ಧರ್ಮಶಾಲಾ: ಲಡಾಖ್ನ ಗಾಲ್ವಾನ್ ಕಣಿವೆಯಲ್ಲಿ ನಡೆದ ಭಾರತ-ಚೀನಾ ನಡುವಣ ಘರ್ಷಣೆಗೆ ಸಂಬಂಧಿಸಿದಂತೆ ಹಲವಾರು ಟಿಬೆಟಿಯನ್ ಎನ್ಜಿಒಗಳು ಶುಕ್ರವಾರ ಚೀನಾ ವಿರುದ್ಧ ವಾಗ್ದಾಳಿಯನ್ನು ನಡೆಸಿವೆ ಮತ್ತು ಚೀನಾ ನಿರ್ಮಿತ ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ಅಂತಾರಾಷ್ಟ್ರೀಯ ಸಮುದಾಯವನ್ನು ಕೋರಿವೆ ಎಂದು ವರದಿಗಳು ತಿಳಿಸಿವೆ.
“ಈ ಸಮಯದಲ್ಲಿ ಟಿಬೆಟಿಯನ್ ಸಮುದಾಯವು ಭಾರತದೊಂದಿಗೆ ನಿಲ್ಲುತ್ತದೆ. ಲಡಾಖ್ನ ಗಡಿಯಲ್ಲಿ ಭಾರತೀಯ ಸೈನಿಕರ ಮೇಲೆ ಚೀನಾ ನಡೆಸಿದ ದಾಳಿಯನ್ನು ನಾವು ಖಂಡಿಸುತ್ತೇವೆ” ಎಂದು ಧರ್ಮಶಾಲಾದ ಮಕ್ಲಿಯೋಡ್ಗಂಜ್ನಲ್ಲಿ ಎನ್ಜಿಒಗಳು ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಜಂಟಿ ಹೇಳಿಕೆಯ ಮೂಲಕ ತಿಳಿಸಲಾಗಿದೆ.
“ಪ್ರಾಣ ಕಳೆದುಕೊಂಡ ಸೈನಿಕರನ್ನು ನಾವು ಗೌರವಿಸುತ್ತೇವೆ ಮತ್ತು ಅವರ ಕುಟುಂಬಗಳಿಗೆ ಭಾವಪೂರ್ಣ ಸಂತಾಪ ಸಲ್ಲಿಸುತ್ತೇವೆ ಎಂದು ಟಿಬೆಟಿಯನ್ ಯೂತ್ ಕಾಂಗ್ರೆಸ್, ನ್ಯಾಷನಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಟಿಬೆಟ್, ಸ್ಟೂಡೆಂಟ್ಸ್ ಫಾರ್ ಎ ಫ್ರೀ ಟಿಬೆಟ್ ಮತ್ತು ಟಿಬೆಟಿಯನ್ ವುಮೆನ್ ಅಸೋಸಿಯೇಶನ್ ಅನ್ನು ಒಳಗೊಂಡ ಎನ್ಜಿಒಗಳ ಗುಂಪು ಹೇಳಿದೆ.
“ಪ್ರಪಂಚದಾದ್ಯಂತದ ಸರ್ಕಾರಗಳು ಮತ್ತು ನಾಯಕರು ಭಾರತದೊಂದಿಗೆ ಒಗ್ಗಟ್ಟಾಗಿ ನಿಲ್ಲುವ ಮೂಲಕ ಚೀನಾ ಮತ್ತು ಅದರ ನೀತಿಯ ವಿರುದ್ಧ ಬಲವಾದ ಕ್ರಮವನ್ನು ತೆಗೆದುಕೊಳ್ಳುವ ನಿರೀಕ್ಷೆಯಿದೆ” ಎಂದು ಅದು ಹೇಳಿದೆ.
ಟಿಬೆಟ್ನ ವಿಮೋಚನೆಯು ಭಾರತದ ಗಡಿಗಳ ಸುರಕ್ಷತೆಯನ್ನು ಖಚಿತಪಡಿಸುತ್ತದೆ ಎಂದು ಎನ್ಜಿಒಗಳು ತಿಳಿಸಿವೆ.
“ಚೀನಾದ ಮಿಲಿಟರಿ ಭಾರತೀಯ ಪ್ರಾಂತ್ಯಕ್ಕೆ ಆಕ್ರಮಣ ಮಾಡುವುದರ ವಿರುದ್ಧ ಅಂತಾರಾಷ್ಟ್ರೀಯ ಸಮುದಾಯವು ತಕ್ಷಣವೇ ಹೇಳಿಕೆ ನೀಡಬೇಕು, ಈ ಮೂಲಕ ಅದನ್ನು ತೀವ್ರವಾಗಿ ಖಂಡಿಸಬೇಕು” ಎಂದು ಹೇಳಿಕೆ ತಿಳಿಸಿದೆ.
ಅಂತರರಾಷ್ಟ್ರೀಯ ಶಾಂತಿಗೆ ಧಕ್ಕೆ ತರುವ ಚೀನಾವು ಟಿಬೆಟ್ ಅನ್ನು ಅಕ್ರಮವಾಗಿ ಆಕ್ರಮಿಸಿಕೊಂಡಿದೆ ಎಂದು ಒತ್ತಿ ಹೇಳಿದ ಅದು, ಭಾರತ ಮತ್ತು ವಿಶ್ವವು ಟಿಬೆಟ್ ಅನ್ನು ಪ್ರತ್ಯೇಕ, ಐತಿಹಾಸಿಕವಾಗಿ ಸ್ವತಂತ್ರ ದೇಶವೆಂದು ಗುರುತಿಸಬೇಕು ಎಂದು ಹೇಳಿದೆ.
ಚೀನಾದಲ್ಲಿ ತಯಾರಿಸಿದ ಉತ್ಪನ್ನಗಳನ್ನು ಬಹಿಷ್ಕರಿಸುವ ಸಲುವಾಗಿ ಅಂತಾರಾಷ್ಟ್ರೀಯ ಸಮುದಾಯವು ಭಾರತೀಯ ತಳಮಟ್ಟದ ಆಂದೋಲನಕ್ಕೆ ಆರ್ಥಿಕವಾಗಿ ಪ್ರತಿಕ್ರಿಯಿಸಬೇಕು ಎಂದು ಅದು ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.