ಹೈದರಾಬಾದ್: ಆಂಧ್ರಪ್ರದೇಶದ ನೆಲ್ಲೂರಿನ ಚೆಜರ್ಲ ಮಂಡಲದಲ್ಲಿ ಅದ್ಭುತವೊಂದು ನಡೆದಿದೆ. 80 ವರ್ಷಗಳ ಹಿಂದೆ ನದಿಯ ಮರಳಿನಲ್ಲಿ ಹೂತು ಹೋಗಿದ್ದ ಶೀವ ದೇಗುಲವೊಂದು ಮಂಗಳವಾರ ಪತ್ತೆಯಾಗಿದೆ.
ನಾಗೇಶ್ವರ ದೇಗುಲ ಇದಾಗಿದ್ದು, ಸುಮಾರು 200 ವರ್ಷ ಹಳೆಯದು ಎಂದು ನಂಬಲಾಗಿದೆ. ಸುಮಾರು 80 ವರ್ಷಗಳ ಹಿಂದೆ ಇದು ಪೆನ್ನಾ ನದಿ ಮರಳಿನಲ್ಲಿ ಮುಳುಗಿ ಹೋಯಿತು ಎಂದು ಹೇಳಲಾಗುತ್ತದೆ.
ಪೆನ್ನ ನದಿಯು ತನ್ನ ಹರಿಯುವ ದಿಕ್ಕನ್ನು ಬದಲಾಯಿಸಿಕೊಂಡ ಹಿನ್ನಲೆಯಲ್ಲಿ ದೇಗುಲ ಮುಳುಗಿ ಹೋಗಿತ್ತು. ಗ್ರಾಮಸ್ಥರು ಕೂಡ ಬೇರೆ ದಿಕ್ಕಿನತ್ತ ಹೋದರು ಎನ್ನಲಾಗಿದೆ.
ಕೆಲವು ಆಸಕ್ತ ಗ್ರಾಮಸ್ಥರು ಹಣ ಸಂಗ್ರಹ ಮಾಡಿ ದೇಗುಲವನ್ನು ಹುಡುಕುವ ಕಾರ್ಯ ಮಾಡಿದ್ದಾರೆ. ಹಲವು ದಿನಗಳವರೆಗೆ ಗುಂಡಿ ತೋಡಿದ ಬಳಿಕ ದೇಗುಲದ ಶಿಖರ ಗೋಚರಿಸಿದೆ.
“200 ವರ್ಷ ಹಳೆಯ ಈ ದೇಗುಲ ಗ್ರಾಮಸ್ಥರ ನಡುವೆ ಜನಪ್ರಿಯವಾದದ್ದಾಗಿತ್ತು. ಸುಮಾರು 75 ರಿಂದ 80 ವರ್ಷಗಳ ಹಿಂದೆ ಈ ದೇಗುಲ ಮರಳಿನಲ್ಲಿ ಹೂತು ಹೋಯಿತು ಎಂದು ನಮ್ಮ ಹಿರಿಯರು ಹೇಳುತ್ತಿದ್ದರು” ಎಂದು ಪೆರುಮಲ್ಲಪದು ಸ್ಥಳೀಯ ನಿವಾಸಿ ವರ ಪ್ರಸಾದ್ ಹೇಳಿದ್ದಾರೆ.
ಗಲಿಪಲ ಸುದರ್ಶನ್ ಎಂಬುವವರು ದೇಗುಲ ಶೋಧನೆ ಕಾರ್ಯಕ್ಕೆ ಮುಂದಾದರು ಎಂದು ಅವರು ಹೇಳಿದ್ದಾರೆ.
ಇದೀಗ ಗ್ರಾಮಸ್ಥರು ದೇಗುಲವನ್ನು ಮರು ನಿರ್ಮಾಣ ಮಾಡುವ ಯೋಜನೆಯಲ್ಲಿದ್ದಾರೆ. ಆದರೆ, ಅವರು ದೇಗುಲದ ಸ್ಥಿತಿಗತಿ ಬಗ್ಗೆ ಇನ್ನಷ್ಟೇ ಅರಿತುಕೊಳ್ಳಬೇಕಿದೆ. ದೇಗುದೊಳಗೆ ಶಿವನ ಮೂರ್ತಿ ಚೆನ್ನಾಗಿಯೇ ಇದೆ ಎಂದು ಹೇಳಲಾಗುತ್ತಿದೆ.
ಈ ಬಗ್ಗೆ ನಾವು ಅರ್ಚಕರ ಮತ್ತು ಹಿರಿಯರ ಸಲಹೆ ಪಡೆಯಲಿದ್ದೇವೆ ಎಂದು ಪ್ರಸಾದ್ ಹೇಳಿದ್ದಾರೆ.
ನದಿಯ ಮರಳಿನ ಆಳದಿಂದ ದೇಗುಲವನ್ನು ಸಂಪೂರ್ಣವಾಗಿ ಹೊರ ತೆಗೆಯುವ ಪ್ರಯತ್ನವನ್ನು ಗ್ರಾಮಸ್ಥರು ಮಾಡುತ್ತಿದ್ದಾರೆ.
Nellore: A temple-like structure was unearthed during sand mining in Penna river bed near Perumallapadu village. Locals claim that it is a 200-year-old Shiva temple. #AndhraPradesh (16.06.2020) pic.twitter.com/uh7JisGg5m
— ANI (@ANI) June 16, 2020
Wonder!! Ancient temple of Nageshwara Swamy buried in the river sand found accidentally in Nellore Dist. The architectural marvel believed to have been consecrated by Lord Parashurama got buried after river Penna changed its course. #AndhraPradesh pic.twitter.com/i5YEsS6VmL
— Aashish (@Ashi_IndiaToday) June 17, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.