ನವದೆಹಲಿ: ಕಲಾವಿದರ ಹಿತಾಸಕ್ತಿಯನ್ನು ರಕ್ಷಣೆ ಮಾಡುವ ಸಲುವಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್)ದ ಅಂಗಸಂಸ್ಥೆಯಾದ ಸಂಸ್ಕಾರ ಭಾರತಿಯು, ಈಶಾನ್ಯದ ಕಲಾವಿದರು ಮತ್ತು ಕುಶಲಕರ್ಮಿಗಳ ಪ್ರಚಾರಕ್ಕಾಗಿ ಮೀಸಲಾಗಿರುವ ಯೂಟ್ಯೂಬ್ ಚಾನೆಲ್ ಅನ್ನು ಪ್ರಾರಂಭಿಸಲು ನಿರ್ಧರಿಸಿದೆ ಎಂದು ವರದಿಗಳು ತಿಳಿಸಿವೆ.
ಕಲಾವಿದರ, ಕರ ಕುಶಲಕರ್ಮಿಗಳ ಯೋಗಕ್ಷೇಮಕ್ಕಾಗಿ ಕೋವಿಡ್-19 ಬಿಕ್ಕಟ್ಟಿನ ಸಂದರ್ಭದಲ್ಲಿ ಈ ನಿರ್ಧಾರವನ್ನು ಪ್ರಸ್ತಾಪಿಸಲಾಯಿತು. ಎಲ್ಲಾ ಅವಕಾಶಗಳ ಹೊರತಾಗಿಯೂ, ತಮ್ಮ ಬೇರುಗಳನ್ನು ಜೀವಂತವಾಗಿರಿಸುತ್ತಿರುವ ಜನರಿಗೆ ಇದು ಪ್ರಯೋಜನಕಾರಿಯಾಗಲಿದೆ.
ಸಂಸ್ಕಾರ ಭಾರತಿಯು ಯೂಟ್ಯೂಬ್ ಚಾನೆಲ್ ʼಅಪ್ನಾ ಪೂರ್ವೊತ್ತರ್ (ನಮ್ಮ ಈಶಾನ್ಯ)ʼ ಅನ್ನು ಪ್ರಾರಂಭಿಸಲು ನಿರ್ಧರಿಸಿದೆ. ಇಲ್ಲಿ ಬರುವ ವಿಷಯಗಳನ್ನು ಈಶಾನ್ಯದ ಕಲಾವಿದರನ್ನು ಬೆಂಬಲಿಸುವ ಸಲುವಾಗಿ ಫೇಸ್ಬುಕ್ ಪುಟಗಳು ಮತ್ತು ಇತರ ಸಾಮಾಜಿಕ ಮಾಧ್ಯಮಗಳಲ್ಲಿ ಕೂಡ ಪ್ರಸಾರ ಮಾಡಲಾಗುತ್ತದೆ. ಚಾನೆಲ್ ಜೂನ್ 21 ರಿಂದ ಆರಂಭಗೊಳ್ಳುವ ನಿರೀಕ್ಷೆ ಇದೆ.
ಶಿಲ್ಪಿಗಳು, ಸೆಣಬು ಕಲಾವಿದರು, ಸಾಂಪ್ರದಾಯಿಕ ಜಾನಪದ ನೃತ್ಯಗಾರರು ಮತ್ತು ಗಾಯಕರು, ಯುವಕರು ಮತ್ತು ಅವರ ಗುಂಪುಗಳು ಮತ್ತು ಬಿಹುವಿನಂತಹ ಪ್ರಮುಖ ಉತ್ಸವಗಳಲ್ಲಿ ಭಾಗವಹಿಸುವ ಮೂಲಕ ಜೀವನೋಪಾಯವನ್ನು ಗಳಿಸಿದವರು ಸೇರಿದಂತೆ 500 ಕಲಾವಿದರ ಪಟ್ಟಿಯನ್ನು ಒಟ್ಟುಗೂಡಿಸಿದ್ದು, ತನ್ನ ಯೂಟ್ಯೂಬ್ ಚಾನೆಲ್ನಲ್ಲಿ ಇವರ ಕೌಶಲ್ಯಗಳನ್ನು ಪ್ರಸಾರ ಮಾಡಲಿದೆ. ವರ್ಣಚಿತ್ರಕಾರರು ಮತ್ತು ಕುಶಲಕರ್ಮಿಗಳು ಕೂಡ ತಮ್ಮ ಕಲೆಯನ್ನು ಇಲ್ಲಿ ಪ್ರದರ್ಶಿಸಲು ಅವಕಾಶ ಪಡೆಯಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.