ನವದೆಹಲಿ: ಕೇಂದ್ರ ಟೆಲಿಕಾಂ ಸಚಿವಾಲಯವು ತನ್ನ ವ್ಯಾಪ್ತಿಯಡಿ ಬರುವ ಎಲ್ಲಾ ಟೆಲಿಕಾಂ ಘಟಕಗಳಿಗೆ ಅವುಗಳ ಖರೀದಿಗಳನ್ನು ‘ಮೇಡ್ ಇನ್ ಇಂಡಿಯಾ’ ಉತ್ಪನ್ನಗಳಿಗೆ ಸೀಮಿತಗೊಳಿಸುವಂತೆ ನಿರ್ದೇಶಿಸಿದೆ. ಗಾಲ್ವಾನ್ ಕಣಿವೆಯಲ್ಲಿ ಭಾರತೀಯ ಮತ್ತು ಚೀನಾದ ಸೈನಿಕರ ನಡುವೆ ಹಿಂಸಾತ್ಮಕ ಮುಖಾಮುಖಿಯಾದ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ. ಚೀನಾದ ಕುತಂತ್ರದ ಪರಿಣಾಮವಾಗಿ 20 ಸೈನಿಕರು ಕರ್ತವ್ಯದ ವೇಳೆ ಪ್ರಾಣ ಕಳೆದುಕೊಂಡಿದ್ದಾರೆ.
ಇತ್ತೀಚಿನ ಮಾಹಿತಿಯ ಪ್ರಕಾರ, 4ಜಿ ಅಪ್ಗ್ರೇಡೇಶನ್ (ಉನ್ನತೀಕರಣ) ಸಂದರ್ಭದಲ್ಲಿ ಚೀನಿ ಪರಿಕರಗಳನ್ನು ಬಳಕೆ ಮಾಡದಂತೆ ಟೆಲಿಕಾಂ ಸಚಿವಾಲಯವು ಬಿಎಸ್ಎನ್ಎಲ್, ಎಂಟಿಎನ್ಎಲ್ ಮತ್ತು ಇತರ ಟೆಲಿಕಾಂ ಅಂಗಸಂಸ್ಥೆಗಳಿಗೆ ಸೂಚನೆ ನೀಡಿದೆ. ಇದಲ್ಲದೆ, “ಆತ್ಮನಿರ್ಭರ ಭಾರತ”ಕ್ಕೆ ಕೇಂದ್ರದ ಉತ್ತೇಜನದ ಭಾಗವಾಗಿ ಭಾರತದಲ್ಲಿ ತಯಾರಾದ ಸರಕುಗಳ ಖರೀದಿಯನ್ನು ತಮ್ಮ ಆದ್ಯತೆಯನ್ನಾಗಿ ಮಾಡುವಂತೆ ಸಂಬಂಧಪಟ್ಟ ಎಲ್ಲಾ ಇಲಾಖೆಗಳಿಗೆ ಸಚಿವಾಲಯ ನಿರ್ದೇಶನ ನೀಡಿದೆ ಎಂದು ತಿಳಿಸಿವೆ.
ಟೆಲಿಕಾಂ ಸಚಿವಾಲಯದ ಈ ನಿರ್ಧಾರವು ಟೆಲಿಕಾಂ ಸಂಸ್ಥೆಗಳ 4 ಜಿ ಅಪ್ಗ್ರೆಡೇಶನ್ ಖರೀದಿಯಲ್ಲಿ ಪ್ರಮುಖ ಪಾತ್ರ ವಹಿಸುವ ನಿರೀಕ್ಷೆ ಇದೆ.
ಸರ್ಕಾರದ ಮೂಲಗಳ ಪ್ರಕಾರ, ಟೆಲಿಕಾಂ ಇಲಾಖೆ ತನ್ನ ಅಂಗಸಂಸ್ಥೆಗಳಿಗೆ 4ಜಿ ಸೌಲಭ್ಯಗಳ ನವೀಕರಣಕ್ಕಾಗಿ ನೀಡಿದ ಟೆಂಡರ್ಗಳನ್ನು ಪುನಃ ಪರಿಶೀಲಿಸುವಂತೆ ಆದೇಶಿಸಿದೆ.
ಮೇ 31 ರಂದು ಭಾರತ್ ಸಂಚಾರ್ ನಿಗಮ್ (ಬಿಎಸ್ಎನ್ಎಲ್) ಈ ವರ್ಷದ ಮಾರ್ಚ್ನಲ್ಲಿ ನೀಡಿದ್ದ 8,697 ಕೋಟಿ 4 ಜಿ ಟೆಂಡರ್ ಅನ್ನು ರದ್ದುಗೊಳಿಸಿತು. ಸಾರ್ವಜನಿಕ ವಲಯದ ಖರೀದಿ ಮಾನದಂಡಗಳನ್ನು ಅನುಸರಿಸಲು ಸಾರ್ವಜನಿಕ ವಲಯದ (ಪಿಎಸ್ಯು) ವಿಫಲವಾಗಿದೆ ಎಂಬ ಆರೋಪದಿಂದ ರದ್ದತಿ ನಿರ್ಧಾರ ತೆಗೆದುಕೊಳ್ಳಲಾಯಿತು.
ಈ ನಿರ್ಧಾರವು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಕೋವಿಡ್ ನಂತರದ ಜಗತ್ತಿನಲ್ಲಿ “ಆತ್ಮನಿರ್ಭರ ಭಾರತ” (ಸ್ವಾವಲಂಬಿ ಭಾರತ) ನಿರ್ಮಾಣಕ್ಕಾಗಿ ನೀಡಿದ ಕರೆಯಿಂದ ಪ್ರೇರಣೆಯನ್ನು ಪಡೆದುಕೊಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.