ನವದೆಹಲಿ: ಕೇಂದ್ರ ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಅವರು ಸುಧಾರಿತ ಗಣಿಗಾರಿಕೆಯಲ್ಲಿ ಆತ್ಮನಿರ್ಭರ ಭಾರತಕ್ಕಾಗಿ ವಿಜ್ಞಾನ ಮತ್ತು ತಂತ್ರಜ್ಞಾನ ಕಾರ್ಯಕ್ರಮ ಯೋಜನೆ -ಸತ್ಯಭಾಮ (SATYABHAMA-Science and Technology Yojana for Aatmanirbhar Bharat in Mining Advancement) ಪೋರ್ಟಲ್ ಅನ್ನು ಜೂನ್ 15ರಂದು ಪ್ರಾರಂಭಿಸಿದರು. ಪೋರ್ಟಲ್ ಅನ್ನು ವಿನ್ಯಾಸಗೊಳಿಸಿದ್ದು, ಅಭಿವೃದ್ಧಿಪಡಿಸಿದ್ದು ಮತ್ತು ಅನುಷ್ಠಾನಗೊಳಿಸಿದ್ದು ಗಣಿ ಮಾಹಿತಿ ವಿಭಾಗದ ರಾಷ್ಟ್ರೀಯ ಮಾಹಿತಿ ಕೇಂದ್ರ (ಎನ್ಐಸಿ) ಎಂದು ವರದಿಗಳು ತಿಳಿಸಿವೆ.
ಪೋರ್ಟಲ್ ಚಾಲನೆಯಲ್ಲಿ, ದೇಶದ ಗಣಿಗಾರಿಕೆ ಮತ್ತು ಖನಿಜ ಕ್ಷೇತ್ರದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಉತ್ತೇಜಿಸುವಲ್ಲಿ ಡಿಜಿಟಲ್ ಟೆಕ್ನಾಲಜೀಸ್ ಪಾತ್ರವನ್ನು ಸಚಿವ ಪ್ರಲ್ಹಾದ್ ಜೋಶಿ ಒತ್ತಿ ಹೇಳಿದರು. ಜೋಶಿ ಅವರು ಗಣಿಗಾರಿಕೆ ಮತ್ತು ಖನಿಜ ವಲಯದ ವಿಜ್ಞಾನಿಗಳು ಮತ್ತು ಸಂಶೋಧಕರಿಗೆ ಆತ್ಮಾ ನಿರ್ಭರ ಭಾರತ್ಗಾಗಿ ಗುಣಾತ್ಮಕ ಮತ್ತು ನವೀನ ಸಂಶೋಧನೆ ಮತ್ತು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವಂತೆ ಮನವಿ ಮಾಡಿದರು.
ವಿಜ್ಞಾನಿಗಳು, ಸಂಶೋಧಕರು ಭೌತಿಕವಾಗಿ ಸಂಶೋಧನಾ ಪ್ರಸ್ತಾಪಗಳನ್ನು ಸಲ್ಲಿಸುವ ಪ್ರಸ್ತುತ ವ್ಯವಸ್ಥೆಗೆ ವ್ಯತಿರಿಕ್ತವಾಗಿ, ಸತ್ಯಭಾಮ ಪೋರ್ಟಲ್ ಯೋಜನೆಗಳ ಮೇಲ್ವಿಚಾರಣೆ ಮತ್ತು ನಿಧಿಗಳು / ಅನುದಾನಗಳ ಬಳಕೆಯೊಂದಿಗೆ ಯೋಜನಾ ಪ್ರಸ್ತಾಪಗಳನ್ನು ಆನ್ಲೈನ್ನಲ್ಲಿ ಸಲ್ಲಿಸಲು ಅನುವು ಮಾಡಿಕೊಡುತ್ತದೆ. ಸಂಶೋಧಕರು ಪ್ರಗತಿಯ ವರದಿಗಳು ಮತ್ತು ಯೋಜನೆಗಳ ಅಂತಿಮ ತಾಂತ್ರಿಕ ವರದಿಗಳನ್ನು ಎಲೆಕ್ಟ್ರಾನಿಕ್ ಸ್ವರೂಪದಲ್ಲಿ ಪೋರ್ಟಲ್ನಲ್ಲಿ ಸಲ್ಲಿಸಬಹುದು. ಬಳಕೆದಾರರ ಕೈಪಿಡಿ ಸಹ ಪೋರ್ಟಲ್ನಲ್ಲಿ ಲಭ್ಯವಿದೆ, ಅಲ್ಲಿ ಯೋಜನೆಯ ಪ್ರಸ್ತಾಪಗಳನ್ನು ಸಲ್ಲಿಸುವ ಹಂತ ಹಂತದ ಕಾರ್ಯವಿಧಾನಗಳನ್ನು ಹೈಲೈಟ್ ಮಾಡಲಾಗಿದೆ. ಪೋರ್ಟಲ್ ಅನ್ನು ನೀತಿ ಆಯೋಗದ ಎನ್ಜಿಓ ದರ್ಪನ್ ಪೋರ್ಟಲ್ನೊಂದಿಗೆ ಸಂಯೋಜಿಸಲಾಗಿದೆ.
ಗಣಿ ಸಚಿವಾಲಯದ ವಿಜ್ಞಾನ ಮತ್ತು ತಂತ್ರಜ್ಞಾನ ಕಾರ್ಯಕ್ರಮ ಯೋಜನೆಯಡಿ ಸಂಶೋಧನೆ ಮತ್ತು ಅಭಿವೃದ್ಧಿಗೆ ಯೋಜನೆಗಳನ್ನು ಅನುಷ್ಠಾನಗೊಳಿಸಲು ಭಾರತ ಸರ್ಕಾರದ ಶೈಕ್ಷಣಿಕ ಮತ್ತು ಕೈಗಾರಿಕಾ ಸಂಶೋಧನಾ ಇಲಾಖೆಯೊಂದಿಗೆ ಮಾನ್ಯತೆ ಪಡೆದ ಶೈಕ್ಷಣಿಕ ಸಂಸ್ಥೆಗಳು, ವಿಶ್ವವಿದ್ಯಾಲಯಗಳು, ರಾಷ್ಟ್ರೀಯ ಸಂಸ್ಥೆಗಳು ಮತ್ತು ಆರ್ & ಡಿ ಸಂಸ್ಥೆಗಳಿಗೆ ಭಾರತವು ಹಣವನ್ನು ಒದಗಿಸುತ್ತದೆ. ರಾಷ್ಟ್ರ ಮತ್ತು ಅದರ ಜನರ ಅನುಕೂಲಕ್ಕಾಗಿ ಭೂವಿಜ್ಞಾನ, ಖನಿಜ ಪರಿಶೋಧನೆ, ಗಣಿಗಾರಿಕೆ ಮತ್ತು ಸಂಬಂಧಿತ ಪ್ರದೇಶಗಳು, ಖನಿಜ ಸಂಸ್ಕರಣೆ, ದೇಶದ ಖನಿಜ ಸಂಪನ್ಮೂಲಗಳ ಗರಿಷ್ಠ ಬಳಕೆ ಮತ್ತು ಸಂರಕ್ಷಣೆಯನ್ನು ಇದು ಉತ್ತೇಜಿಸಲಿದೆ. ಪೋರ್ಟಲ್ ಯೋಜನೆಯ ಅನುಷ್ಠಾನದಲ್ಲಿ ದಕ್ಷತೆ ಮತ್ತು ಪರಿಣಾಮಕಾರಿತ್ವವನ್ನು ಹೆಚ್ಚಿಸಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.