ನವದೆಹಲಿ: ಗಾಲ್ವಾನ್ ಕಣಿವೆಯಲ್ಲಿ ನಡೆದ ಸಂಘರ್ಷಕ್ಕೆ ಸಂಬಂಧಿಸಿದಂತೆ ಚೀನಾವು ಭಾರತದ ಹೇಳಿಕೆಯನ್ನು ಪುನರುಚ್ಛರಿಸಿದೆ. ಕಣಿವೆಯಲ್ಲಿ ಭಾರತದ ಯೋಧರನ್ನು ಅಪಹರಣ ಮಾಡಲಾಗಿಲ್ಲ ಎಂಬುದಾಗಿ ಚೀನಾ ಅಧಿಕೃತವಾಗಿ ಸ್ಪಷ್ಟಪಡಿಸಿದೆ. ಭಾರತೀಯ ಸೇನೆಯು ನಮ್ಮ ಯೋಧರು ಅಪಹರಣವಾಗಿಲ್ಲ ಎಂಬುದಾಗಿ ಗುರುವಾರ ಸ್ಪಷ್ಟಪಡಿಸಿತ್ತು.
ಚೀನಾವು ಭಾರತದ ಇಬ್ಬರು ಅಧಿಕಾರಿಗಳು ಸೇರಿದಂತೆ 10 ಮಂದಿ ಯೋಧರನ್ನು ಅಪಹರಣ ಮಾಡಿದೆ ಎಂಬುದಾಗಿ ಕೆಲವು ಮಾಧ್ಯಮಗಳು ವರದಿ ಮಾಡಿದ್ದವು. ಮಾತ್ರವಲ್ಲದೇ, ಮಾತುಕತೆಯ ಬಳಿಕ ಚೀನಾ ಯೋಧರನ್ನು ಬಿಡುಗಡೆ ಮಾಡಿದೆ ಎಂಬ ವರದಿಗಳೂ ಬರುತ್ತಿವೆ.
ಆದರೆ ಭಾರತ ಮತ್ತು ಚೀನಾ ಇಂತಹ ಯಾವುದೇ ಘಟನೆಗಳು ನಡೆದಿಲ್ಲ ಎಂಬುದನ್ನು ಅಧಿಕೃತವಾಗಿ ಸ್ಪಷ್ಟಪಡಿಸಿವೆ.
ಚೀನಾ ಯಾವುದೇ ಭಾರತೀಯ ಸಿಬ್ಬಂದಿಯನ್ನು ವಶಪಡಿಸಿಕೊಂಡಿಲ್ಲ ಎಂದು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಆವೋ ಲಿಜಿಯಾನ್ ಶುಕ್ರವಾರ ದೈನಂದಿನ ಪತ್ರಿಕಾಗೋಷ್ಠಿಯಲ್ಲಿ ಚೀನಾ-ಭಾರತ ಗಡಿ ಪರಿಸ್ಥಿತಿಯ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರವಾಗಿ ತಿಳಿಸಿದ್ದಾರೆ.
ಗುರುವಾರ, ಉಭಯ ದೇಶಗಳ ನಡುವೆ ಪ್ರಮುಖ ಸಾಮಾನ್ಯ ಮಟ್ಟದ ಮಾತುಕತೆ ಆರು ಗಂಟೆಗಳಿಗಿಂತ ಹೆಚ್ಚು ಕಾಲ ನಡೆಯಿತು ಮತ್ತು ಹೆಚ್ಚಿನ ಮಾತುಕತೆಗೆ ಎರಡೂ ಕಡೆಯವರು ಸಮ್ಮತಿಸುವುದರೊಂದಿಗೆ ಮಾತುಕತೆ ಸೌಹಾರ್ದಯುತ ಮತ್ತು ಸಕಾರಾತ್ಮಕವಾಗಿ ಮುಕ್ತಾಯವಾಯಿತು ಎಂದು ಮೂಲಗಳು ತಿಳಿಸಿವೆ.
ಇದಲ್ಲದೆ, ಜೂನ್ 15-16ರಂದು ಗಾಲ್ವಾನ್ ಕಣಿವೆಯ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಎಲ್ಲ ಸಿಬ್ಬಂದಿಯನ್ನು ಲೆಕ್ಕ ಮಾಡಲಾಗಿದೆ. ಯಾವುದೇ ಸಿಬ್ಬಂದಿ ಕಾರ್ಯಕ್ಷೇತ್ರದಿಂದ ಕಾಣೆಯಾಗಿಲ್ಲ ಎಂದು ಸೇನೆಯು ಪುನರುಚ್ಚರಿಸಿದೆ.
China has not seized any Indian personnel, Chinese Foreign Ministry spokesperson Zhao Lijian told a daily press briefing on Friday in response to a question about the China-India border situation: China’s CGTN pic.twitter.com/ujfIluRKd4
— ANI (@ANI) June 19, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.