ನವದೆಹಲಿ: ಪ್ರಧಾನಮಂತ್ರಿಯ ಸ್ವಾವಲಂಬಿ ಭಾರತದ ಕರೆಗೆ ಅನುಗುಣವಾಗಿ, ಕಲ್ಲಿದ್ದಲು ಸಚಿವಾಲಯವು ಗುರುವಾರ ವಾಣಿಜ್ಯ ಗಣಿಗಾರಿಕೆಗಾಗಿ 41 ಬ್ಲಾಕ್ಗಳ ಹರಾಜು ಪ್ರಕ್ರಿಯೆಯನ್ನು ಪ್ರಾರಂಭಿಸುತ್ತಿದೆ. ಇಂಧನ ಅಗತ್ಯಗಳನ್ನು ಪೂರೈಸುವಲ್ಲಿ ಸ್ವಾವಲಂಬನೆ ಸಾಧಿಸುವ ಮತ್ತು ಕೈಗಾರಿಕಾ ಅಭಿವೃದ್ಧಿಯನ್ನು ಹೆಚ್ಚಿಸುವ ಗುರಿಯನ್ನು ಇದು ಹೊಂದಿದೆ ಎಂದು ವರದಿಗಳು ತಿಳಿಸಿವೆ.
ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟನಾ ಕಾರ್ಯಕ್ರಮವನ್ನು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಉದ್ದೇಶಿಸಿ ಮಾತನಾಡಲಿದ್ದಾರೆ. ಗಣಿಗಾರಿಕೆ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸುವ ತಮ್ಮ ದೂರದೃಷ್ಟಿಯನ್ನು ಈ ವೇಳೆ ಅವರು ಹಂಚಿಕೊಳ್ಳುವ ನಿರೀಕ್ಷೆ ಇದೆ.
ಈ ಕಲ್ಲಿದ್ದಲು ಘಟಕಗಳ ವಾಣಿಜ್ಯ ಗಣಿಗಾರಿಕೆಯು ಮುಂದಿನ ಐದರಿಂದ ಏಳು ವರ್ಷಗಳಲ್ಲಿ ದೇಶದಲ್ಲಿ ಸುಮಾರು 33,000 ಕೋಟಿ ರೂ. ಬಂಡವಾಳ ಹೂಡಿಕೆಯನ್ನು ಗಳಿಸುವ ನಿರೀಕ್ಷೆಯಿದೆ ಎಂದು ಕಲ್ಲಿದ್ದಲು ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಬ್ಲಾಕ್ಗಳು ರಾಜ್ಯ ಸರ್ಕಾರಗಳಿಗೆ ವಾರ್ಷಿಕವಾಗಿ 20,000 ಕೋಟಿ ರೂಪಾಯಿಗಳ ಆದಾಯವನ್ನು ನೀಡಲಿವೆ ಎಂದು ಅದು ಹೇಳಿದೆ.
ಕಲ್ಲಿದ್ದಲು ಗಣಿಗಳ ಈ ಹರಾಜು ಪ್ರಕ್ರಿಯೆಯನ್ನು ಪ್ರಾರಂಭಿಸುವುದು ‘ಆತ್ಮನಿರ್ಭರ ಭಾರತ ಅಭಿಯಾನ’ ಅಡಿಯಲ್ಲಿ ಮಾಡಿದ ಪ್ರಕಟಣೆಗಳ ಸರಣಿಯ ಭಾಗವಾಗಿದೆ ಎಂದು ಸಚಿವಾಲಯ ತಿಳಿಸಿದೆ.
“ವಿದ್ಯುತ್, ಉಕ್ಕು, ಅಲ್ಯೂಮಿನಿಯಂ, ಮುಂತಾದ ಅನೇಕ ಮೂಲಭೂತ ಕೈಗಾರಿಕೆಗಳಿಗೆ ಪ್ರಮುಖ ಮೂಲವಾಗಿರುವ ಗಣಿಗಾರಿಕೆ ಕ್ಷೇತ್ರದಲ್ಲಿ ‘ಸ್ವಾವಲಂಬನೆ’ ಸಾಧಿಸುವ ನಿಟ್ಟಿನಲ್ಲಿ ದೇಶಕ್ಕೆ ತನ್ನ ದೃಷ್ಟಿಕೋನವನ್ನು ವಿವರಿಸಲು ಹರಾಜು ಪ್ರಕ್ರಿಯೆಯ ಪ್ರಾರಂಭದ ಸಂದರ್ಭದಲ್ಲಿ ಪ್ರಧಾನಿ ಭಾಷಣ ಮಾಡಲಿದ್ದಾರೆ” ಎಂದು ಹೇಳಿಕೆ ತಿಳಿಸಿದೆ.
“ಕಲ್ಲಿದ್ದಲು ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸುವ ಉದ್ದೇಶದಿಂದ, ಕಲ್ಲಿದ್ದಲು ಸಚಿವಾಲಯವು ಎಫ್ಐಸಿಸಿಐ ಸಹಯೋಗದೊಂದಿಗೆ ಸಿಎಂ (ಎಸ್ಪಿ) ಕಾಯ್ದೆ ಮತ್ತು ಎಂಎಂಡಿಆರ್ ಕಾಯ್ದೆಯಡಿ 41 ಕಲ್ಲಿದ್ದಲು ಗಣಿಗಳನ್ನು ಹರಾಜು ಮಾಡುವ ಪ್ರಕ್ರಿಯೆಯನ್ನು ಪ್ರಾರಂಭಿಸುತ್ತಿದೆ” ಎಂದು ಅದು ಹೇಳಿದೆ.
225 ಮಿಲಿಯನ್ ಟನ್ (ಎಂಟಿ) ಉತ್ಪಾದನೆಯ ಗರಿಷ್ಠ ದರದ ಸಾಮರ್ಥ್ಯವನ್ನು ಸಾಧಿಸಿದ ನಂತರ, ಈ ಗಣಿಗಳು 2025-26ರಲ್ಲಿ ದೇಶದ ಒಟ್ಟು ಕಲ್ಲಿದ್ದಲು ಉತ್ಪಾದನೆಯಲ್ಲಿ ಶೇಕಡಾ 15 ರಷ್ಟು ಕೊಡುಗೆ ನೀಡುತ್ತವೆ ಎಂದು ಸರ್ಕಾರ ಹೇಳಿದೆ.
ಇದು 2.8 ಲಕ್ಷಕ್ಕೂ ಹೆಚ್ಚು ಜನರಿಗೆ ಉದ್ಯೋಗ ಸೃಷ್ಟಿಗೆ ಕಾರಣವಾಗುತ್ತದೆ. ಸರಿಸುಮಾರು 70,000 ಜನರಿಗೆ ನೇರ ಉದ್ಯೋಗ ಮತ್ತು ಸುಮಾರು 2,10,000 ಜನರಿಗೆ ಪರೋಕ್ಷ ಉದ್ಯೋಗ ನೀಡಲಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.