ನವದೆಹಲಿ: ಎರಡನೇ ಮಹಾಯುದ್ಧದಲ್ಲಿ ವಿಜಯ ಸಾಧಿಸಿದ 75ನೇ ವರ್ಷಾಚರಣೆಯ ಸ್ಮರಣಾರ್ಥ ರಷ್ಯಾದ ಮಾಸ್ಕೋದಲ್ಲಿ ನಡೆಯಲಿರುವ ವಿಕ್ಟರಿ ಪೆರೇಡ್ನಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಭಾಗವಹಿಸಲಿದ್ದಾರೆ. ಜೂನ್ 24ರಂದು ವಿಕ್ಟರಿ ಪೆರೇಡ್ ನಡೆಯಲಿದೆ.
ರಷ್ಯಾದ ಮತ್ತು ಇತರ ಸ್ನೇಹಪರ ಜನರು ಮಾಡಿದ ವೀರತೆ ಮತ್ತು ತ್ಯಾಗಗಳನ್ನು ಗೌರವಿಸಲು ಈ ಪೆರೇಡ್ ಆಯೋಜಿಸಲಾಗಿದೆ ಎಂದು ವರದಿಗಳು ತಿಳಿಸಿವೆ.
ರಷ್ಯಾದ ಒಕ್ಕೂಟದ ರಕ್ಷಣಾ ಸಚಿವ ಸೆರ್ಗೆ ಶೋಯಿಗು ಅವರು ರಾಜನಾಥ್ ಅವರನ್ನು ವಿಕ್ಟರಿ ಪೆರೇಡ್ಗೆ ಆಹ್ವಾನಿಸಿದ್ದಾರೆ, ಇದನ್ನು 2020 ರ ಮೇ 9 ರಂದು ನಿಗದಿಪಡಿಸಲಾಗಿತ್ತು, ಆದರೆ ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಇದನ್ನು ಮುಂದೂಡಲಾಯಿತು.
ಭಾರತೀಯ ಸೇನೆಯ ತ್ರಿ ಸೇವಾ ದಳದ 75 ಸದಸ್ಯರು ಪೆರೇಡ್ನಲ್ಲಿ ಭಾಗವಹಿಸಲಿದ್ದಾರೆ. ಈಗಾಗಲೇ ಇವರು ಮಾಸ್ಕೋ ತಲುಪಿದ್ದಾರೆ. ರಷ್ಯಾದ ಪಡೆಗಳೊಂದಿಗೆ ಭಾರತೀಯ ಯೋಧರು ವಿಕ್ಟರಿ ಪೆರೇಡ್ನಲ್ಲಿ ಭಾಗವಹಿಸಲಿದ್ದಾರೆ.
ವಿಕ್ಟರಿ ಡೇ ಪೆರೇಡ್ನಲ್ಲಿ ಭಾಗವಹಿಸುವ ಭಾರತೀಯ ಪೆರೇಡ್ ದಳವು ವೀರತ್ವಕ್ಕೆ ಹೆಸರಾದ ಸಿಖ್ ಲೈಟ್ ಇನ್ಫಾಂಟ್ರಿ ರೆಜಿಮೆಂಟ್ನ ಪ್ರಮುಖ ಶ್ರೇಣಿಯ ಅಧಿಕಾರಿಯ ನೇತೃತ್ವದಲ್ಲಿ ಇರಲಿದೆ.
ಈ ರೆಜಿಮೆಂಟ್ ಎರಡನೇ ಮಹಾಯುದ್ಧದಲ್ಲಿ ಶೌರ್ಯದಿಂದ ಹೋರಾಡಿತು ಮತ್ತು ಇತರ ಶೌರ್ಯ ಪ್ರಶಸ್ತಿಗಳಲ್ಲಿ ನಾಲ್ಕು ಬ್ಯಾಟಲ್ ಹೋನರ್ಸ್ ಮತ್ತು ಎರಡು ಮಿಲಿಟರಿ ಕ್ರಾಸ್ ಗಳಿಸಿದ ಹೆಮ್ಮೆಯನ್ನು ಹೊಂದಿದೆ.
ಭಾರತದಲ್ಲಿ ಇರುವ ರಷ್ಯಾದ ರಾಯಭಾರಿ ನಿಕೋಲಾಯ್ ಕುಡಶೇವ್ ಅವರು ಟ್ವಿಟ್ ಮೂಲಕ ರಾಜನಾಥ್ ಸಿಂಗ್ ಅವರಿಗೆ ಶುಭ ಪ್ರಯಾಣವನ್ನು ಹಾರೈಸಿದ್ದಾರೆ.
I wish a safe journey to Defence Minister of strategic partner India Shri @rajnathsingh who is scheduled to depart to Moscow on Monday to witness the Great #VictoryDay Military Parade on June 24#Victory75 #VDay pic.twitter.com/6KUg9FGKCD
— Nikolay Kudashev (@NKudashev) June 20, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.