ನವದೆಹಲಿ: ಪ್ರಸಿದ್ಧ ಬನಾರಸಿ ಪಾನ್, ಬನಾರಸಿ ಲಂಗ್ರಾ (ಮಾವಿನ ತಳಿ), ಬಾರಾಬಂಕಿ ಕೈಮಗ್ಗ ಮತ್ತು ಉತ್ತರ ಪ್ರದೇಶದ ಹಲವಾರು ವಿಶೇಷ ಉತ್ಪನ್ನಗಳು ಪ್ರತಿಷ್ಠಿತ ಭೌಗೋಳಿಕ ಗುರುತು (ಜಿಯೋಗ್ರಾಫಿಕಲ್ ಐಡೆಂಟಿಫಿಕೇಶನ್) ಪ್ರಮಾಣೀಕರಣವನ್ನು ಪಡೆಯಲು ಸಜ್ಜಾಗಿದೆ. ಇದು ಅವುಗಳಿಗೆ ಕಾನೂನು ರಕ್ಷಣೆ ನೀಡಲಿದೆ ಮತ್ತು ಅದರ ರಫ್ತಿಗೆ ಉತ್ತೇಜನ ನೀಡಲಿದೆ.
ನ್ಯಾಷನಲ್ ಬ್ಯಾಂಕ್ ಫಾರ್ ಅಗ್ರಿಕಲ್ಚರ್ ಅಂಡ್ ರೂರಲ್ ಡೆವಲಪ್ಮೆಂಟ್ (ನಬಾರ್ಡ್) ಮತ್ತು ವಾರಣಾಸಿ ಮೂಲದ ಮಾನವ ಕಲ್ಯಾಣ ಸಂಘ (ಎಚ್ಡಬ್ಲ್ಯುಎ) ಸಹಯೋಗದೊಂದಿಗೆ ಎಂಎಸ್ಎಂಇ ವಿಭಾಗದ ಒಡಿಒಪಿ (ಒಂದು ಜಿಲ್ಲೆ ಒಂದು ಉತ್ಪನ್ನ) ಕೋಶವು ಈ ನಿಟ್ಟಿನಲ್ಲಿ ಈಗಾಗಲೇ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ.
ಜಿಐ ಬಗ್ಗೆ ಪರಿಣಿತರಾಗಿರುವ ಎಚ್ಡಬ್ಲ್ಯೂಎ ಅಧ್ಯಕ್ಷ ರಜನಿ ಕಾಂತ್ ಅವರು ಈ ವಿಷಯವನ್ನು ಪರಿಶೀಲಿಸಲು ರಾಜ್ಯ ಸರ್ಕಾರದಿಂದ ನಿಯೋಜಿಸಲ್ಪಟ್ಟಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, “ಜಿಐ ಟ್ಯಾಗ್ ಪಡೆಯುವ ನಿರೀಕ್ಷಿತ ಉತ್ಪನ್ನಗಳ ಪಟ್ಟಿಯಲ್ಲಿ ಬನಾರಸಿ ಪಾನ್, ಬನಾರಸಿ ಲಾಂಗ್ರಾ, ಆಡಮ್ಚಿನಿ ಅಕ್ಕಿ, ರಾಮ್ ನಗರ ಬೈಗನ್ (ಬದನೆಕಾಯಿ), ಬರಾಬಂಕಿ ಕೈಮಗ್ಗ, ಮುಜಫರ್ನಗರ ಗುಡ್ (ಬೆಲ್ಲ), ಆಗ್ರಾ ಚರ್ಮದ ಪಾದರಕ್ಷೆಗಳು, ಬಾಗಪತ್ ಕೈಮಗ್ಗ, ಜಲಾನ್ ಕೈಯಿಂದ ಮಾಡಿದ ಕಾಗದ ಮತ್ತು ಜೈಲ್ಸರ್ ಘಾಟಿ ಘನ್ಘ್ರೂ” ಸೇರಿದೆ ಎಂದಿದ್ದಾರೆ.
ನಿರ್ದಿಷ್ಟ ಭೌಗೋಳಿಕ ಮೂಲವನ್ನು ಹೊಂದಿರುವ ಮತ್ತು ಆ ಮೂಲದ ಗುಣಗಳು ಅಥವಾ ಖ್ಯಾತಿಯನ್ನು ಹೊಂದಿರುವ ಸುಮಾರು 26 ವಿಶೇಷ ಉತ್ಪನ್ನಗಳು ಈಗಾಗಲೇ ಜಿಐ ಪ್ರಮಾಣೀಕರಣವನ್ನು ಪಡೆದಿವೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ತವರು ಜಿಲ್ಲೆಯಾದ ಗೋರಖ್ಪುರದ ಟೆರಾಕೋಟಾ ಕಲೆ ಇತ್ತೀಚಿಗಷ್ಟೇ ಜಿಐ ಟ್ಯಾಗ್ ಅನ್ನು ಪಡೆದುಕೊಂಡಿತ್ತು.
“ಚೆನ್ನೈನಲ್ಲಿರುವ ಜಿಐ ನೋಂದಾವಣೆ ಕಛೇರಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಬಹುತೇಕ ಅಂತಿಮ ಹಂತದಲ್ಲಿದೆ” ಎಂದು ಕಾಂತ್ ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.