೊರೋನಾವೈರಸ್ ಸೋಂಕಿಗೆ ಚಿಕಿತ್ಸೆ ನೀಡಲು ಕೊರೊನಿಲ್ ಎಂಬ ಆಯುರ್ವೇದ ಔಷಧಿಯನ್ನು ಬಿಡುಗಡೆ ಮಾಡಿದೆ. ಈ ತಿಂಗಳ ಆರಂಭದಲ್ಲಿ, ಪತಂಜಲಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಆಚಾರ್ಯ ಬಾಲಕೃಷ್ಣ ಅವರು SARS-CoV-2 ವೈರಸ್ನಿಂದ ಸೃಷ್ಟಿಯಾದ ಕೋವಿಡ್-19ಗೆ ಪರಿಹಾರವನ್ನು ಕಂಡುಹಿಡಿಯಲಾಗುತ್ತಿದೆ ಎಂದು ಹೇಳಿದ್ದರು.
ಅಶ್ವಗಂಧ, ಅಮೃತಬಳ್ಳಿ ಮತ್ತು ತುಳಸಿ ಮಿಶ್ರಣದಿಂದ ತಯಾರಿಸಿದ ಕೊರೊನಿಲ್ ಅನ್ನು ಚಿಕಿತ್ಸೆಯಲ್ಲಿ ಪಡೆದುಕೊಂಡ ಕೋವಿಡ್-19 ರೋಗಿಗಳು ಶೇಕಡಾ 100ರಷ್ಟು ಚೇತರಿಕೆ ಪ್ರಮಾಣವನ್ನು ತೋರಿಸಿದ್ದಾರೆ ಎಂದು ಬಾಬಾ ರಾಮದೇವ್ ಬಹಿರಂಗಪಡಿಸಿದ್ದರು.
ಕೋವಿಡ್-19 ಬಂದ ನಂತರ ನಾವು ವಿಜ್ಞಾನಿಗಳ ತಂಡವನ್ನು ನೇಮಿಸಿದ್ದೇವೆ. ಮೊದಲನೆಯದಾಗಿ, ಪ್ರತ್ಯಾನುಕರಣೆ ಮಾಡಲಾಯಿತು ಮತ್ತು ವೈರಸ್ ವಿರುದ್ಧ ಹೋರಾಡಬಹುದಾದ ಮತ್ತು ದೇಹದಲ್ಲಿ ಅದರ ಹರಡುವಿಕೆಯನ್ನು ತಡೆಗಟ್ಟಬಹುದಾದ ಸಂಯುಕ್ತಗಳನ್ನು ಗುರುತಿಸಲಾಯಿತು. ನಂತರ, ನಾವು ನೂರಾರು ಧನಾತ್ಮಕ ರೋಗಿಗಳ ಮೇಲೆ ಕ್ಲಿನಿಕಲ್ ಕೇಸ್ ಸ್ಟಡಿ ನಡೆಸಿದ್ದೇವೆ ಮತ್ತು ನಮಗೆ ಶೇಕಡಾ 100 ರಷ್ಟು ಅನುಕೂಲಕರ ಫಲಿತಾಂಶಗಳು ದೊರೆತಿವೆ ”ಎಂದು ಬಾಲಕೃಷ್ಣ ಅವರು ಹೇಳಿದ್ದಾರೆ.
“ನಮ್ಮ ಔಷಧಿಯನ್ನು ತೆಗೆದುಕೊಂಡ ನಂತರ, ಕೋವಿಡ್ ರೋಗಿಗಳು 5-14 ದಿನಗಳಲ್ಲಿ ಚೇತರಿಸಿಕೊಂಡಿದ್ದಾರೆ ಮತ್ತು ನಂತರ ಅವರ ವರದಿ ನೆಗೆಟಿವ್ ಬಂದಿದೆ. ಆದ್ದರಿಂದ, ಆಯುರ್ವೇದದ ಮೂಲಕ ಕೋವಿಡ್ಗೆ ಚಿಕಿತ್ಸೆ ಸಾಧ್ಯ ಎಂದು ನಾವು ಹೇಳಬಹುದು. ನಾವು ನಿಯಂತ್ರಿತ ಕ್ಲಿನಿಕಲ್ ಪ್ರಯೋಗಗಳನ್ನು ಮಾತ್ರ ಮಾಡುತ್ತಿದ್ದೇವೆ. ಮುಂದಿನ 4-5 ದಿನಗಳಲ್ಲಿ, ಸಾಕ್ಷ್ಯಗಳು ಮತ್ತು ಡೇಟಾವನ್ನು ನಾವು ಬಿಡುಗಡೆ ಮಾಡುತ್ತೇವೆ” ಎಂದು ಅವರು ಹೇಳಿದ್ದಾರೆ.
ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಜನರು ಯೋಗಾಭ್ಯಾಸ ಮಾಡಬೇಕು ಮತ್ತು ಸರಿಯಾದ ಆಹಾರದ ಮೂಲಕ ತಮ್ಮನ್ನು ತಾವು ಆರೋಗ್ಯವಾಗಿರಿಸಿಕೊಳ್ಳಬೇಕು ಎಂದು ಬಾಲಕೃಷ್ಣ ಸಲಹೆ ನೀಡಿದ್ದಾರೆ.
Proud launch of first and foremost evidence-based ayurvedic medicine for #corona contagion, #SWASARI_VATI, #CORONIL, is scheduled for tomorrow at 12 noon from #Patanjali Yogpeeth Haridwar🙏🏻 pic.twitter.com/K7uU38Kuzl
— Acharya Balkrishna (@Ach_Balkrishna) June 22, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.