ನವದೆಹಲಿ: ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರು, ರಾಷ್ಟ್ರೀಯ ಭದ್ರತೆ ಮತ್ತು ಭಾರತದ ಪ್ರಾದೇಶಿಕ ಸಮಗ್ರತೆಯ ಬಗ್ಗೆ ರಾಜಿ ಮಾಡಿಕೊಳ್ಳುವುದನ್ನು ಕಾಂಗ್ರೆಸ್ಸಿಗರು ನಿಲ್ಲಿಸಬೇಕು, ಇದರಿಂದ ಸಶಸ್ತ್ರ ಪಡೆಗಳಿಗೆ ದೊಡ್ಡ ಅಪಚಾರವಾಗುತ್ತದೆ ಮತ್ತು ಅವುಗಳ ನೈತಿಕಸ್ಥೈರ್ಯ ಕೆಳಗಿಳಿಯುತ್ತದೆ ಎಂದಿದ್ದಾರೆ.
“ಯುಪಿಎ ಅಧಿಕಾರಾವಧಿಯಲ್ಲಿ ಪ್ರಧಾನ ಮಂತ್ರಿಯಾಗಿದ್ದ ಸಿಂಗ್ ಅವರು ನೂರಾರು ಚದರ ಕಿಲೋಮೀಟರ್ ಭಾರತೀಯ ಭೂಮಿಯನ್ನು ಅಸಹ್ಯವಾಗಿ ಚೀನಾಗೆ ಒಪ್ಪಿಸಿದರು. 2010 ರಿಂದ 2013 ರ ನಡುವೆ ಚೀನಾ ಮಾಡಿದ 600 ಆಕ್ರಮಣಗಳಿಗೆ ಸಿಂಗ್ ಅಧ್ಯಕ್ಷತೆ ವಹಿಸಿದ್ದರು” ಎಂದು ಅವರು ಆರೋಪಿಸಿದ್ದಾರೆ.
ಲಡಾಖ್ನ ಗಾಲ್ವಾನ್ ಕಣಿವೆಯಲ್ಲಿ ಚೀನಾದ ಸೇನೆ (ಪಿಎಲ್ಎ)ಯೊಂದಿಗೆ ಮುಖಾಮುಖಿಯಾಗಿ 20 ಭಾರತೀಯ ಸೈನಿಕರ ಸಾವಿನ ಬಗ್ಗೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕಿಸಿದ ಒಂದು ದಿನದ ನಂತರ ಬಿಜೆಪಿ ಮುಖ್ಯಸ್ಥರ ಹೇಳಿಕೆ ಹೊರಬಿದ್ದಿದೆ.
ಸಶಸ್ತ್ರ ಪಡೆಗಳನ್ನು ಅವಮಾನಿಸಿದ್ದಕ್ಕಾಗಿ ಕಾಂಗ್ರೆಸ್ ಅನ್ನು ದೂಷಿಸಿದ ನಡ್ಡಾ, 2019ರಲ್ಲಿ ಬಾಲಕೋಟ್ ವಾಯುದಾಳಿ ಮತ್ತು 2017 ರಲ್ಲಿ ಉರಿ ಸರ್ಜಿಕಲ್ ಸ್ಟ್ರೈಕ್ಗೆ ಪುರಾವೆಗಳನ್ನು ಕೇಳುವ ಮೂಲಕ ಪಡೆಗಳ ಶೌರ್ಯದ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಪಕ್ಷ ಈಗ ಮತ್ತೊಮ್ಮೆ ಸೇನೆಯ ಶೌರ್ಯವನ್ನು ಪ್ರಶ್ನಿಸುತ್ತಿದೆ ಎಂದಿದ್ದಾರೆ.
ಸೋಮವಾರ ಟ್ವಿಟ್ ಮಾಡಿದ್ದ ನಡ್ಡಾ, “ಪ್ರೀತಿಯ ಡಾ.ಸಿಂಗ್ ಮತ್ತು ಕಾಂಗ್ರೆಸ್ ಪಕ್ಷ, ನಿರಂತರವಾಗಿ ನಮ್ಮ ಸೇನೆಯನ್ನು ಅವಮಾನಿಸುವುದನ್ನು, ಅವರ ಶೌರ್ಯವನ್ನು ಪ್ರಶ್ನಿಸುವುದನ್ನು ನಿಲ್ಲಿಸಿದೆ. ಇದನ್ನು ನೀವು ವೈಮಾನಿಕ ದಾಳಿ ಮತ್ತು ಸರ್ಜಿಕಲ್ ಸ್ಟ್ರೈಕ್ ವೇಳೆಯೂ ನಡೆಸಿದ್ದೀರಿ. ರಾಷ್ಟ್ರೀಯ ಏಕತೆಯ ನಿಜವಾದ ಅರ್ಥವನ್ನು ಅರ್ಥಮಾಡಿಕೊಳ್ಳಿ, ವಿಶೇಷವಾಗಿ ಇಂತಹ ಸಂದರ್ಭದಲ್ಲಿ. ಇನ್ನೂ ಸುಧಾರಿಸಿಕೊಳ್ಳುವ ಕಾಲ ಮಿಂಚಿಲ್ಲ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.