ಮುಂಬಯಿ: ಕೊರೋನಾ ರಣಕೇಕೆಗೆ ಜಗತ್ತು ಅಕ್ಷರಶಃ ತತ್ತರಿಸಿ ಹೋಗಿದೆ. ಈ ಸಾಂಕ್ರಾಮಿಕ ರೋಗ ಜನರ ತುತ್ತಿನ ಚೀಲಕ್ಕೂ ಹೊಡೆತ ನೀಡಿದೆ. ಭಾರತದಲ್ಲಿಯೂ ಕೊರೋನಾ ಆರ್ಭಟ ಜೋರಾಗಿದ್ದು, ಮಹಾರಾಷ್ಟ್ರ, ಗುಜರಾತ್ ಸೇರಿದಂತೆ ಹೆಚ್ಚಿನ ರಾಜ್ಯಗಳು ತೀವ್ರ ಸಂಕಷ್ಟಕ್ಕೆ ಒಳಗಾಗಿವೆ. ಈ ಸಂದರ್ಭದಲ್ಲಿ ತಮ್ಮ ಜೀವ, ಜೀವನವನ್ನು ಲೆಕ್ಕಿಸದೆ ಅದೆಷ್ಟೋ ಆರೆಸ್ಸೆಸ್ ಕಾರ್ಯಕರ್ತರು ದೇಶದ ಮೂಲೆ ಮೂಲೆಯಲ್ಲಿಯೂ ಜನ ಸೇವೆಯನ್ನು ನಿಸ್ವಾರ್ಥ ಮನೋಭಾವದಿಂದ ಮಾಡುತ್ತಿದ್ದು ದೇಶದ ಇತರ ಸಂಘಟನೆಗಳಿಗೂ ಮಾದರಿಗಳಾಗುತ್ತಿದ್ದಾರೆ.
ಮಹಾರಾಷ್ಟ್ರದ 45 ಮಂದಿ ಸ್ವಯಂಸೇವಕರ 15 ತಂಡ ಮುಂಬೈನ ಘಾಟ್ಕೋಪರ್, ರಾಮಭಾಯ್ ಅಂಬೇಡ್ಕರ್ ನಗರಗಳಲ್ಲಿ ಸಾರ್ವಜನಿಕರ ಮಾಸ್ ಸ್ಕ್ರೀನಿಂಗ್ ತಪಾಸಣೆಯನ್ನು ನಡೆಸುವುದರಲ್ಲಿ ತೊಡಗಿಸಿಕೊಂಡಿದೆ. 5 ವೈದ್ಯಾಧಿಕಾರಿಗಳಿಂದ ಪೂರಕ ತರಬೇತಿಯನ್ನು ಪಡೆದು, ನಂತರದಲ್ಲಿ ಸಾರ್ವಜನಿಕರನ್ನು ತಪಾಸಣೆ ಮಾಡಿದೆ. ಒಂದೇ ದಿನದಲ್ಲಿ ಸುಮಾರು 2061 ಜನರ ಕೊರೋನಾ ತಪಾಸಣೆಯನ್ನು ಸ್ವಯಂಸೇವಕರ ತಂಡ ನಡೆಸಿಕೊಟ್ಟಿದೆ.
ಈ ಸೇವೆಯಲ್ಲಿ ತೊಡಗಿಸಿಕೊಂಡಿರುವ ಆರೆಸ್ಸೆಸ್ ಸ್ವಯಂಸೇವಕರ 15 ತಂಡ ಸ್ಥಳೀಯ ಸ್ವಯಂಸೇವಕ ಸಂಘಗಳು, ಮಿತ್ರ ಮಂಡಳಿಗಳು, ಸಂಸ್ಥೆಗಳಿಂದಲೂ ನೆರವನ್ನು ಪಡೆದುಕೊಂಡು ಕೊರೋನಾ ಮಾಸ್ ಟೆಸ್ಟಿಂಗ್ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿವೆ. ವೈದ್ಯಕೀಯ ಸಿಬ್ಬಂದಿಗಳು ಕೊರೋನಾದಿಂದ ತೀವ್ರ ತೊಂದರೆ ಅನುಭವಿಸುತ್ತಿರುವ ರೋಗಿಗಳಿಗೆ ಚಿಕಿತ್ಸೆ ನೀಡುವಲ್ಲಿ ಗಮನಹರಿಸುತ್ತಿದ್ದರೆ, ಆರೆಸ್ಸೆಸ್ ಸ್ವಯಂಸೇವಕರ ತಂಡ ಸಾರ್ವಜನಿಕ ವಲಯದಲ್ಲಿ ಮಾಸ್ ಟೆಸ್ಟ್ ನಡೆಸುವ ಮೂಲಕ ಶಂಕಿತರು, ಸೋಂಕಿತರನ್ನು ಪತ್ತೆಹಚ್ಚುವಲ್ಲಿ ಅವರಿಗೆ ನೆರವಾಗುತ್ತಿದ್ದಾರೆ.
ಕೊರೋನಾ ಸಂದರ್ಭದಲ್ಲಿ ದೇಶವೇ ಲಾಕ್ಡೌನ್ ಸ್ಥಿತಿಗೆ ತಲುಪಿದಾಗ, ಅನೇಕ ಬಡವರು, ವಲಸಿಗರಿಗೆ ಆಹಾರ, ದವಸ ಧಾನ್ಯಗಳನ್ನು, ಔಷಧಗಳನ್ನು, ವಸತಿ ಸೌಕರ್ಯ ಹೀಗೆ ಹತ್ತು ಹಲವು ವಿಧದಲ್ಲಿ ಆರೆಸ್ಸೆಸ್ ಸ್ವಯಂಸೇವಕರು ನೆರವು ನೀಡುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಸದ್ಯ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗಿರುವ ಮಹಾರಾಷ್ಟ್ರದಲ್ಲಿ ಸಾರ್ವಜನಿಕರಿಗೆ ಕೊರೋನಾ ಟೆಸ್ಟಿಂಗ್, ಸ್ಕ್ರೀನಿಂಗ್ ನಡೆಸುವ ಮೂಲಕವೂ ಆರೆಸ್ಸೆಸ್ ಸ್ವಯಂಸೇವಕರ ತಂಡ ತೊಡಗಿಸಿಕೊಳ್ಳುವ ಮೂಲಕ ಮಾದರಿ ಕಾರ್ಯ ಮಾಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.