ನವದೆಹಲಿ: ಕೊರೋನಾ ಎಂಬ ಮಹಾಮಾರಿಯನ್ನು ಜಗತ್ತಿಗೆ ಹಂಚಿದ ಚೀನಾ ಕಾಲ್ಕೆರೆದುಕೊಂಡು ಲಡಾಕ್ ಗಡಿಯಲ್ಲಿ ಭಾರತದೊಂದಿಗೆ ವಿನಾ ಕಾರಣ ಕದನ ಮಾಡುತ್ತಿದೆ. ಕುತಂತ್ರ ಬುದ್ಧಿಗೆ ಹೆಸರುವಾಸಿಯಾಗಿರುವ ಚೀನಾಗೆ ಆರ್ಥಿಕ ಹೊಡೆತ ನೀಡುವ ಸಲುವಾಗಿ ಭಾರತೀಯರು ಚೀನಾ ವಸ್ತುಗಳನ್ನು ಬಹಿಷ್ಕರಿಸುವಂತೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಂಗ ಸಂಸ್ಥೆ ಸ್ವದೇಶೀ ಜಾಗರಣಾ ಮಂಚ್ನ ಸಹ ಸಂಚಾಲಕ ಅಶ್ವಿನಿ ಮಹಾಜನ್ ಜನರಿಗೆ ಕಿವಿಮಾತು ಹೇಳಿದ್ದಾರೆ.
ಅಲ್ಲದೆ, ಭಾರತದ ಸರ್ಕಾರಿ ಟೆಂಡರ್ನಲ್ಲಿ ಪಾಲು ಪಡೆದಿರುವ ಚೀನಾದ ಎಲ್ಲಾ ಕಂಪನಿಗಳಿಗೆ ನಿಷೇಧ ಹೇರುವಂತೆಯೂ ಮಂಚ್ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದೆ. ಚೀನಾ ವಸ್ತುಗಳನ್ನು ಬಹಿಷ್ಕಾರ ಮಾಡುವ ಮೂಲಕವೇ ಚೀನಾದ ನರಿ ಬುದ್ಧಿಗೆ ತಕ್ಕ ಪಾಠ ಕಲಿಸಬೇಕು, ಆ ಮೂಲಕ ಚೀನಾದ ಜೊತೆಗಿನ ಗಡಿ ಸಂಘರ್ಷದಲ್ಲಿ ಹುತಾತ್ಮರಾದ ವೀರ ಯೋಧರಿಗೆ ನಮನ ಸಲ್ಲಿಸಬೇಕು ಎಂದು ಸ್ವದೇಶಿ ಮಂಚ್ ತಿಳಿಸಿದೆ.
ನಾಲ್ಕು ದಶಕಗಳ ಬಳಿಕ ಚೀನಾ ಗಡಿ ಖ್ಯಾತೆ ತೆಗೆದಿದೆ. ಲಡಾಕ್ನ ಗುಲ್ವಾನ್ ಕಣಿವೆಯ 14 ನೇ ಕೇಂದ್ರದ ಬಳಿ ಅಪ್ರಚೋದಿತ ದಾಳಿಗಳನ್ನು ನಡೆಸಿ ಶಾಂತಿಪ್ರಿಯ ಭಾರತವನ್ನು ಕೆಣಕುತ್ತಿದೆ. ಈ ಸಂಘರ್ಘದಲ್ಲಿ ಭಾರತದ 20 ವೀರಪುತ್ರರ ಬಲಿದಾನವಾಗಿದೆ. ಇದು ಅಕ್ಷಮ್ಯ. ಚೀನಾಕ್ಕೆ ಯುದ್ಧದ ಮೂಲಕ ಉತ್ತರ ನೀಡಲು ಭಾರತದ ಸೈನಿಕರು ಸದಾ ಸಿದ್ಧರಿದ್ದಾರೆ. ಆದರೆ ಆರ್ಥಿಕ ಹೊಡೆತ ನೀಡುವ ಸಲುವಾಗಿ ಇಡೀ ದೇಶದ ಜನರು ಪಣ ತೊಡಬೇಕು. ಇಂದಿನಿಂದಲೇ ಚೀನಾದ ವಸ್ತುಗಳ ಬಳಕೆಯನ್ನು ನಿಷೇಧಿಸಬೇಕು. ನಟರು, ಕ್ರಿಕೆಟಿಗರು, ಮತ್ತಿತರ ಗಣ್ಯರು ಚೀನಾ ವಸ್ತುಗಳ ಬಳಕೆಗೆ ಜನರಿಗೆ ಪ್ರೇರಣೆ ನೀಡದಂತೆಯೂ ಸ್ವದೇಶೀ ಜಾಗರಣ ಮಂಚ್ ತಿಳಿಸಿದೆ.
ಇನ್ನು ಅಖಿಲ ಭಾರತೀಯ ವ್ಯಾಪಾರಿಗಳ ಒಕ್ಕೂಟ ಚೀನಾದಿಂದ ಆಮದು ಬಹಿಷ್ಕರಿಸುವ ಉದ್ದೇಶದಿಂದ ಈಗಾಗಲೇ 450 ವಸ್ತುಗಳನ್ನು ಪಟ್ಟಿ ಮಾಡಿದ್ದು, ಆ ಮೂಲಕ ನರಿ ಬುದ್ಧಿಯ ಚೀನಾದ ಜೊತೆಗಿನ ವ್ಯವಹಾರಕ್ಕೆ ಎಳ್ಳು ನೀರು ಬಿಡಲು ನಿರ್ಧರಿಸಿದೆ. ಜನರೂ ಸಹ ಚೀನಾದ ವಸ್ತುಗಳ ಬಳಕೆಯನ್ನು ನಿಷೇಧಿಸುವ ಮೂಲಕ ಅದರ ಆರ್ಥಿಕತೆಯ ಬುಡವನ್ನು ಅಲ್ಲಾಡಿಸಬೇಕಾಗಿದ್ದು, ಆ ಮೂಲಕ ಚೀನಾದ ಸೊಕ್ಕಡಗಿಸಬೇಕಾಗಿದೆ ಎಂದು ಸ್ವದೇಶೀ ಮಂಚ್ ಅಭಿಪ್ರಾಯ ವ್ಯಕ್ತಪಡಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.